Webdunia - Bharat's app for daily news and videos

Install App

ಶೌಚಾಲಯ ಉಡುಗೊರೆ ಬಯಸಿದ ವಧುವಿಗೆ 10 ಲಕ್ಷ ಬಹುಮಾನ

Webdunia
ಸೋಮವಾರ, 18 ಮೇ 2015 (16:56 IST)
ತಮ್ಮ ವಿವಾಹದ ಸಂದರ್ಭದಲ್ಲಿ ವಧುವರರು  ಹಣ, ಚಿನ್ನ, ಭೂಮಿ ಯಂತಹ ಬೆಲೆಬಾಳುವ ಉಡುಗೊರೆಗಳನ್ನು ಅಪೇಕ್ಷಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ 25 ವರ್ಷದ ಯುವತಿಯೋರ್ವಳು ತನ್ನ ಮದುವೆಯಲ್ಲಿ ಪಡೆಯಲು ಬಯಸಿದ ಉಡುಗೊರೆ  ಶೌಚಾಲಯ ಎಂದರೆ ನಂಬುತ್ತೀರಾ? ನೈರ್ಮಲ್ಯ ಎಷ್ಟು ಮಹತ್ವದ್ದು ಎಂದು ಅರ್ಥ ಮಾಡಿಸಿದ ಆಕೆ ಅದಕ್ಕೆ ಪ್ರತಿಯಾಗಿ 10 ಶೌಚಾಲಯವಷ್ಟೇ ಅಲ್ಲ, ಅದರ ಜತೆಗೆ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಸಹ ಪಡೆಯುತ್ತಿದ್ದಾಳೆ. 
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಆಂದೋಲನದ ಪ್ರಭಾವವೋ ಏನೋ!  ಮಹಾರಾಷ್ಟ್ರದ ಅಕೋಲಾದ ನಿವಾಸಿಯಾದ ಚೈತಾಲಿ ಗೋಖಲೆ ಎಂಬ ವಧುವೊಬ್ಬಳು ತನ್ನ ತಂದೆ- ತಾಯ ಬಳಿ  ತನ್ನ ಮದುವೆಯಲ್ಲಿ ಆಭರಣಗಳ ಬದಲಾಗಿ ಶೌಚಾಲಯವನ್ನು ಕಟ್ಟಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಮೂಲಭೂತ ನೈರ್ಮಲ್ಯ, ಆಭರಣ ಅಥವಾ ಇತರ ಮದುವೆ ಉಡುಗೊರೆಗಳಿಗಿಂತ ಹೆಚ್ಚು ಮಹತ್ವವಾದುದು ಎಂಬುದು ಅವಳ ವಾದ. 
 
ತನ್ನ ಭಾವೀ ಪತಿಯ ಮನೆಯಲ್ಲಿ ಶೌಚಾಲಯವಿಲ್ಲವೆಂದು ಅರಿತಿದ್ದ ಆಕೆ  ತನಗೆ ಶೌಚಾಲಯ ಕಟ್ಟಿಸಿಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಕರಾರು ಹಾಕಿದ್ದಳಂತೆ.
 
ಪ್ರೇರಣಾದಾಯಕವಾದ ಚೈತಾಲಿಯ ನಡೆಯನ್ನು ಅಭಿನಂದಿಸಿರುವ ಸ್ವಯಂ ಸೇವಾ ಸಂಸ್ಥೆಯೊಂದು ಆಕೆಯನ್ನು ನೈರ್ಮಲ್ಯ ಸಂದೇಶವಾಹಕಿ ಎಂದು ಹೊಗಳಿದ್ದಾರೆ. 
 
 ಈ ಕುರಿತು ಪ್ರತಿಕ್ರಿಯಿಸಿರುವ  ಸಾಮಾಜಿಕ ಕಾರ್ಯಕರ್ತ, ಸುಲಭ್ ಇಂಟರ್ ನ್ಯಾಶನಲ್ ವರಿಷ್ಠ ಡಾಕ್ಟರ್. ಬಿಂದೇಶ್ವರ್ ಪಾಠಕ್, "ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಆಂದೋಲನ ಪರಿಣಾಮ ಹಳ್ಳಿ ವಾಸಿಗಳ ಮೇಲು ಕೂಡ ಆಗುತ್ತಿದೆ. ಚೈತಾಲಿಗೆ ಸದ್ಯದಲ್ಲಿಯೇ 10 ಲಕ್ಷ ನಗದನ್ನು ಒಳಗೊಂಡಿರುವ ಸುಲಭ್ ನೈರ್ಮಲ್ಯ ಪ್ರಶಸ್ತಿಯನ್ನು ನೀಡಲಾಗುವುದು", ಎಂದು ಹೇಳಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video: ತಮಿಳುನಾಡು ಗವರ್ನರ್ ರವಿ ವಯಸ್ಸು 70 ದಾಟಿದ್ರೂ ಏನು ಎನರ್ಜಿ

ಭಷ್ಟಚಾರದಿಂದ ಸರ್ಕಾರ ನಡೆಸುವ ಬದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ವಿಶ್ವೇಶ್ವರ ಹೆಗಡೆ

ಊಹಿಸಲಾಗದ ದುಃಖ, ಗಂಡಾಂತರ: ಕೋಡಿ ಶ್ರೀಗಳ ಶಾಕಿಂಗ್ ಭವಿಷ್ಯ

ಬಿಜೆಪಿ ಸೇರ್ಪಡೆ ಬಗ್ಗೆ ಅಪ್‌ಡೇಟ್‌ ನೀಡಿದ ಕೆ.ಎಸ್‌.ಈಶ್ವರಪ್ಪ: ಬಿಎಸ್‌ವೈಯನ್ನು ಹಾಡಿ ಹೊಗಳಿದ ಮಾಜಿ ಡಿಸಿಎಂ

ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾದ ಶಶಿ ತರೂರ್‌ಗೆ ಮತ್ತೊಂದು ಟಾಸ್ಕ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ

Show comments