Webdunia - Bharat's app for daily news and videos

Install App

ಬಂಕಿ ಬಿಹಾರಿ ದೇವಸ್ಥಾನದ ಮುಂದೆ ನೋಟುಗಳ ಮಳೆ!

Webdunia
ಸೋಮವಾರ, 20 ಜುಲೈ 2015 (13:29 IST)
ಆಗ್ರಾದ ಬೃಂದಾವನದ ಬಳಿಯ ಬಂಕಿ ಬಿಹಾರಿ ದೇವಸ್ಥಾನದ ಬಳಿ ಶನಿವಾರ ಮಳೆ ಸುರಿಯಿತು. ಆದರೆ ಸುರಿದಿದ್ದು ನೀರಲ್ಲ. 500 ರೂಪಾಯಿಗಳ ನೋಟಿನ ಮಳೆ. ಈ ನೋಟುಗಳ ಮಳೆಯನ್ನು ಸುರಿಸಿದ್ದು ಮಾತ್ರ ಒಂದು ಕೋತಿ. 
ಹಣವೆಂದರೆ ಹೆಣವು ಬಾಯಿ ಬಿಡುತ್ತದೆ ಎಂದು ಹೇಳಲಾಗುತ್ತದೆ. ಅಂದ ಮೇಲೆ ಜನರು ಸುಮ್ಮನಿರುತ್ತಾರೆ. ಮಂಗ ಸುರಿಸುತ್ತಿದ್ದ ನೋಟುಗಳನ್ನು ಸುತ್ತಮುತ್ತಲು ನೆರೆದಿದ್ದ ಜನರು, ಭಿಕ್ಷುಕರು ಎದ್ದು ಬಿದ್ದು ಎತ್ತಿಕೊಂಡರು. ಇಷ್ಟೆಲ್ಲಾ ಹಣವನ್ನು ಕಳೆದುಕೊಂಡವರು ಯಾರೆಂದು ಯಾರು ಕೂಡ ಯೋಚಿಸಲಿಲ್ಲ. ಆದರೆ ವಿಪರ್ಯಾಸವೆಂದರೆ ಹಣವನ್ನು ಕಳೆದುಕೊಂಡವರು ಈ ದೃಶ್ಯವನ್ನೆಲ್ಲಾ ಅಸಹಾಯಕರಾಗಿ ನೋಡುತ್ತ ನಿಂತಿದ್ದರು. 
 
ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ತಿಳಿದು ಬಂದ ಸತ್ಯವೇನೆಂದರೆ ಆಗ್ರಾ ಪ್ರವಾಸಕ್ಕೆಂದು ಮುಂಬೈನ ಬೊರಿವಿಲಿಯಿಂದ ಪತಿ ಮತ್ತು ಮಕ್ಕಳ ಜತೆ ಜತೆ ಬಂದಿದ್ದ ಹೇಮಾವತಿ ಸೋನ್ಕರ್ (50) ಪರ್ಸ್‌ನಲ್ಲಿ 1.5 ಲಕ್ಷ ಹಣವನ್ನು ಇಟ್ಟುಕೊಂಡಿದ್ದರು. 500 ರೂಪಾಯಿಗಳ ಮೂರು ಬಂಡಲ್‌ಗಳನ್ನು ಎಗರಿಸಿದ ಕೋತಿಯೊಂದು ಬಂಕಿ ಬಿಹಾರಿ ದೇವಾಲಯದ ಮುಂದೆ 500 ರೂಪಾಯಿ ನೋಟುಗಳನ್ನು ಒಂದೊಂದಾಗಿ ಎಸೆದಿದೆ. 
 
ಕೋತಿ ಹಣ ಸುರಿಸುತ್ತಿದ್ದಂತೆ ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲ ಭಕ್ತಾದಿಗಳು, ಹೂ ಹಣ್ಣು ವ್ಯಾಪಾರ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಭಿಕ್ಷುಕರು  ಧಾವಿಸಿ ಬಂದು ಹಣವನ್ನು ಹೆಕ್ಕಿಕೊಂಡು ಪರಾರಿಯಾಗಿದ್ದಾರೆ. 
 
ಕಣ್ಣ ಮುಂದೆ ಲಕ್ಷಾಂತರ ರೂಪಾಯಿಗಳನ್ನು  ಕಳೆದುಕೊಂಡ ಕುಟುಂಬ ಹತಾಶೆಯಿಂದ ಅಲ್ಲಿಂದ ಮರಳಿದೆ. 
 
ಬೃಂದಾವನದಲ್ಲಿ ಮಂಗಗಳ ಕಾಯ ಬಹಳ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ, ತಪ್ಪಿದ ಅವಘಡ‌

ಜಗನ್ನಾಥನ ದರ್ಶನಕ್ಕಾಗಿ ಡೊನಾಲ್ಡ್‌ ಟ್ರಂಪ್ ಆಹ್ವಾನವನ್ನೇ ತಿರಸ್ಕರಿಸಿದೆ: ನರೇಂದ್ರ ಮೋದಿ

ಹೀಗಾದ್ರೆ ಯುವಕರ ಕತೆ ಏನು, ಮಗನಿಗೆ ನಿಶ್ಚಿಯವಾಗಿದ್ದ ಯುವತಿಯನ್ನೇ ಕೈಹಿಡಿದ ತಂದೆ

ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ಆರೋಗ್ಯದಲ್ಲಿ ಚೇತರಿಕೆ: ಮಹಿಳೆಗೆ ಒತ್ತಡ, ದೂರು

ಏರ್‌ ಇಂಡಿಯಾ ದುರಂತದ ಬಳಿಕ ವಿಮಾನದಲ್ಲಿ ಈ ಸೀಟಿಗಾಗಿ ಹೆಚ್ಚಿದ ಬೇಡಿಕೆ

Show comments