Webdunia - Bharat's app for daily news and videos

Install App

ಲವ್ವಿ ಡವ್ವಿ ವಿವಾದ: ವರನ ಬದಲಿಗೆ ಆತನ ತಮ್ಮನನ್ನು ವರಿಸಿದ ವಧು

Webdunia
ಮಂಗಳವಾರ, 21 ಏಪ್ರಿಲ್ 2015 (17:45 IST)
ವಧು ಒಬ್ಬಳು ತಾನು ಮದುವೆಯಾಗ ಬೇಕಿದ್ದ ವರನ ಬದಲಿಗೆ ಆತನ ತಮ್ಮನನ್ನು ಮದುವೆಯಾದ ವಿಚಿತ್ರ ಘಟನೆ ಹರಿದ್ವಾರದಲ್ಲಿ ನಡೆದಿದೆ. ಅಷ್ಟಕ್ಕೂ ಆಕೆ ತಾನು ಮದುವೆಯಾಗಬೇಕಿದ್ದವನ ಬದಲಿಗೆ ಆಕೆ ಆತನ ತಮ್ಮನನ್ನು ಮದುವೆಯಾಗಿದ್ದಾದರೂ ಏಕೆ ಎಂಬುದನ್ನು ತಿಳಿಯಬೇಕಾದರೆ ಮುಂದೆ ಓದಿ. 

ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸುವ ಹೊಂಗನಸನ್ನು ಹೊತ್ತು ಹಸೆಮಣೆ ಏರಿದ್ದ ಆ ಯುವಕ ನಿರೀಕ್ಷಿಸಿರದಿದ್ದು ನಡೆದು ಹೋಯಿತು. ಹರಿದ್ವಾರದ ಸಮೀಪದ ಆವದಿಪುರ್ಹಾಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವಧುವರರಿಬ್ಬರು ಹೂಮಾಲೆಯನ್ನು ಬದಲಾಯಿಸಿಕೊಂಡು ವಿವಾಹದ ಪ್ರತಿಜ್ಞಾ ವಿಧಿಗಳನ್ನು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಸಿಡಿಗುಂಡಿನಂತೆ ಅಲ್ಲಿಗೆ ಬಂದ ಯುವತಿಯೊಬ್ಬಳು ಎಲ್ಲರ ಎದುರು ವರನ ಕಪಾಳಕ್ಕೆ ಅನೇಕ ಬಾರಿ ಬಾರಿಸಿದಳು. ಆತ ಹಲವು ವರ್ಷಗಳಿಂದ ತನ್ನ ಜತೆ ಪ್ರೇಮ ಸಂಬಂಧವನ್ನು ಹೊಂದಿದ್ದು ಕಾನೂನು ಪ್ರಕಾರ ಮದುವೆ ಕೂಡ ಆಗಿದ್ದಾನೆ. ಮತ್ತೆ ಬೇರೆ ಹುಡುಗಿಯ ಜತೆ ಮದುವೆಯಾದರೆ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತೇನೆ ಎಂದು ಆಕೆ ಬೆದರಿಸಿದ್ದಾಳೆ. 
 
ಆಕೆ ಮದುವೆ ಮಂಟಪದಿಂದ ಹೊರಗೆ ಹೋದ ನಂತರ ಕೂಡ ಸನ್ನಿವೇಶ ವರನ ಪರವಾಗಿ ಬದಲಾಗಲಿಲ್ಲ. ಆಕೆ ಹೋದಳು, ಇನ್ನೇನು ಮದುವೆ ಮುಂದುವರೆಸೋಣ ಎಂದು ಹಿರಿಯರು ಮುಂದಾದರೆ ವಧು ಮಾತ್ರ ಪ್ರೀತಿಸಿದ ಹೆಣ್ಣಿಗೆ ಮೋಸ ಮಾಡಿದವನನ್ನು ನಾನು ಮದುವೆಯಾಗಲಾರೆ ಎಂದು ಹಠ ಹಿಡಿದಿದ್ದಾಳೆ. 
 
ಹೀಗಾಗಿ ಎರಡು ಕಡೆಯ ಕುಟುಂಬದವರು ಪ್ರಕರಣವನ್ನು ಪಂಚಾಯತ್ ಮುಂದಿಟ್ಟಿದ್ದಾರೆ. 
 
ಪಂಚಾಯತ್ ಅಲ್ಲಿ ವರನ ಕಡೆಯವರು ತಮಗೆ ಮತ್ತೆ ಹೆಚ್ಚಿನ ಅವಮಾನವಾಗದಂತೆ  ಏನಾದರೂ ಪರಿಹಾರ ತಿಳಿಸಿ ಎಂದು ಕೇಳಿಕೊಂಡಿದ್ದಾರೆ.  ವಿಚಾರಣೆ ನಡೆಸಿದ ಪಂಚಾಯತ್  ವಧುವಿಗೆ ವರನ ಕಿರಿಯ ಸಹೋದರನ ಜತೆ ಮದುವೆ ಮಾಡಿಸುವಂತೆ ಸೂಚಿಸಿದೆ. 
ವಧು ಮತ್ತು ಆಕೆಯ ಕುಟುಂಬದವರು ಇದಕ್ಕೆ ಒಪ್ಪಿಕೊಂಡಿದ್ದು, ರವಿವಾರ ಶಾಸ್ತ್ರೋಸ್ತ್ರವಾಗಿ ಮದುವೆ ನಡೆಸುವುದರ ಮೂಲಕ  ಪ್ರಕರಣ ಸೌಹಾರ್ದಯುತ ಅಂತ್ಯವನ್ನು ಕಂಡಿತು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನಗಳಲ್ಲಿ ಯಾಕೆ ಹೀಗಾಗುತ್ತಿದೆ, ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶವಾಯಿತು ಇಂಡಿಗೋ ವಿಮಾನ

ಯೋಗ ಜಗತ್ತನ್ನು ಒಂದುಗೂಡಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

Show comments