Webdunia - Bharat's app for daily news and videos

Install App

ಭೇದಿಸಲಾಗುತ್ತಿಲ್ಲ ಈ ಭಯಾನಕ ರಹಸ್ಯ!

Webdunia
ಸೋಮವಾರ, 13 ಜುಲೈ 2015 (11:43 IST)
ಇದು ಹಾಲಿವುಡ್‌ನ ಯಾವುದೋ ಸಿನಿಮಾದ ಕಥೆಯಲ್ಲ. ರಹಸ್ಯಮಯವಾದ ಭಯಾನಕ ಸತ್ಯ. ಬಿಲಾಸ್ಪುರದ ಕುಟುಂಬವೊಂದು ಕಳೆದ 10 ತಿಂಗಳಿಂದ ಎದುರಿಸುತ್ತಿರುವ ಭೀಭತ್ಸ್ ಜೀವನದ ಸುದ್ದಿ ಇದು.

ಬಿಲಾಸ್ಪುರ ಜಿಲ್ಲೆಯ ಬಾಡಿ ಎಂಬ ಗ್ರಾಮದಲ್ಲಿ ವಾಸವಾಗಿರುವ ನಿವೃತ್ತ ಸರ್ಕಾರಿ ನೌಕರನ ಮನೆಯಲ್ಲಿರುವ ವಸ್ತುಗಳಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ. ಯಾವಾಗಲೋ ಒಮ್ಮೆ ಹೀಗಾಗುವುದಿಲ್ಲ. ಪದೇ ಪದೇ ನಡೆಯುತ್ತದೆಯಂತೆ ಇದು. 
 
ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ಪರಿಣಿತರಿಂದ ಸಹ ಈ ರಹಸ್ಯವನ್ನು ಬಗೆಹರಿಸಲಾಗಿಲ್ಲ. 2014ರ ಸೆಪ್ಟಂಬರ್ 10ರಂದು ಮೊದಲ ಬಾರಿ ಈ ಘಟನೆ ನಡೆದಿತ್ತು. ಆಗ ಕುಟುಂಬದವರು ಪೂಜೆ, ಹೋಮಹವನವನ್ನು ಮಾಡಿಸಿದ್ದಾರೆ. ತದನಂತರ ನಾಲ್ಕು ತಿಂಗಳುಗಳ ಕಾಲ ಈ ಸಮಸ್ಯೆ ನಿವಾರಣೆಯಾಗಿದೆ. ಆದರೆ ಕಳೆದ ಕೆಲ ದಿನಗಳಿಂದ ಮತ್ತೆ ಬೆಂಕಿ ಅನಾಹುತ ಪ್ರಾರಂಭವಾಗಿದ್ದು, ಕುಟುಂಬದವರು ನಿದ್ದೆಗೆಟ್ಟು ಜೀವನ ನಡೆಸುವಂತಾಗಿದೆ. 
 
ಮಕ್ಕಳನ್ನು ಮತ್ತು ಮನೆಯಲ್ಲಿದ್ದ ಬೆಲೆಬಾಳುವ ಸಾಮಗ್ರಿಗಳನ್ನು ಹತ್ತಿರದ ಬಂಧುಗಳೊಬ್ಬರ ಮನೆಗೆ ಸ್ಥಳಾಂತರಿಸಲಾಗಿದೆ. 
 
ಅಷ್ಟೇ ಅಲ್ಲದೇ ಇತ್ತೀಚಿಗೆ ಕೋಣೆಯೊಂದರ ಗೋಡೆಯ ಮೇಲೆ, "ಈ ಮನೆ ಬಿಟ್ಟು ಹೊರಟು ಹೋಗಿ, ಇಲ್ಲವಾದರೆ ನಾನು ಎಲ್ಲರನ್ನೂ ಕೊಲ್ಲುತ್ತೇನೆ" ಎಂದು ಬರೆದಿರುವುದು ಕಂಡು ಬಂದಿದೆ. 
 
ಪ್ರಕರಣವನ್ನು ಬೇಧಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿರುವ ಪೊಲೀಸರು ಕುಟುಂಬದವರ ರಕ್ಷಣೆಗೆ ಒಬ್ಬ  ಪೇದೆಯನ್ನು ಜನ ಮನೆಯ ಹೊರಗೆ ಕಾವಲಿಟ್ಟಿದ್ದಾರೆ. ಆದರೆ ಪೇದೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಹ ಮನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಇವೆಲ್ಲವುಗಳ ಹಿಂದಿನ ರಹಸ್ಯ ನಿಗೂಢವಾಗಿಯೇ ಉಳಿದಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments