Webdunia - Bharat's app for daily news and videos

Install App

ಶನಿ ಮಾಗಿಯಿಂದ ಯಾವ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

Webdunia
ಬುಧವಾರ, 23 ಜುಲೈ 2014 (18:11 IST)
ಶನಿ ಮಹಾರಾಜರು ತಮ್ಮ ಉಲ್ಟಾ ಪ್ರಯಾಣದಿಂದ ನೇರ ಪ್ರಯಾಣವನ್ನು ಜುಲೈ 21, 2014ಕ್ಕೆ ರಿಂದ ಆರಂಭಿಸಿದ್ದಾರೆ. ಶನಿ ಮಾಗಿಯಿಂದ ಯಾವ ರಾಶಿಯ ಮೇಲೆ ಯಾವ ತರಹದ ಪ್ರಭಾವ ಬೀರುತ್ತದೆ ಎಂದು ತಿಳಿಯೊಣ ಬನ್ನಿ. 
 
ಶನಿಯ ಮಾಗಿ ಆದುದ್ದರಿಂದ ಜೀವನದಲ್ಲಿ ಸ್ವಲ್ಪವಾದರು ಬದಲಾವಣೆ ಅವಶ್ಯವಾಗಿ ಆಗುವುದು. 
ಆಕಾಶ ಮಂಡಲದಲ್ಲಿ ಶನಿಯನ್ನು ಅತ್ಯಂತ ಸುಂದರ ಗ್ರಹ ಎಂದು ಕರೆಯಲಾಗುತ್ತದೆ. ಆದರೆ, ಎಷ್ಟೊಂದು ಸುಂದರವಾಗಿದೆಯೋ ಅಷ್ಟೆ ಅಶುಭ ಮತ್ತು ಶುಭ ಫಲ ಪ್ರದಾನ ಮಾಡುವ ಗ್ರಹ ಕೂಡ ಶನಿಯಾಗಿದೆ. 
 
ಯಾವಾಗ ಈ ಗ್ರಹ ವಕ್ರಿ ಅಥವಾ ಮಾಗಿ ಆಗಿರುತ್ತದೆಯೋ ಆಗ ಇದರ ಪ್ರಭಾವ ಕೇವಲ ಪ್ರಕೃತಿಯ ಮೇಲೆ ಅಲ್ಲ ನಮ್ಮ ಮೇಲೆ ಕೂಡ ಬೀರುತ್ತದೆ. 21 ಜುಲೈ 2014ರಂದು ಶನಿ ತುಲಾ ರಾಶಿಯಲ್ಲಿ ವಕ್ರಿಯಿಂದ ಮಾಗಿ ಆಗಲಿದೆ. ಇದರ ಫಲದಿಂದ ಹಲವು ಪ್ರದೇಶಗಳಲ್ಲಿ ನಿಂತ ಮಳೆ ಮತ್ತೆ ಪ್ರಾರಂಭವಾಗುತ್ತದೆ. ದೇಶದ ದಕ್ಷಿಣ-ಪಶ್ಚಿಮ ಇಲಾಖೆಗಳಲ್ಲಿ ಉತ್ತಮ ಮಳೆ ಆಗುತ್ತದೆ. ಕೆಲವು ಪ್ರದೇಶಗಳಲ್ಲಿ ಪ್ರಾಕೃತಿಕ ವಿಕೋಪ ಕೂಡ ಆಗುವ ಸಾಧ್ಯತೆಗಳಿವೆ. 
 
ಪೂರ್ವೋತ್ತರ ರಾಜ್ಯದಲ್ಲಿ ಉತ್ತಮ ಮಳೆ ಬೀಳುವ ಸಂಕೇತ ಇದೆ. ಹಣದುಬ್ಬರದ ಮೇಲೆ ಸರ್ಕಾರದ ನಿಯಂತ್ರಣ ಇರುವುದಿಲ್ಲ. ಬೀಜಗಳ ಬೆಲೆಯಲ್ಲಿ ಹೆಚ್ಚಳವಾಗುವುದು. ಕೆಲವು ನಾಯಕರ ಪ್ರಸಕ್ತ ಸ್ಥಾನ ಹೋಗುತ್ತದೆ ಮತ್ತು ಸ್ಥಾನ ಬದಲಾವಣೆ ಆಗುತ್ತದೆ. ಜನರಲ್ಲಿ ಧಾರ್ಮಿಕ ಭಾವನೆ ಹೆಚ್ಚುತ್ತವೆ. 
 
ಮೇಷ:  ಶನಿ ಮಾಗಿ ಆಗುವುದರಿಂದ ನಿಮಗೆ ಲಾಭವಾಗಲಿದೆ. ನೌಕರಿ, ರಾಜಕೀಯ, ವ್ಯಾಪಾರ, ತಂದೆ ಕ್ಷೇತ್ರದಲ್ಲಿ ಲಾಭವಾಗುವುದು. ನಿರುದ್ಯೋಗಿಗಳಿಗೆ ನೌಕರಿ ಲಭಿಸುವುದು. ಆರ್ಥಿಕದಲ್ಲಿ ವೃದ್ದಿಯಾಗುವುದು. ಜೀವನ ಸಂಗಾತಿಯಿಂದ ಲಾಭವಾಗುವುದು. 
 
