Webdunia - Bharat's app for daily news and videos

Install App

ಬೇಜವಬ್ದಾರಿಯುತ ವರದಿಗೆ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು

Webdunia
ಶುಕ್ರವಾರ, 24 ಫೆಬ್ರವರಿ 2017 (08:54 IST)
ಮುಂಬೈ: ಹರ್ಪ್ರೀತ್ ಸಿಂಗ್-ಹರ್ಮೀತ್ ಸಿಂಗ್… ಹೆಸರಿನ ನಡುವೆ ಒಂದು ಅಕ್ಷರ ಮಾತ್ರ ವ್ಯತ್ಯಾಸ. ಹಾಗಾಗಿ ಎಡವಟ್ಟು ಆಗೋದು ಸಹಜ. ಆದರೆ ಇಂತಹದ್ದೊಂದು ಎಡವಟ್ಟಿನಿಂದ ಕ್ರಿಕೆಟಿಗನ ಐಪಿಎಲ್ ಭವಿಷ್ಯವೇ ಹಾಳಾಯ್ತು.


ಎಲ್ಲಾ ಸರಿಯಾಗಿದ್ದರೆ, ಹರ್ಪ್ರೀತ್ ಸಿಂಗ್ ಭಾಟಿಯಾ ಎಂಬ ಈತ ಈಗ ಮುಂಬೈ ಇಂಡಿಯನ್ಸ್ ತಂಡಕ್ಕೆ ಉತ್ತಮ ಮೊತ್ತಕ್ಕೆ ಹರಾಜಾಗಬೇಕಿತ್ತು. ಆದರೆ ಐಪಿಎಲ್ ಹರಾಜು ಸಂದರ್ಭದಲ್ಲೇ ಭಾರತ ಎ ತಂಡದ ಇನ್ನೊಬ್ಬ ಕ್ರಿಕೆಟಿಗ ಹರ್ಮೀತ್ ಸಿಂಗ್ ರೈಲ್ವೇ ಫ್ಲ್ಯಾಟ್ ಫಾರಂ ಮೇಲೆ ಕಾರು ಓಡಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

ಪ್ರಕರಣದ ಕುರಿತು ವರದಿ ಮಾಡುವಾಗ ಕೆಲವು ಮಾಧ್ಯಮಗಳು ಆತನ ಹೆಸರನ್ನು ಹರ್ಮೀರ್ ಬದಲಿಗೆ ಹರ್ಪ್ರೀತ್ ಎಂದು ಬರೆದಿದ್ದವು. ಇದು ಅಮಾಯಕ ಕ್ರಿಕೆಟಿಗನ ಭವಿಷ್ಯ ಹಾಳು ಮಾಡಿತು. ಆತನನ್ನು ಖರೀದಿಸಲು ಮುಂದಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಅಪರಾಧದ ಸುದ್ದಿ ಓದಿ ಈತನೇ ಆತ ಎಂದು ತಪ್ಪಾಗಿ ತಿಳಿದು ಖರೀದಿಸಲೇ ಇಲ್ಲ.

ಹೀಗಾಗಿ ಐಪಿಎಲ್ ನಲ್ಲಿ ಭಾಗವಹಿಸಲು ಯುವ ಕ್ರಿಕೆಟಿಗನ ಆಸೆ ಕಮರಿ ಹೋಯ್ತು. ವಿಷಯ ತಿಳಿದ ನಂತರ ಮುಂಬೈ ಇಂಡಿಯನ್ಸ್ ತಂಡ ತಾನೇ ಬೇಸರಪಟ್ಟುಕೊಂಡಿತು. ಆದರೇನಂತೆ, ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕ್ಯಾಚ್‌ಗಳನ್ನು ಬಿಟ್ಟು ಕೆಟ್ಟ ಗಿಲ್ ಪಡೆ, ಇಂಗ್ಲೆಂಡ್‌ಗೆ 5 ವಿಕೆಟ್‌ಗಳ ಗೆಲುವು

ENG vs IND: ಟೆಸ್ಟ್‌ ಆರಂಭಕ್ಕೂ ಮುನ್ನಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ

ದಯವಿಟ್ಟು ಎಲ್ಲ ಟೆಸ್ಟ್‌ಗಳನ್ನು ಆಡಿ: ಬೂಮ್ರಾಗೆ ಪತ್ನಿಯಲ್ಲೇ ಸಂದೇಶ ಕಳುಹಿಸಿದ ಗವಾಸ್ಕಾರ್‌, ಪೂಜಾರ

ಅದ್ಭುತ ಪ್ರದರ್ಶನ ನೀಡಿಯೂ ಕೆಎಲ್ ರಾಹುಲ್ ಗೆ ತಂಡದಲ್ಲಿ ಇಂಥಾ ಸ್ಥಾನವೇ

ಪೆವಿಲಿಯನ್ ನಲ್ಲಿ ಕೂತು ಯಾರೂ ಮಾಡದ ಕೆಲಸವೊಂದನ್ನು ಮಾಡ್ತಾರೆ ಸಾಯಿ ಸುದರ್ಶನ್

ಮುಂದಿನ ಸುದ್ದಿ
Show comments