|
| |
| |
ಕಾರಣಗಳು?
ಕೆಲಸದೊತ್ತಡ ಮತ್ತು ಭಾವನಾತ್ಮಕ ಅವಲಂಬನೆಯ ತುಡಿತ ಇವೆರಡು ಇಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಅನ್ನುವುದು ಗಮನಿಸಬೇಕಾದ ಸಂಗತಿ. ಇದರೊಂದಿಗೆ ಬಡವ ಮತ್ತು ಶ್ರೀಮಂತರ ನಡುವಣ ಅಂತರ ಹೆಚ್ಚಾಗುತ್ತಿದ್ದು, ನಗರೀಕರಣದಿಂದಾಗಿ ಅರ್ಥವ್ಯವಸ್ಥೆಯು ಧ್ರುವೀಕರಣಗೊಂಡು ಜನರಲ್ಲಿ ಹತಾಶೆ, ಸಿಟ್ಟು ಹೆಚ್ಚಾಗುತ್ತಿದೆ. ಈ ಹತಾಶೆಯು ಹೊರಬರುವ ರೀತಿ ಮಾತ್ರ ಭಯಾನಕ ಪರಿಣಾಮಕ್ಕೆ ಕಾರಣವಾಗುತ್ತಿದೆ.ಲವ್ ಮತ್ತು ಸೆಕ್ಸ್
ಅದು ಒತ್ತಟ್ಟಿಗಿರಲಿ. ಮಾನವ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ನಗರ ಜೀವನ ಶೈಲಿಯ ಪರಿಣಾಮವೋ ಎಂಬುದು ಚಿಂತಿಸಬೇಕಾದ ಸಂಗತಿ. ಇತ್ತೀಚೆಗೆ ದೇಶದಲ್ಲಿ ನಡೆದ ಹತ್ಯಾ ಘಟನೆಗಳನ್ನು ಅವಲೋಕಿಸಿದಾಗ ವೇದ್ಯವಾಗುವ ಒಂದು ವಿಷಯವೆಂದರೆ ಈ ಹತ್ಯೆಗಳೊಂದಿಗೆ ಥಳುಕು ಹಾಕಿಕೊಂಡಿರುವ ಲವ್ ಮತ್ತು ಸೆಕ್ಸ್. ಗ್ರಾಮೀಣ ಪ್ರದೇಶಗಳಲ್ಲೂ ಲವ್ ಮತ್ತು ಸೆಕ್ಸ್ ಎಂಬುದು ಮರ್ಡರ್ನಲ್ಲಿ ಪ್ರಧಾನ ಪಾತ್ರ ವಹಿಸುತ್ತದೆಯಾದರೂ, ನಗರ ಪ್ರದೇಶದಲ್ಲಿ ಇದಕ್ಕೆ ಹೆಚ್ಚಿನ ಒತ್ತು. ಯಾಕೆಂದರೆ ಇಲ್ಲಿ ಪ್ರಚಾರವೂ ಹೆಚ್ಚು ದೊರೆಯುತ್ತದೆ, ಸುಶಿಕ್ಷಿತ ಸಮಾಜವೇ ಇದರಲ್ಲಿ ಭಾಗಿಯಾಗಿರುತ್ತದೆ.ಧಾವಂತದ ಯುಗ
ಅವಿಭಕ್ತ ಕುಟುಂಬ ಎಂಬ ಭಾರತೀಯ ಸಂಪ್ರದಾಯವೊಂದು ಸದ್ದಿಲ್ಲದೆ ಮರೆಯಾಗುತ್ತಾ ನಾನು, ನನ್ನದು ಎಂಬಷ್ಟರ ಮಟ್ಟಿಗೇ ಕುಟುಂಬ ಜೀವನ ಪದ್ಧತಿ ಸಂಕುಚಿತಗೊಂಡಿತು. ಬಹುಶಃ ಆಧುನಿಕತೆಯ ಅನಿವಾರ್ಯತೆಯೂ ಅನ್ನಬಹುದು. ಅಲ್ಲೇ ಮಾನವೀಯ ಸಂಬಂಧಗಳ ಕೊಂಡಿಯೊಂದು ಕಳಚಿಕೊಂಡಿತ್ತು. ನಗರೀಕರಣದಲ್ಲಿ ಎಲ್ಲರೂ ನನ್ನವರೇ - 'ವಸುಧೈವ ಕುಟುಂಬಕಂ' ಎಂಬ ಮನೋವೃತ್ತಿ ಬೆಳೆಸುವುದು ಅನಿವಾರ್ಯವಾಯಿತು. ದುಡಿತದ ತುಡಿತ ಇನ್ನಿಲ್ಲದಂತೆ ಬೆಳೆಯಿತು. ನಮಗಾಗಿ, ನಮ್ಮವರಿಗಾಗಿ ಸಮಯವಿಲ್ಲದಂತಾಯಿತು. ನನಗದು ಬೇಕು, ಅದನ್ನು ಪಡೆದೇ ಸಿದ್ಧ, ಅದಕ್ಕಾಗಿ ಏನು ಮಾಡಲೂ ಸಿದ್ಧ ಎಂಬ ಹಂಬಲ ಪ್ರ-ಬಲವಾಗತೊಡಗಿತು. ಏನಿದ್ದರೂ ಫಟಾಫಟ್ ಸಿಗಬೇಕು ಎಂಬ ಮಹದಾಕಾಂಕ್ಷೆ ಬೆಳೆಯಿತು.ನರಕಜೀವನವಾಗುತ್ತಿದೆಯೇ ನಗರಜೀವನ?
ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋದ ವರದಿ ನೋಡಿದರೆ ತಿಳಿಯುತ್ತದೆ. 2006ರಲ್ಲಿ ದೇಶದಲ್ಲಿ ನಡೆದ ಕೊಲೆಗಳ ಹಿಂದೆ ಪ್ರೇಮ ವ್ಯವಹಾರಗಳು ಮತ್ತು ಲೈಂಗಿಕ ಕಾರಣದ ಪಾಲು ಅತ್ಯಧಿಕ. ಪಂಜಾಬ್, ದೆಹಲಿ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಂತೂ ಕೊಲೆಗಳಿಗೆ ಇವುಗಳ ಪಾಲು ಅತ್ಯಧಿಕ.