ಶಾಂತಿ ಪ್ರಾಪ್ತಿಗಾಗಿ ಉಪಾಯ: ಹನುಮಾನ ಚಾಲೀಸ್‌ ಓದಿರಿ. 
 
ವೃಷಭ:ನಿಮಗೆ ಮಾಗಿ ಶನಿಯಿಂದ ಭಾಗ್ಯದಲ್ಲಿ ವೃದ್ದಿಯಾಗುವುದು. ಮಹತ್ವಪೂರ್ಣ ಕಾರ್ಯ ಸಂಭವಿಸುವುದು. ವ್ಯಾಪಾರ-ವ್ಯವಸಾಯ, ನೌಕರಿ, ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಲಾಭವಾಗುವುದು. ಶತ್ರುಗಳ ಮೇಲೆ ಪ್ರಭಾವ ಹೆಚ್ಚುವುದು. 
 
ಶುಭ ಪ್ರಭಾವದಲ್ಲಿ ವೃದ್ದಿಯಾಗಲು ಉಪಾಯ: ಶನಿವಾರ ಆಲದ ಮರಕ್ಕೆ ನೀರು ಅರ್ಪಿಸಿ ಮತ್ತು ಆಲದ ಮರಕ್ಕೆ ಏಳು ಸುತ್ತು ಹಾಕಿ. 
 
ಮಿಥುನ: ನಿಮಗಾಗಿ ಶನಿಯಿಂದ ಭಾಗ್ಯದಲ್ಲಿ ಅಕಸ್ಮಾತ ಲಾಭ ಸಿಗುವುದು ಅಥವಾ ಕಳೆದ ದಿನಗಳಲ್ಲಿ ಲಾಭದ ನಡುವೆ ನಿಂತದ್ದು ಲಭ್ಯವಾಗುವುದು. ಆರೋಗ್ಯದಲ್ಲಿ ಸುಧಾರಣೆ ಕಾಣುವುದು. 
 
ಉಪಾಯ: ಬಡ ವ್ಯಕ್ತಿಗೆ ಕಪ್ಪು ಕಂಬಳಿ ದಾನ ಮಾಡಿ. 
 
ಕರ್ಕ: ನೀವು ಸ್ಥಾನಾಂತರದ ಪ್ರಯತ್ನದಲ್ಲಿದ್ದಿರಿ. ಸ್ಥಾನಾಂತರದ ಸಂಭವ ಹೆಚ್ಚಾಗಿದೆ. ಆದರೆ ಕಾರ್ಯ ಪೂರ್ತಿಗೊಳಿಸುವಲ್ಲಿ ವಿಳಂಬವಾಗುವುದು. ಜೀವನ ಸಂಗಾತಿಯಿಂದ ಲಾಭವಾಗುವುದು. 
 
ಉಪಾಯ: ಬಡ ವ್ಯಕ್ತಿಗೆ ಕಪ್ಪು ಉದ್ದಿನ ಬೇಳೆ ದಾನ ಮಾಡಿ. 
 
ಸಿಂಹ: ದೈನಿಕ  ವ್ಯಾಪಾರ-ವ್ಯವಸಾಯದಲ್ಲಿ ಲಾಭವಾಗಲಿದೆ. ಜೊತೆಗೆ ಪ್ರಸಿದ್ದಿ ಪ್ರಾಪ್ತವಾಗಲಿದೆ. ದೈನಿಕ ಕಾರ್ಯಗಳಲ್ಲಿ ಸಫಲವಾಗುವುದರ ಜೊತೆಗೆ ಜೀವನ ಸಂಗಾತಿಯ ಸಹಾಯ ಲಭಿಸಲಿದೆ. ಶತ್ರುಗಳ ಪ್ರಭಾವವಿರುವುದಿಲ್ಲ. 
 
ಉಪಾಯ: ಶನಿವಾರ ಒಂದು ಚಮಚ ಎಳ್ಳಿನ ಎಣ್ಣೆ ಭೂಮಿಯ ಮೇಲೆ ಹಾಕಿ. 
 
ಕನ್ಯಾ: ಕೌಟುಂಬಿಕ ಸುಖದಲ್ಲಿ ಕೊರತೆ ಇರುವುದು. ಸಂತಾನದಿಂದ ಲಾಭ ಮತ್ತು ಮನೋರಂಜನ ಸಾಧನಗಳಲ್ಲಿ ವೃದ್ದಿಯಾಗುವುದು. ವಾಹನಗಳನ್ನು ಚಲಿಸುವಾಗ ಎಚ್ಚರಿಕೆಯಿಂದಿರಿ. 
 
ಉಪಾಯ: ಮಂಗಳವಾರ ಮತ್ತು ಶನಿವಾರ ಹನುಮಾನನ ಕಾಲಿನ ಮೇಲೆ ಇರುವ ಸಿಂಧೂರವನ್ನು ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳಿ. 
 
