Webdunia - Bharat's app for daily news and videos

Install App

ಹರಿವಂಶರಾಯ್ ಬಚ್ಚನ್ 'ಮಧುಶಾಲಾ'

Webdunia
ಶನಿವಾರ, 22 ನವೆಂಬರ್ 2014 (16:28 IST)
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಬಾಲಿವುಡ್‌ನಲ್ಲಿ ಹೆಸರುಗಳಿಸಿದ್ದರೆ, ಬಚ್ಚನ್ ತಂದೆ ಹರಿವಂಶರಾಯ್ ಬಚ್ಚನ್ ಶ್ರೀವಾಸ್ತವ್ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಮೇರುವ್ಯಕ್ತಿತ್ವ ಹೊಂದಿದವರು. 20ನೇ ಶತಮಾನದ ಆದಿಯಲ್ಲಿಯೇ ತಮ್ಮ ಛಾಪನ್ನು ಮೂಡಿಸಿದ್ದ ಹರಿವಂಶ್ 'ಮಧುಶಾಲಾ' ಮೂಲಕ ಖ್ಯಾತಿಗಳಿಸಿದರು.
 
ಉತ್ತರ ಪ್ರದೇಶ ಸಮೀಪದ ಅಲಹಾಬಾದ್‌ನ ಪ್ರತಾಪ್‌ಗಢ್ ಜಿಲ್ಲೆಯ ಪಾಟ್ಟಿ ಎಂಬ ಪುಟ್ಟ ಗ್ರಾಮದಲ್ಲಿ ಬಚ್ಚನ್ ಜನಿಸಿದ್ದರು. ಅವರದ್ದು ಸಂಪ್ರದಾಯಸ್ಥ ಕಾಯಸ್ಥ ಕುಟುಂಬ. ಪ್ರತಾಪ್ ನರೈನ್ ಶ್ರೀವಾಸ್ತವ್ ಮತ್ತು ಸರಸ್ವತಿ ದಂಪತಿಗಳ ಹಿರಿಯ ಪುತ್ರರಾಗಿದ್ದ ಅವರನ್ನು ಮನೆಯಲ್ಲಿ ಪ್ರೀತಿಯಿಂದ 'ಬಚ್ಚನ್'ಎಂದೇ ಕರೆಯುತ್ತಿದ್ದರು. ಸಂಪ್ರದಾಯದಂತೆ ಅವರು ಪ್ರಾಥಮಿಕ ಶಿಕ್ಷಣವನ್ನು(ಉರ್ದು ಭಾಷೆ) ಕಾಯಸ್ಥ ಪಾಠಶಾಲೆಯಲ್ಲಿ ಪೂರೈಸಿದ್ದರು.  ನಂತರ ಅಲಹಾಬಾದ್ ಯೂನಿರ್ವಸಿಟಿ, ಬನಾರಸ್ ಹಿಂದೂ ಯೂನಿರ್ವಸಿಟಿಯಲ್ಲಿಯೂ ಶಿಕ್ಷಣ ಪಡೆದಿದ್ದರು. ತದನಂತರ ಅವರ ಮನಸ್ಸು ಸ್ವಾತಂತ್ರ್ಯ ಹೋರಾಟದತ್ತ ಸೆಳೆದಿತ್ತು, ಆ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಚಳವಳಿಗೆ ಧುಮುಕಿದ್ದರು.
 
ಆದರೆ ಹೇಳಿಕೇಳಿ ಅವರದ್ದು ಕವಿ ಮನಸ್ಸು ಯಾಕೋ ತನಗೆ ಚಳವಳಿ ಇವೆಲ್ಲ ಸರಿಹೊಂದುವುದಿಲ್ಲ ಎಂಬುದನ್ನು ಮನಗಂಡು ಮರಳಿ ಯೂನಿರ್ವಸಿಟಿ ಸೇರಿಕೊಂಡರು. 1941ರಿಂದ 1952ರವರೆಗೆ ಅಲಹಾಬಾದ್ ಯೂನಿರ್ವಸಿಟಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಬಳಿಕ ಎರಡು ವರ್ಷಗಳ ಕಾಲ ಕೇಂಬ್ರಿಡ್ಜ್ ಯೂನಿರ್ವಸಿಟಿಯಲ್ಲಿ ಡಬ್ಲು.ಬಿ.ಯೇಟ್ಸ್ ಮಾರ್ಗದರ್ಶನದಲ್ಲಿ ಮಹಾಪ್ರಬಂಧದ ಕುರಿತು ಸಂಶೋಧನೆ ಕೈಗೊಂಡರು. ಆ ಸಂದರ್ಭದಲ್ಲಿಯೇ ಅವರು ತಮ್ಮ ಹೆಸರಿನ ಮುಂದೆ ಶ್ರೀವಾಸ್ತವ್ ಬದಲು 'ಬಚ್ಚನ್'ಎಂಬುದಾಗಿ ಉಪಯೋಗಿಸಲು ಪ್ರಾರಂಭಿಸಿದರು.  ಹರಿವಂಶ ಅವರ ಪ್ರಬಂಧಕ್ಕೆ ಕೇಂಬ್ರಿಡ್ಜ್ ಯೂನಿರ್ವಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿತು. ಬಚ್ಚನ್ ಕೇಂಬ್ರಿಡ್ಜ್ ಯೂನಿರ್ವಸಿಟಿಯಿಂದ ಇಂಗ್ಲಿಷ್ ಸಾಹಿತ್ಯಕ್ಕಾಗಿ ಡಾಕ್ಟರೇಟ್ ಗೌರವ ಪಡೆದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದ್ದು. ಭಾರತಕ್ಕೆ ಮರಳಿದ ನಂತರವೂ ಅವರು ತಮ್ಮ ಉಪನ್ಯಾಸಕ ವೃತ್ತಿಯನ್ನು ಮುಂದುವರಿಸಿದರು, ಅದರಂತೆ ಅಲಹಾಬಾದ್ ಆಲ್ ಇಂಡಿಯಾ ರೇಡಿಯೋದಲ್ಲಿಯೂ ಕಾರ್ಯನಿರ್ವಹಿಸಿದರು.
 
