Webdunia - Bharat's app for daily news and videos

Install App

ಬಿಬಿಎಂಪಿಯಲ್ಲಿ ಇನ್ನೈದು ವರ್ಷ ಬಿಜೆಪಿಯ ದರ್ಬಾರು

Webdunia
ಮಂಗಳವಾರ, 25 ಆಗಸ್ಟ್ 2015 (17:29 IST)
-ಗುಣವರ್ಧನ ಶೆಟ್ಟಿ 
ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದು ಬಿಜೆಪಿ 100 ಸ್ಥಾನಗಳೊಂದಿಗೆ ಭರ್ಜರಿ ಜಯಭೇರಿ ಬಾರಿಸಿದ್ದರೆ ಕಾಂಗ್ರೆಸ್ 76 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.  ಉಳಿದಂತೆ ಜೆಡಿಎಸ್ 14 ಮತ್ತು ಇತರರ 8 ಸ್ಥಾನಗಳಲ್ಲಿ ಗೆದ್ದಿವೆ. ಈ ಸಾರಿ ನಡೆದ ಎಲ್ಲಾ ಸಮೀಕ್ಷೆಗಳೂ ತಲೆಕೆಳಗಾಗಿ ಬಿಜೆಪಿ ಗೆದ್ದಿರುವುದು ಇತರೆ ಪಕ್ಷಗಳಿಗೆ ಆಶ್ಚರ್ಯ ಮೂಡಿಸಿದೆ. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಬರುತ್ತದೆಂದು ಸಮೀಕ್ಷೆಗಳು ಹೇಳಿದ್ದವು.

ಈ ಬಾರಿ ಜನರು ಬಿಜೆಪಿಗೆ ಯಾವ ಮಾನದಂಡವನ್ನು ನೋಡಿ ಓಟು ಮಾಡಿರಬಹುದು ಎನ್ನುವುದೇ ಪ್ರಶ್ನಾರ್ಥಕವಾಗಿದೆ. ಬಿಜೆಪಿಯ ಐದುವರ್ಷಗಳ ಬಿಬಿಎಂಪಿ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವ ಕೂಗು ಕೇಳಿಬಂದಿತ್ತು. ರಸ್ತೆಗಳು, ಕಸ ನಿರ್ವಹಣೆ ವಿಧಾನ, ನೀರು ಪೂರೈಕೆ ವ್ಯವಸ್ಥೆ ಎಲ್ಲವೂ ಕಳಪೆಯಾಗಿತ್ತು.  ಸಾವಿರಾರು ಕೋಟಿ ರೂ.ಗಳ ಸಾಲದ ಹೊರೆ ಬಿಬಿಎಂಪಿ ತಲೆಯ ಮೇಲಿದೆ. ಆದರೂ ಜನರು ಬಿಜೆಪಿಗೆ ಓಟು ಮಾಡಿದ್ದಾರೆಂದರೆ ಆಡಳಿತ ವಿರೋಧಿ ಮತಗಳು ಬಿಜೆಪಿಗೆ ಬಿದ್ದಿರಬಹುದಾದ ಸಾಧ್ಯತೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಖರಿ ಮತದಾರರಿಗೆ ಪ್ರಿಯವಾಗಿಲ್ಲದಿರಬಹುದು.

  ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್ ಕುಮಾರಸ್ವಾಮಿ  ಕೆರೆ, ಕಟ್ಟೆಗಳನ್ನು ನುಂಗಿದರೂ, ಸರ್ಕಾರಿ ಭೂಮಿ ನುಂಗಿದರೂ ನೀವೇನೂ ಮಾಡಬೇಡಿ ಎಂಬ ಸಂದೇಶವನ್ನು ಬೆಂಗಳೂರಿನ ಜನತೆ ನಮಗೆ ನೀಡಿದ್ದಾರೆ.  ಬಿಬಿಎಂಪಿ ವಿಸರ್ಜನೆ ಮಾಡಿ ಒಡಿಯುತ್ತೇವೆ ಎಂದು ಹೇಳಿದ್ದೀರಲ್ಲಾ, ಹಾಗೆ ಮಾಡದೇ ಬಿಜೆಪಿಗೆ ಸಂಪೂರ್ಣ ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ಗೆ ಸಲಹೆ ಮಾಡಿದ್ದಾರೆ. ಐದು ವರ್ಷ ಅವರೇ ಆಳಲಿ, ಹಿಂದಿನ ಐದುವರ್ಷ ನೋಡಿದ್ದಾಗಿದೆ. ಮುಂದಿನ ಐದುವರ್ಷ ಅವರಿಗೆ ತೊಂದರೆ ಮಾಡಬೇಡಿ ಎಂದು ಕುಮಾರಸ್ವಾಮಿ ಹತಾಶೆಯ ನುಡಿಗಳನ್ನು ನುಡಿದರು.  ಭ್ರಷ್ಟಾಚಾರ ಯಾರು ಹೆಚ್ಚಿಗೆ ಮಾಡುತ್ತಾರೆ ಅಂತಹವರಿಗೆ ಓಟು ಕೊಡಬೇಕು ಎಂದು ಬೆಂಗಳೂರು ಜನತೆ ತೀರ್ಮಾನ ಮಾಡಿರುವಂತೆ ಕಾಣುತ್ತದೆ ಎಂದೂ ಕುಮಾರಸ್ವಾಮಿ ಹತಾಶೆಯಿಂದ ಹೇಳಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

Show comments