ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೋಟಿ ಕೋಟಿ ಹಣ ಗಳಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಪರಿಯಲ್ಲಿ ದುಡ್ಡು ಸಂಪಾದಿಸಿದ್ದರೂ ಅವರಿಗೊಂದು ಚಾಳಿ ಇದೆಯಂತೆ. ಜೇಬಿನಿಂದ ಹಣ ತೆಗೆಯಲು ಅವರು ಹಿಂದೇಟು ಹಾಕುವುದು ಸಾಮಾನ್ಯವಂತೆ.
ಹೌದು ಕೊಹ್ಲಿ ದಿಲ್ದಾರ್ ಅಂತಾನೇ ಅವರ ಅಭಿಮಾನಿಗಳು ಅಂದುಕೊಂಡಿದ್ರು ಆದರೆ ಅವರು ಪಕ್ಕಾ ಕಂಜೂಸ್ ಎನ್ನೋ ಸಂಗತಿ ಬಹಿರಂಗವಾಗಿದೆ.
ಇದನ್ನು ನಾವು ಹೇಳುತ್ತಿಲ್ಲ. ಸ್ವತಃ ಅವರ ಸಹೋದ್ಯೋಗಿ ಯುವರಾಜ್ ಸಿಂಗ್ ಅವರೇ ಈ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ನಿಮ್ಮ ತಂಡದಲ್ಲಿ ಯಾರು ಅತ್ಯಂತ ಕಂಜೂಸ್ ಎಂದು ರೇಡಿಯೋ ಸಂದರ್ಶನವೊಂದರಲ್ಲಿ ಕೇಳಲಾಗಿ ಯುವಿ ಕೊಹ್ಲಿ ಹೆಸರನ್ನು ಹೇಳಿ ಬಿಡಬೇಕೆ?
ತಂಡದ ಸದಸ್ಯರಲ್ಲಿ ಯಾರು ಕೂಡ ಕೊಹ್ಲಿಯೊಂದಿಗೆ ಹೊರಗಡೆ ಹೋಗಲು ಇಷ್ಟ ಪಡುವುದಿಲ್ಲ. ಯಾಕೆಂದರೆ ಅವರು ಮಹಾ ಕಂಜೂಸ್. ಅವರ ಜತೆ ಸುತ್ತಾಡೋಕೆ ಹೋದ್ರೆ ನಮ್ಮ ಜೇಬಿಗೆ ಕತ್ತರಿ ಬೀಳೋದ್ರಲ್ಲಿ ಅನುಮಾನವೇ ಇಲ್ಲ.
ತಂಡದ ಸದಸ್ಯರ ಜತೆ ಜೊತೆಯಾಗಿ ಹೊರಗಡೆ ಹೋದ್ರೆ ಕೊಹ್ಲಿ ಚೆನ್ನಾಗಿ ತಿಂತಾರಂತೆ. ಆದರೆ ಬಿಲ್ ಕಟ್ಟೋವಾಗ ಮಾತ್ರ ಎಸ್ಕೇಪ್ ಆಗುತ್ತಾರಂತೆ. ನೀವು ಬಿಲ್ ಕಟ್ಟಿ ಎಂದು ಫೋರ್ಸ್ ಮಾಡಿದರೂ ವಿರಾಟ್ ಬಿಲ್ ಕಟ್ಟಲು ಸುತಾರಾಂ ಒಪ್ಪುವುದಿಲ್ಲ. ಸುಮ್ಮನೆ ಹಿಂದೆ ನಿಂತ್ಕೋತಾರೆ. ಬಳಿಕ ನಾನೇ ಬಿಲ್ ಕಟ್ಟಿ ಬರುತ್ತೇನೆ ಎಂದು ಸ್ವತಃ ಯುವಿ ಹೇಳಿದ್ದಾರೆ.
ನಿಮ್ಮ ತಂಡದಲ್ಲಿ ಯಾರು ಜಿಪುಣರು ಎಂದು ಕೇಳಿದ ಕೂಡಲೇ ಹಿಂದು ಮುಂದೆ ಯೋಚಿಸದೇ ಕೊಹ್ಲಿ ಮೇಲೆ ಕಲ್ಲು ಎತ್ತಿ ಹಾಕಿರುವ ಯುವಿಗೆ ತಮ್ಮ ಈ ಮಾತಿಂದ ಕೊನೆಗೆ ಕೊಹ್ಲಿಗೆ ಬೇಸರವಾಗಬಹುದು ಅನ್ನಿಸರಬೇಕು. ಒಂದೇ ನಿಮಿಷದಲ್ಲಿ ಯೂ-ಟರ್ನ್ ಹೊಡೆದಿರುವ ಯುವಿ, ಹಾಗೇನಿಲ್ಲ ಮಜಾ ಮಾಡಿದ್ದು, ನಮ್ಮ ತಂಡದಲ್ಲಿ ಯಾರೂ ಕಂಜೂಸ್ ಎಲ್ಲ ಎಂದು ಜಾರಿಕೊಂಡರು.
ಏನೇ ಇರಲಿ, ಕೊಹ್ಲಿ ತಮ್ಮ ಕಂಜೂಸ್ತನವನ್ನು ಹೀಗೆ ಮುಂದುವರೆಸಿದರೆ, ನಾಳೆ ಅವರ ಕೈ ಹಿಡಿಯಲಿರುವ ಅನುಷ್ಕ, 'ಜಿಪುಣ ನನ್ನ ಗಂಡ' ಎಂದು ಆಡಿಕೊಳ್ಳದಿರಲಾರಳು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.