Webdunia - Bharat's app for daily news and videos

Install App

ಫೋನ್ ಎತ್ತಿ ಮೊದಲು 'ಹಲೋ' ಅನ್ನೋದ್ಯಾಕೆ ಗೊತ್ತಾ?

Webdunia
ಬುಧವಾರ, 22 ಫೆಬ್ರವರಿ 2017 (10:38 IST)
ನಿಮ್ಮ ಮೊಬೈಲ್ ಅಥವಾ ಸ್ಥಿರ ದೂರವಾಣಿ ರಿಂಗಣಿಸಿದಾಗ ಅದನ್ನೆತ್ತಿ ನೀವು ಮೊದಲು ಮಾತನಾಡುವ ಶಬ್ಧ 'ಹಲೋ'. ಆದರೆ ಹಲೋವನ್ನೇ ಯಾಕೆ ಹೇಳುತ್ತೇವೆ. ಬೇರೆ ಪದ ಯಾಕಿಲ್ಲ ಎಂದು ನೀವೆಂದಾದರೂ ಯೋಚಿಸಿದ್ದೀರಾ. ಅದರ ಹಿಂದೆ ಕೂಡ ರೋಮಾಂಚನಕಾರಿ ಕರೆ ಇದೆ ಎಂದರೆ ನಂಬುತ್ತೀರಾ?
ಆಕ್ಸಫರ್ಡ್ ಇಂಗ್ಲೀಷ್ ಶಬ್ಧಕೋಶದ ಪ್ರಕಾರ ಹಲೋ ಶಬ್ಧ, ಹಳೆಯ ಜರ್ಮನಿ ಶಬ್ಧ ಹಾಲಾ,ಹೋಲಾದಿಂದ ಹುಟ್ಟಿಕೊಂಡಿದೆ. ಹೋಲಾದ ಅರ್ಥ ಹೇಗಿದ್ದೀರಾ? ಎಂದು. ಪ್ರಾಚೀನ ಕಾಲದಲ್ಲಿ ಸಮುದ್ರದಲ್ಲಿ ಯಾತ್ರೆ ಮಾಡುವ ನಾವಿಕರು ಈ ಪದವನ್ನು ಬಳಸುತ್ತಿದ್ದರು. ಆದರೆ ಫೋನ್‌ಗೆ ಮತ್ತು 'ಹಲೋ'ಗೆ ಏನು ಸಂಬಂಧ. ಇಲ್ಲಿ ಕಥೆಯೇ ಬೇರೆದಿದೆ. 
 
ಫೋನ್ ಆವಿಷ್ಕರಿಸಿದ ಅಲೆಕ್ಸಾಂಡರ್ ಗ್ರಹಾಂ ಬೆಲ್‌ಗೆ ಮಾರ್ಗರೆಟ್ 'ಹಲೋ' ಎಂಬ ಪ್ರೇಯಸಿ ಇದ್ದಳು. ಕಠಿಣ ಪರಿಶ್ರಮದಿಂದ ದೂರವಾಣಿ ಆವಿಷ್ಕರಿಸಿದ ಅವರು ಮೊದಲು ಎರಡು ಫೋನ್ ತಯಾರು ಮಾಡಿ ಅದರಲ್ಲೊಂದನ್ನು ತನ್ನ ಪ್ರೇಯಸಿಗೆ ನೀಡಿದರು. ಬಳಿಕ ಫೋನ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ತಮ್ಮ ಯೋಜನೆ ಪರಿಪೂರ್ಣವಾದಾಗ ಎಲ್ಲರಿಗಿಂತ ಮೊದಲು ಆಕೆಗೆ ಕರೆ ಮಾಡಿದರು ಮತ್ತು ಎಂದಿನಂತೆ ಪ್ರೀತಿಯಿಂದ 'ಹಲೋ' ಎಂದರು. ಬಳಿಕ ಅವಳಿಗೆ ಫೋನ್ ಮಾಡಿದಾಗಲೆಲ್ಲ 'ಹಲೋ' ಎಂದೇ ಪ್ರೀತಿಯಿಂದ ಕರೆಯುತ್ತಿದ್ದರು.
 
ಅವರಿಂದ ಕಂಡುಹಿಡಿಯಲ್ಪಟ್ಟ ಫೋನ್ ಮಾರುಕಟ್ಟೆಗೆ ಬಂದು ಜನರು ಬಳಸಲು ಪ್ರಾರಂಭಿಸಿದಾಗ ಮೊದಲೆಲ್ಲ ‘Are You There?’ ಎಂದೇ ಸಂಭಾಷಣೆಯನ್ನು ಪ್ರಾರಂಭಿಸುತ್ತಿದ್ದರು. ಆದರೆ ಇಷ್ಟೊಂದು ಉದ್ದದ ಪದವನ್ನು ಬಳಸುವುದು ಯಾರಿಗೂ ಇಷ್ಟವಾಗಲಿಲ್ಲ. ಹೀಗಾಗಿ ಗ್ರಹಾಂ ಬೆಲ್‌ನಂತೆ ಎಲ್ಲರೂ 'ಹಲೋ' ಎಂದೇ ಬಳಸತೊಡಗಿದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಫೇಸ್ ಬುಕ್‌ನಲ್ಲಿ ವಿಡಿಯೋ ಹಂಚಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ಮರಳು ಗಣಿಗಾರಿಕೆ ವೀಕ್ಷಿಸಲು ಹೋದ ವಿಜಯೇಂದ್ರಗೆ ಖರ್ಗೆ ಬೆಂಬಲಿಗರಿಂದ ಅಡ್ಡಿ: ಬಿಜೆಪಿ ಕೆಂಡಾಮಂಡಲ

ಮುಂದಿನ ಸುದ್ದಿ
Show comments