ತುಲಾ: ಶನಿ ಮಾಗಿಯಾಗುವುದರಿಂದ ನಿಮಗಾಗಿ ಸಂತಾನ , ವಿಧ್ಯೆ, ಮನೋರಂಜನೆ , ಕೌಟುಂಬಿಕ ವಿಷಯಗಳಲ್ಲಿ , ಸ್ಥಳಿಯ ರಾಜಕೀಯದಲ್ಲಿ ಸಫಲತೆ ಸಿಗುವುದು.  
 
ಉಪಾಯ: ಸ್ನಾನ ಮಾಡುವಾಗ ಕಪ್ಪು ಎಳ್ಳು ಹಾಕಿಕೊಂಡು ಸ್ನಾನ ಮಾಡಿ.  
 
ವೃಷಿಕ: ಶತೃ ನಾಶವಾಗುವುದು. ಸಂಚಾರ ಮಾಧ್ಯಮದಿಂದ ಶುಭ ಸಮಾಚಾರ ಸಿಗುವುದು. ಸಹೋದರರ ಸಹಾಯ,  ಸಹಭಾಗಿತ್ವದಲ್ಲಿ ಸಫಲತೆ ಸಿಗುವುದು. ಕೌಟುಂಬಿಕ ಸಫಲತೆ ಲಭಿಸುವುದು. ಸ್ಥಳಿಯ ರಾಜಕೀಯದಲ್ಲಿ ಕೂಡ ಸಫಲತೆ ಸಿಗುವುದು.  
 
ಉಪಾಯ: ವೃದ್ದರಿಗೆ ಸನ್ಮಾನ ಮಾಡಿ.  
 
ಧನು: ನಿಮಗಾಗಿ ಮಾಗಿ ಶನಿಯಿಂದ ವಾಣಿ ಪ್ರಭಾವದಿಂದ ಲಾಭವಾಗುವುದು ಮತ್ತು ಧನ ಉಳಿತಾಯದ ಯೋಗ ದೊರೆಯುವುದು. ಸಂಚಾರ ಮಾಧ್ಯಮದಿಂದ ಶುಭ ಸಮಾಚಾರ ಲಭಿಸುವುದು. ಸಹಭಾಗಿತ್ವದ ಕಾರ್ಯಗಳಲ್ಲಿ ಸಫಲತೆ ಸಿಗಲಿದೆ. 
 
ಉಪಾಯ: ಪ್ರತಿ ಶನಿವಾರ ನೀಲಿ ಬಣ್ಣದ ಹೂವು ಶನಿದೇವರಿಗೆ ಅರ್ಪಿಸಿ. 
 
ಮಕರ: ಮಾಗಿ ಶನಿಯಿಂದ ನಿಮ್ಮ ಪ್ರಭಾವ ಹೆಚ್ಚುವುದು. ಕೆಲಸಕಾರ್ಯಗಳಲ್ಲಿ ಮನಸ್ಸು ಬರುವುದು. ವಾಣಿ ಪ್ರಭಾವದಿಂದ ಲಾಭವಾಗಲಿದೆ. ಆದಾಯದ ಸಾಧನೆಗಳಲ್ಲಿ ವೃದ್ದಿಯಾಗಲಿದೆ.  
 
ಉಪಾಯ: ಹನುಮಾನನಿಗೆ ಸಿಂಧೂರ ಮತ್ತು  ಜಾಸ್ಮಿನ್ ಎಣ್ಣೆ ಅರ್ಪಿಸಿ. 
 
ಕುಂಭ: ಮಾಗಿ ಶನಿಯಿಂದ ನಿಮ್ಮ ಹೊಸ ಯೋಜನೆಗಳಿಗೆ ಸಫಲತೆ ಸಿಗುವುದು. ಯಾವುದಾದರು ವಿಶೇಷ ಕಾರ್ಯಕ್ಕೆ ಹೋಗುವುದರಿಂದ ಮನಸ್ಸು ಪ್ರಸನ್ನವಾಗುವುದು. ಸ್ಥಾನಾಂತರಣ ಮತ್ತು ಪ್ರಗತಿಯ ಸಂಭವವಿದೆ. 
 
ಉಪಾಯ: ಕಪ್ಪು ಆಕಳಿಗೆ ಶನಿವಾರ ಹುಲ್ಲು ತಿನಿಸಿ. 
 
ಮೀನ: ಮಾಗಿ ಶನಿಯ ಕಾರಣ ಹಲವು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಪ್ರತಿ ಕಾರ್ಯದಲ್ಲಿ ಸಂಯಮದಿಂದ ಇರಿ. ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಿ.  ವಿದೇಶಾಂಗ ವ್ಯವಹಾರಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. 
 
ಉಪಾಯ: ಸಿದ್ದ ಪಡಿಸಿದ ಉದ್ದಿನ ಬೇಳೆ ದಾನ ಮಾಡಿದರೆ ಶುಭವಾಗುವುದು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments