Webdunia - Bharat's app for daily news and videos

Install App

78 ವರ್ಷದ ಅಜ್ಜನ ಪ್ರೀತಿ ಮದುವೆಯಲ್ಲಿ ಪರಿಸಮಾಪ್ತಿ

Webdunia
ಶನಿವಾರ, 6 ಜೂನ್ 2015 (15:44 IST)
ಪ್ರೀತಿ ಕುರುಡು ಎನ್ನುತ್ತಾರೆ. ಇದು ಹೇಳಿ ಕೇಳಿ ಬರುವುದಿಲ್ಲ. ವಯಸ್ಸು, ರೂಪ, ಸಂಪತ್ತು, ಗುಣಗಳನ್ನು ನೋಡಿ ಇದು ಹುಟ್ಟಿಕೊಳ್ಳುವುದಿಲ್ಲ. ಇವರಿಬ್ಬರ ಮಟ್ಟಿಗೆ ಹೇಳುವುದಾದರೆ ಇದು ಸತ್ಯವೇ ಬಿಡಿ. ಗಂಗಾರಾಮ್ ಎಂಬ 78 ವರ್ಷದ ಅಜ್ಜ 58 ವರ್ಷದ ಪೂಲನ್ ದೇವಿ ಮಹಿಳೆ ಪರಷ್ಪರ ಮನಸಾರೆ ಪ್ರೀತಿಸಿದ್ದಾರೆ. ಒಬ್ಬರನೊಬ್ಬರು ಬಿಟ್ಟಿರಲಾರದ ಅವರು ದೇವಸ್ಥಾನವೊಂದರಲ್ಲಿ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. 
 

 
ಜಿಲ್ಲೆಯ ಸಚೆಂಡಿ ಎಂಬ ಪ್ರದೇಶದಲ್ಲಿ ಈ ಪ್ರೀತಿ ಪ್ರೇಮದ ಕಹಾನಿ ನಡೆದಿದೆ. 
 
ಎರಡು ಕುಟುಂಬದವರು ಈ ಮದುವೆಗೆ ಸಮ್ಮತಿಸಿದ್ದು. 500 ಜನ ಅತಿಥಿಗಳ ಸಮ್ಮುಖದಲ್ಲಿ ಮದುವೆ ನಡೆಸಿತು. 
 
ಗಂಗಾರಾಮ್ ಮತ್ತು ಪೂಲನ್ ದೇವಿ ಇಬ್ಬರಿಗೂ ಮೊಮ್ಮಕ್ಕಳಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸುವ ಗಂಗಾರಾಮ್ ಕೊನೆಯ ಮಗ ಲವ್‌ಕುಶ್,  "ನಮ್ಮ ತಾಯಿ  15 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದರು. ಹೀಗಾಗಿ ನನ್ನ ತಂದೆಗೆ ಏಕಾಂಗಿತನ ಕಾಡುತ್ತಿತ್ತು. ನಾವು ಮನೆಯಲ್ಲಿ ಇಲ್ಲದಿದ್ದಾಗ ನೆರೆಮನೆಯ ಪೂಲನ್ ದೇವಿ ನಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಅವರಿಬ್ಬರ ನಡುವೆ ಪ್ರೀತಿ ಅರಳಿದೆ. ಒಂದು ವರ್ಷದ ಹಿಂದೆ ನಮಗೆ ಅವರಿಬ್ಬರಲ್ಲಿ ಪ್ರೀತಿ ಮೊಳಕೆಯೊಡೆದಿರುವುದು ತಿಳಿದು ಬಂದಿದೆ.  ಈ ಕುರಿತು ಗ್ರಾಮದ ಹಿರಿಯರಲ್ಲಿ ಮಾತನಾಡಿ ಅವರಿಬ್ಬರಿಗೆ ಮದುವೆ ಮಾಡಿಸಿದ್ದೇವೆ ಎನ್ನುತ್ತಾನೆ . 
 
ತಮ್ಮನ್ನು ಒಂದು ಮಾಡಿದ್ದಕ್ಕೆ ದಂಪತಿಗಳು ಪಂಚಾಯತ್ ಮತ್ತು ಹಳ್ಳಿಗರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 
 
"ಇದು ನನ್ನ ಜೀವನದ ಅತಿ ಸಂತಷದ ಕ್ಷಣ. ನನ್ನನ್ನು ಜೀವನ ಸಂಗಾತಿಯಾಗಿ ಮಾಡಿಕೊಂಡ ಗಂಗಾರಾಮ್ ಮತ್ತು ನಮಗೆ ಸಹಕಾರ ನೀಡಿದ ಹಳ್ಳಿಗರಿಗೆ ಧನ್ಯವಾದಗಳು", ಎನ್ನುತ್ತಾರೆ ನವ ವಧು ಪೂಲನ್ ದೇವಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

Show comments