Webdunia - Bharat's app for daily news and videos

Install App

ಈ ಅಕ್ಕ ತಮ್ಮನ ವಯಸ್ಸಿನ ಅಂತರ ಬರೊಬ್ಬರಿ 50 ವರ್ಷ!

Webdunia
ಬುಧವಾರ, 22 ಏಪ್ರಿಲ್ 2015 (12:45 IST)
ಇದನ್ನು ನೀವು ನಂಬುತ್ತೀರೋ ಇಲ್ಲವೋ! ಆದರೆ ಇದು ನಡೆದಿದ್ದಂತೂ ಸತ್ಯ. ಗಾಂಧಿ ತಾತನ ಹುಟ್ಟೂರು ಪೋರ್‍‌ಬಂದರ್‌ನಲ್ಲಿ  80 ವರ್ಷದ ವೃದ್ಧರೊಬ್ಬರು ತಂದೆಯಾಗಿದ್ದಾರೆ. ಅವರ ಪತ್ನಿ ಈ ತಿಂಗಳ 11ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುವುದರ ಮೂಲಕ ಅಜ್ಜನಿಗೆ ಅಪ್ಪನಾಗುವ ಭಾಗ್ಯ ಕರುಣಿಸಿದ್ದಾರೆ. ಅವರ ಮೊದಲ ಮಗಳ ವಯಸ್ಸು 50. ಈಗ ತಾನು ತಮ್ಮನನ್ನು ಪಡೆದಿರುವುದರ ಬಗ್ಗೆ ಆಕೆಯ ಖುಷಿಯಂತೂ ಹೇಳತೀರದಾಗಿದೆ. 

ಪೋರ್‍‌ಬಂದರ್‌ನ ಫತಾನ ಗ್ರಾಮದಲ್ಲಿ ಈ ವಿನೂತನ ಪ್ರಕರಣ ಬೆಳಕಿಗೆ ಬಂದಿದ್ದು  ಭೀಕುಬಾಯಿ ಹೆಸರಿನ ವೃದ್ಧ ಈಗ ಮತ್ತೊಂದು ಮಗುವಿಗೆ ತಂದೆಯಾಗಿದ್ದಾರೆ. ಕಳೆದ 11 ತಿಂಗಳ ಹಿಂದೆ ವೃದ್ಧ 40 ವರ್ಷದ ಮಹಿಳೆಯನ್ನು ಮರು ಮದುವೆಯಾಗಿದ್ದ. 
 
ತನ್ನ 21ನೇ ವಯಸ್ಸಿನಲ್ಲಿ ಮೊದಲನೇ ಮದುವೆಯಾಗಿದ್ದ ಭೀಕುಬಾಯಿ ಆ ಪತ್ನಿಯಿಂದ 5 ಹೆಣ್ಣುಮಕ್ಕಳ ತಂದೆಯಾಗಿದ್ದರು.  ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಪತ್ನಿ 3 ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರ ಹೆಣ್ಣು ಮಕ್ಕಳು ಸಹ ಮದುವೆಯಾಗಿ ಗಂಡನ ಮನೆಯಲ್ಲಿರುವುದರಿಂದ ಭೀಕುಬಾಯಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ತಂದೆಯ ಏಕಾಂಗಿತನವನ್ನು ಸಹಿಸಲಾಗದೇ ಅವರ 50 ವರ್ಷದ ಮಗಳು ಅಪ್ಪನಿಗೆ ಮರುಮದುವೆ ಮಾಡುವ ಯೋಚನೆ ಮಾಡಿದರು. 
 
ಮಗಳ ಒತ್ತಾಯಕ್ಕೆ ಮಣಿದ ಭೀಕುಬಾಯಿ ಕಳೆದ 11 ತಿಂಗಳ ಹಿಂದೆ ಪ್ರಥಮ ಗಂಡನಿಂದ ವಿಚ್ಛೇದನ ಪಡೆದಿದ್ದ ಶಾಂತಿಬೆನ್ ಅವರನ್ನು ಮದುವೆಯಾಗಿದ್ದರು. ಅವರೀಗ ತಾಯಿಯಾಗಿದ್ದಾರೆ. 
 
ಇದರಿಂದ ಬಹಳ ಸಂತಸಗೊಂಡಿರುವ ಭೀಕುಬಾಯಿಯ ಮೊದಲು ಮಗಳು ಲಕೀಬೆನ್, "ನಮ್ಮ ಕುಟುಂಬದಲ್ಲಿ ಗಂಡು ಮಕ್ಕಳಿಲ್ಲ ಎಂಬ ಕೊರಗು ಕಾಡುತ್ತಿತ್ತು. ಇಷ್ಟುದಿನ ನಮಗೆ ಸಹೋದರನಿಲ್ಲವಲ್ಲ ಬೇಸರವಾಗುತ್ತಿತ್ತು. ಆದರೆ ಈಗ ದೇವರ ದಯೆಯಿಂದ ನಾವು ತಮ್ಮನನ್ನು ಪಡೆದಿದ್ದೇವೆ", ಎನ್ನುತ್ತಾಳೆ . 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

Show comments