Webdunia - Bharat's app for daily news and videos

Install App

‘ವೃದ್ಧಿಮಾನ’ನಿಗೂ ‘ಸಹಾ’ ಒಲಿಯಿತು ಶತಕ! ಡಿಕ್ಲೇರ್ ಮಾಡಿದ ಟೀಂ ಇಂಡಿಯಾ

Webdunia
ಶುಕ್ರವಾರ, 10 ಫೆಬ್ರವರಿ 2017 (15:20 IST)
ಹೈದರಾಬಾದ್: ಬಾಂಗ್ಲಾದೇಶ ಸರಣಿ ಆರಂಭಕ್ಕೆ ಮೊದಲು ಪಾರ್ಥಿವ್ ಪಟೇಲ್ ರನ್ನು ಆಯ್ಕೆ ಮಾಡಬೇಕೋ, ವೃದ್ಧಿಮಾನ್ ಸಹಾರನ್ನು ಪರಿಗಣಿಸಬೇಕೋ ಎಂದು ಚರ್ಚೆಯಾಗಿತ್ತು. ಕೊನೆಗೂ ಆಯ್ಕೆ ಸಮಿತಿಯ ತೀರ್ಮಾನವನ್ನು ಸಮರ್ಥಿಸಿಕೊಳ್ಳುವಂತಹ ಆಟ ವೃದ್ಧಿಮಾನ್ ಬ್ಯಾಟ್ ನಿಂದ ಇಂದು ಹರಿದು ಬಂತು.

 
ಐದನೇ ಕ್ರಮಾಂಕದಲ್ಲಿ ಆಡಲಿಳಿದು ತಂಡಕ್ಕೆ ವೇಗವಾಗಿ ರನ್ ಗಳಿಸುವ ಕೆಲಸ ಅವರದಾಗಿತ್ತು. ಅದನ್ನವರು ಇಂದು ಸಮರ್ಥವಾಗಿ ನಿಭಾಯಿಸಿದರು. ಬಾಂಗ್ಲಾ ಬೌಲರ್ ಗಳನ್ನು ಸಲೀಸಾಗಿ ಎದುರಿಸಿದ ಅವರು ಶತಕ (106 ರನ್) ದಾಖಲಿಸಿದರು. ಇದು ಅವರ ವೃತ್ತಿ ಜೀವನದ 2 ನೇ ಶತಕವಾಗಿತ್ತು. ಇದನ್ನು ಅವರು ಸಿಕ್ಸರ್ ಮೂಲಕ ಪೂರೈಸಿದ್ದು ವಿಶೇಷವಾಗಿತ್ತು.

ಇನ್ನೊಂದು ತುದಿಯಲ್ಲಿದ್ದ ರವೀಂದ್ರ ಜಡೇಜಾ ಕೂಡಾ ಅತ್ಯುತ್ತಮವಾಗಿ ಪರಿಸ್ಥಿತಿಗೆ ತಕ್ಕ ಹಾಗೆ ವೇಗವಾಗಿ ರನ್ ಗಳಿಸಿ ಅರ್ಧಶತಕ (60 ರನ್) ದಾಖಲಿಸಿದರು. ಬಹುಶಃ ಇನ್ನೂ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡುತ್ತಿದ್ದರೆ ಅವರೂ ಶತಕ ಗಳಿಸುತ್ತಿದ್ದರೇನೋ. ಆದರೆ ಇಂದಿನ ದಿನ ಸ್ವಲ್ಪ ಹೊತ್ತಾದರೂ ಬಾಂಗ್ಲಾದೇಶವನ್ನು ಬ್ಯಾಟಿಂಗ್ ಗೆ ಇಳಿಸಬೇಕೆಂದು ತಂಡದ ಲೆಕ್ಕಾಚಾರವಾಗಿತ್ತೆನಿಸುತ್ತದೆ. ಅದಕ್ಕೇ ತಂಡ 6 ವಿಕೆಟ್ ಕಳೆದುಕೊಂಡು 687 ರನ್ ಗಳಿಸಿದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಇದರೊಂದಿಗೆ ಭಾರತ ಸತತ ಮೂರು ಬಾರಿ 600 ಪ್ಲಸ್ ರನ್ ಪೇರಿಸಿದ ಸಾಧನೆ ಮಾಡಿತು. ಭಾರತದ ಪರ ಮೂವರು ಶತಕ ಹಾಗೂ ಮೂವರು ಅರ್ಧಶತಕ ಗಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ಮುಂದಿನ ಸುದ್ದಿ
Show comments