Webdunia - Bharat's app for daily news and videos

Install App

ಕಾಂಗ್ರೆಸ್-ಜೆಡಿಎಸ್ ಕೈಗೆ ಬೆಂಗಳೂರನ್ನು ಆದರ್ಶ ನಗರವಾಗಿ ಮಾಡುವ ಹೊಣೆ

Webdunia
ಶುಕ್ರವಾರ, 11 ಸೆಪ್ಟಂಬರ್ 2015 (13:41 IST)
-ಗುಣವರ್ಧನ ಶೆಟ್ಟಿ 


ಕೊನೆಗೂ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಸಿಕ್ಕಿದೆ.  ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮಂಜುನಾಥ್ ರಾಜು ಅವರಿಗೆ 128 ಮತಗಳು ಬಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮಂಜುನಾಥ್ ರೆಡ್ಡಿಗೆ 131 ಮತಗಳು ಸಿಕ್ಕಿ, ಮಂಜುನಾಥ್ ರೆಡ್ಡಿ ಮೇಯರ್ ಸ್ಥಾನಕ್ಕೆ  ಆಯ್ಕೆಯಾಗಿದ್ದಾರೆ.  ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು  ಗೆದ್ದ ಹುಮ್ಮಸ್ಸಿನಲ್ಲಿ ಅಂಕಿ, ಸಂಖ್ಯೆಯ ಲೆಕ್ಕಾಚಾರವನ್ನು ಮರೆತು, ಒಂದು ರೀತಿಯ ಭ್ರಮಾಲೋಕದಲ್ಲಿ ತೇಲಿತು. ಬಿಬಿಎಂಪಿ ಸಾಮ್ರಾಜ್ಯ ತಮ್ಮ ಕೈಗೆ ಸಿಕ್ಕಿತೆಂಬ ಭ್ರಮೆಯಲ್ಲಿ ಮುಳುಗಿತ್ತು.

ಆದರೆ ಪಕ್ಷೇತರ ಕಾರ್ಪೊರೇಟರುಗಳು ಬಿಜೆಪಿಯನ್ನು ಬೆಂಬಲಿಸಲು ನಿರ್ಧರಿಸದೇ ದೂರ ಹೋದಾಗಲೇ ಬಿಜೆಪಿಗೆ ವಾಸ್ತವ ಸ್ಥಿತಿಯ ಅರಿವಾಗಿತ್ತು. ಪಕ್ಷೇತರರು ತಮಗೇ ಬೆಂಬಲ ನೀಡಬೇಕೇ ಹೊರತು ಬೇರಾರಿಗೂ ಬೆಂಬಲಿಸುವುದಿಲ್ಲವೆಂದು ಭಾವಿಸಿದ್ದ ಬಿಜೆಪಿ ಅವರ ಬಗ್ಗೆ ಒಂದು ರೀತಿಯ ಉದಾಸೀನ ಮನೋಭಾವ ಹೊಂದಿತ್ತು.

ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಕೆಲವು ಪಕ್ಷೇತರ ಸದಸ್ಯರು ಹೇಳಿದಾಗ ಬಿಜೆಪಿಯ ಕೆಲವು ಶಾಸಕರು ಮತ್ತು ಸಂಸದರು ಖಾರವಾಗಿ ಮಾತನಾಡಿದರು. ಇದು ಒಂದು ರೀತಿಯಲ್ಲಿ ಪಕ್ಷೇತರರ ಸಿಟ್ಟು ಕೆರಳಿಸುವಂತೆ ಮಾಡಿ ಅವರು ಕಾಂಗ್ರೆಸ್ ಕಡೆ ಮುಖಮಾಡಿದಾಗಲೇ ಬಿಬಿಎಂಪಿಯಲ್ಲಿ ಅಂಕಿ, ಅಂಶಗಳ ಲೆಕ್ಕಾಚಾರ ಆರಂಭವಾಗಿತ್ತು.

ಆದರೆ ಅಷ್ಟರಲ್ಲಿ ಬಿಜೆಪಿಗೆ ಕೈಗೆ ಬಂದ ತುತ್ತು ಬಾಯಿಗೆ ಸಿಗದ ಹಾಗಾಗಿತ್ತು.  ಬಿಜೆಪಿಯ ನಾಯಕರು ಕುಮಾರಸ್ವಾಮಿ ಕುರಿತು ಉದಾಸೀನವಾಗಿ ಮಾತನಾಡಿದ್ದಾರೆಂದು ಕುಮಾರಸ್ವಾಮಿ ಕೂಡ ಬಿಜೆಪಿಗೆ ಬೆಂಬಲಿಸದಿರಲು ನಿರ್ಧರಿಸಿದ್ದರು.

ಕೊನೆಗೂ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಕಾಂಗ್ರೆಸ್-ಜೆಡಿಎಸ್ ಪಾಲಾಗುವ ಮೂಲಕ ಪುನಃ ಆಡಳಿತಪಕ್ಷಕ್ಕೆ ಅಧಿಕಾರ ದಕ್ಕಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ನೀರು, ವಿದ್ಯುತ್, ಕಸ ವಿಲೇವಾರಿ, ರಸ್ತೆ ಸಂಚಾರ ಮುಂತಾದ ಅನೇಕ ಸೌಲಭ್ಯಗಳಿಗೆ ಪ್ರಸಕ್ತ ಆಡಳಿತ ಗಮನಹರಿಸುವ ಮೂಲಕ ಮತ್ತು ಭ್ರಷ್ಟಾಚಾರ ಕಿಂಚಿತ್ತೂ ನುಸುಳದಂತೆ ನೋಡಿಕೊಳ್ಳುವ ಮೂಲಕ ಬೆಂಗಳೂರನ್ನು ದೇಶದಲ್ಲೇ ಒಂದು ಆದರ್ಶ ನಗರವಾಗಿ ಮಾಡುವ ಹೊಣೆಗಾರಿಕೆ ಅವರ ಮೇಲೆ ಬಿದ್ದಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

Show comments