Webdunia - Bharat's app for daily news and videos

Install App

ಓಡಿಸ್ಸಾ ದಿಂದ ಗಾಂಜಾ ಚಾಕಲೇಟ್

Webdunia
ಶುಕ್ರವಾರ, 4 ಮಾರ್ಚ್ 2022 (20:08 IST)
ಒಡಿಸ್ಸಾದಿಂದ ರಾಜ್ಯಕ್ಕೆ ಗಾಂಜಾ ಚಾಕ್ಲೇಟ್ ತರ್ತಿದ್ದ ಇವರು 1ರೂಪಾಯಿಂದ 20ರೂಪಾಯಿವರೆಗೂ ಸೇಲ್ ಮಾಡ್ತಿದ್ರು. ಅದೂ ಕೂಡ ಜಿಗಣಿಯಲ್ಲಿರೋ ತಮ್ಮ ಸಂಬಂಧಿಯ ಪಾನ್ಶಾಪ್ನಲ್ಲಿ ಚಾರ್ಮಿನಾರ್ ಗೋಲ್ಡ್ ಹೆಸ್ರಲ್ಲಿ ಮಾರುತ್ತಿದ್ರು.
ಗಾಂಜಾ ಮಾರಾಟ ಮಾಡುವವರನ್ನು ಪೊಲೀಸರು ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಆದ್ರೆ ಖದೀಮರು ಪೊಲೀಸರ ಕಣ್ತಪ್ಪಿಸಿ ನಾನಾ ದಾರಿಗಳನ್ನು ಹಿಡಿದು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಸದ್ಯ ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರದೀಪ್ ಕುಮಾರ್ ಮತ್ತು ಎಸ್.ಕೆ ಸಜಾನ್ ಬಂಧಿತ ಆರೋಪಿಗಳು.
 
ಬೆಂಗಳೂರಿನ ವೆಲ್ಡಿಂಗ್ ಶಾಪ್ವೊಂದ್ರಲ್ಲಿ ಕೆಲ್ಸ ಮಾಡ್ತಿದ್ದ ಆರೋಪಿ ಪ್ರದೀಪ್ ಕುಮಾರ್ ಮತ್ತು ಎಸ್.ಕೆ ಸಜಾನ್ ಇಬ್ರೂ ದುಡ್ಡು ಮಾಡೋಕೆ ಅಡ್ಡದಾರಿ ಹಿಡಿದಿದ್ರು. ಒಡಿಸ್ಸಾದಿಂದ ರಾಜ್ಯಕ್ಕೆ ಗಾಂಜಾ ಚಾಕ್ಲೇಟ್ ತರ್ತಿದ್ದ ಇವರು 1ರೂಪಾಯಿಂದ 20ರೂಪಾಯಿವರೆಗೂ ಸೇಲ್ ಮಾಡ್ತಿದ್ರು. ಅದೂ ಕೂಡ ಜಿಗಣಿಯಲ್ಲಿರೋ ತಮ್ಮ ಸಂಬಂಧಿಯ ಪಾನ್ಶಾಪ್ನಲ್ಲಿ ಚಾರ್ಮಿನಾರ್ ಗೋಲ್ಡ್ ಹೆಸ್ರಲ್ಲಿ ಮಾರುತ್ತಿದ್ರು. ಹಾಲು, ನೀರು ಹಾಗೇ ಪಾನ್ಬೀಡಾದಲ್ಲಿ ಹಾಕಿ ತಿನ್ನುವಂತೆ ತಾವೇ ಐಡಿಯಾ ಕೊಡ್ತಿದ್ರು. ಈ ನಡುವೆ ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡಲು ಮಾಲು ತರ್ತಿದ್ದಾರೆ ಅನ್ನೋ ಮಾಹಿತಿ ಪಡೆದು ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್ ಮತ್ತು ಸಜಾನ್ ಲಾಕ್ ಆಗಿದ್ದಾರೆ. ಆರಂಭದಲ್ಲಿ ಇವು ನಾರ್ಮಲ್ ಚಾಕ್ಲೇಟ್ಗಳು ಅಂತಾ ನಂಬಿಸೋಕೆ ಟ್ರೈ ಮಾಡಿದ್ದಾರೆ. ಆದ್ರೆ ಪೊಲೀಸ್ರಿಗೆ ಡೌಟ್ ಬಂದು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದಾಗ ಅಸಲಿಯತ್ತನ್ನ ಬಾಯ್ಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಇಂದು ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ನಿರೀಕ್ಷೆ

ಅನರ್ಹ ಬಿಪಿಎಲ್‌ ಕಾರ್ಡ್‌ದಾರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಭುಗಿಲೆದ್ದ ಹಿಂಸಚಾರ, ನೇಪಾಳಕ್ಕೆ ಹೋಗಲು ಸಿದ್ದ ಎಂದ ಸಂತೋಷ್ ಲಾಡ್, ಕಾರಣ ಏನ್ ಗೊತ್ತಾ

ಪ್ರತಿಭಟನೆಗಳಲ್ಲಿ ಬಿಜೆಪಿ ನಾಯಕರ ಮಕ್ಕಳು ಯಾಕೆ ಪಾಲ್ಗೊಳ್ಳಲ್ಲ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬುರುಡೆ ಮೂಲ ಕೆದಕಿದ ಎಸ್‌ಐಟಿ ಅಧಿಕಾರಿಗಳು, ವಿಠಲ್ ಗೌಡನನ್ನು ಇಂದು ಕರೆದೊಯ್ದದ್ದು ಎಲ್ಲಿಗೆ

ಮುಂದಿನ ಸುದ್ದಿ
Show comments