Webdunia - Bharat's app for daily news and videos

Install App

‘ವಿರಾಟ್ ಕೊಹ್ಲಿಯೇನೂ ದೇವ ಮಾನವನಲ್ಲ!’

Webdunia
ಬುಧವಾರ, 1 ಮಾರ್ಚ್ 2017 (09:53 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತೀ ಪಂದ್ಯದಲ್ಲೂ ಶತಕದ ಮೇಲೆ ಶತಕ ಸಿಡಿಸಲು ಅವರೇನು ದೇವಮಾನವರಲ್ಲ. ಅವರೂ ನಮ್ಮಂತೆ ಮನುಷ್ಯರೇ. ಕೆಲವೊಮ್ಮೆ ವಿಫಲರಾಗುವುದು ಸಹಜ… ಹೀಗಂತ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.


ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೇ ಕೇವಲ 13 ರನ್ ಗಳಿಸಿದ್ದಕ್ಕೆ ಕೊಹ್ಲಿ ಮೇಲೆ ಟೀಕೆಗಳ ಸುರಿಮಳೆ ಸುರಿಸುತ್ತಿರುವುದಕ್ಕೆ ಮಾಜಿ ನಾಯಕ ಈ ರೀತಿ ಪ್ರತಿಕ್ರಿಯಿಸಿದ್ದಾರೆ. “ಕೊಹ್ಲಿ ಕೂಡಾ ಮನುಷ್ಯ. ಹಾಗಾಗಿ ಒಂದಲ್ಲ ಒಂದು ದಿನ ವಿಫಲವಾಗುವುದು ಸಹಜ. ಬಹುಶಃ ಅವರು ಲೂಸ್ ಶಾಟ್ ಆಡಿದ್ದಕ್ಕೇ ಔಟಾದರು” ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಖಂಡಿತವಾಗಿಯೂ ಮುಂದಿನ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡುತ್ತಾರೆ ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರಿಗೂ ಯಾವತ್ತೂ ಗೆಲ್ಲುತ್ತಲೇ ಇರಲು ಸಾಧ್ಯವಿಲ್ಲ. ಸಚಿನ್ ತೆಂಡುಲ್ಕರ್ ಕೂಡಾ ಬೆನ್ನು ಬೆನ್ನಿಗೆ ನಾಲ್ಕು ದ್ವಿಶತಕ ಸಿಡಿಸಿದ್ದನ್ನು ನಾವು ನೋಡಿಲ್ಲ. ಅದನ್ನು ಕೊಹ್ಲಿ ಮಾಡಿದ್ದಾರೆ. ನಿಜಕ್ಕೂ ಅವರು ಪುಟಿದೇಳುತ್ತಾರೆ ಎಂದು ಗಂಗೂಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ಮುಂದಿನ ಸುದ್ದಿ
Show comments