ಬಚ್ಚನ್ ತಮ್ಮ 19ರ ಹರೆಯದ(1926)ಲ್ಲಿಯೇ ಮೊದಲು 14ರ ಶ್ಯಾಮಲಾ ಎಂಬಾಕೆಯೊಂದಿಗೆ ಹಸೆಮಣೆ ಏರಿದ್ದರು. ದುರಾದೃಷ್ಟ ಎಂಬಂತೆ ದೀರ್ಘಕಾಲದಿಂದ ಟಿ.ಬಿ.ಕಾಯಿಲೆಯಿಂದ ಬಳಲುತ್ತಿದ್ದ ಶ್ಯಾಮಲಾ 1936ರಲ್ಲಿ ವಿಧಿವಶರಾಗಿದ್ದರು. ಹತ್ತು ವರ್ಷಗಳ ದಾಂಪತ್ಯ ಜೀವನಸಾಗಿಸಿದ್ದ ಬಚ್ಚನ್ ಪತ್ನಿಯ ಸಾವಿನಿಂದಾಗಿ ತುಂಬಾ ಆಘಾತಕ್ಕೊಳಗಾಗಿದ್ದರು. 1941ರಲ್ಲಿ ಬಚ್ಚನ್ ಸಿಕ್ ಕುಟುಂಬದ ತೇಜಿ ಸೂರಿಯೊಂದಿಗೆ ಎರಡನೇ ಮದುವೆಯಾಗಿದ್ದರು. ಈ ದಂಪತಿಗಳ ಪುತ್ರರೇ ಅಮಿತಾಬ್ ಮತ್ತು ಅಜಿತಾಬ್ ಬಚ್ಚನ್.
 
1955ರಲ್ಲಿ ಹರಿವಂಶ ಕುಟುಂಬ ದೆಹಲಿಗೆ ತಮ್ಮ ವಾಸ್ತವ್ಯವನ್ನು ಹೂಡಿತ್ತು. ಆಗ ಬಚ್ಚನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿಯೇ ಬಚ್ಚನ್ ಕುಟುಂಬ ನೆಹರು ಮತ್ತು ಇಂದಿರಾ ಬಳಗದೊಂದಿಗೆ ನಿಕಟಸಂಪರ್ಕ ಹೊಂದಿತ್ತು.
 
ಭಗವದ್ಗೀತೆ, ಶೇಕ್ಸಪೀಯರ್‌ನ ಮೆಕ್‌ಬೆತ್ ಹಾಗೂ ಓಥೆಲ್ಲೊ ನಾಟಕಗಳನ್ನು ಹಿಂದಿಗೆ ಭಾಷಾಂತರಿಸಿದ್ದರು. 1984ರಲ್ಲಿ ಇಂದಿರಾ ಹತ್ಯೆಯ ನಂತರ 'ಏಕ್ ನವೆಂಬರ್ 1984' ಹರಿವಂಶ ಅವರ ಕೊನೆಯ ಕವನವಾಗಿತ್ತು.
 
1966ರಲ್ಲಿ ಬಚ್ಚನ್ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿನ ಕೃಷಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1976ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಹಲವಾರು ಕಾಯಿಲೆ ಬಳಲುತ್ತಿದ್ದ ಬಚ್ಚನ್ ಅವರು ತಮ್ಮ 95ರ ಹರೆಯದಲ್ಲಿ 2003 ಜನವರಿ 18ರಂದು ಇಹಲೋಕ ತ್ಯಜಿಸಿದರು. 2007ರಲ್ಲಿ ತೇಜಿ ಬಚ್ಚನ್ (93) ಕೂಡ ಸಾವನ್ನಪ್ಪಿದ್ದರು.
 
ಅಗ್ನಿಪಥ್, ತೇರಾ ಹಾರ್, ಮಧುಶಾಲಾ, ಮಧುಬಾಲಾ, ಮಧುಕಲಶ್, ನಿಶಾ ನಿಮಂತ್ರಣ್, ಏಕಾಂತ್ ಸಂಗೀತ್, ಅಕುಲ್ ಅಂತರ್, ಹಾಲಾಹಲ್, ಸೂತ್ ಕೀ ಮಾಲ್, ಪ್ರಣಯ್ ಪತ್ರಿಕಾ, ಮಿಲನ್ ಯಾಮಿನಿ ಬಚ್ಚನ್ ಅವರ ಪ್ರಮುಖ ಕವನಗಳಾಗಿವೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments