ಸಚಿನ್ ತೆಂಡುಲ್ಕರ್ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದು ಯಾಕೆ?

Webdunia
ಸೋಮವಾರ, 30 ಜನವರಿ 2017 (09:01 IST)
ನವದೆಹಲಿ: ನರೇಂದ್ರ ಮೋದಿ ಭಾರತದ ಪ್ರಧಾನಿ. ಸಚಿನ್ ತೆಂಡುಲ್ಕರ್ ಕ್ರಿಕೆಟಿಗರಾದರೂ, ಸಂಸದರು. ಜತೆಗೆ ಮೋದಿಯವರ ಕನಸಿನ ಕೂಸು ಆದರ್ಶ ಗ್ರಾಮ ಯೋಜನೆಯನ್ನು ಮಾಡಿ ತೋರಿಸಿದವರು. ಇದೀಗ ತೆಂಡುಲ್ಕರ್ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಕಾರಣ ಬೇರೆಯೇ ಇದೆ.

 
ಪ್ರತೀ ತಿಂಗಳು ಮೋದಿ ಆಕಾಶವಾಣಿಯಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಅದರಲ್ಲಿ ಮಾಡುವ ಭಾಷಣದಲ್ಲಿ ಮೋದಿ ಉತ್ತಮ ಕೆಲಸ ಮಾಡಿದ ಯಾವುದೇ ಕ್ಷೇತ್ರದವರನ್ನು ಉಲ್ಲೇಖಿಸುತ್ತಾರೆ. ಅದೇ ರೀತಿ ಈ ತಿಂಗಳ ಭಾಷಣದಲ್ಲಿ ಮೋದಿ ಸಚಿನ್ ತೆಂಡುಲ್ಕರ್ ಅವರ ಉದಾಹರಣೆ ಕೊಟ್ಟಿದ್ದಾರೆ.

ಮುಂಬರುವ ಪರೀಕ್ಷೆಗಳಿಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಮೋದಿ ಸಚಿನ್ ತೆಂಡುಲ್ಕರ್ ಅವರಂತೆ ಗಮನವಿಟ್ಟು ಅಭ್ಯಾಸ ಮಾಡಿ. ಸಚಿನ್ ರಂತೆ ನಿಮಗೇ ಸವಾಲು ಹಾಕಿಕೊಂಡು ಗೆಲ್ಲಿ ಎಂದು ಸಲಹೆ ನೀಡಿದ್ದರು. ಇದಕ್ಕೆ ಸಚಿನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

‘ನನ್ನನ್ನು ಉಲ್ಲೇಖಿಸಿದ್ದಕ್ಕೆ ಧನ್ಯವಾದಗಳು ಮೋದಿ ಜೀ. ಯಾರೇ ಆದರೂ ಸರಿಯಾದ ತಯಾರಿ ನಡೆಸುವುದು ಮುಖ್ಯ. ವಿದ್ಯಾರ್ಥಿಗಳೇ ಆಗಲಿ, ಆಟಗಾರರೇ ಆಗಲಿ ಏಕಾಗ್ರತೆ ಇದ್ದರೆ ಸವಾಲುಗಳನ್ನು ಎದುರಿಸಲು ಸುಲಭವಾಗುತ್ತದೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs MI: ಆರ್‌ಸಿಬಿ ವಿರುದ್ಧ ಮುಂಬೈ ವನಿತೆಯರಿಗೆ ಜಯ, ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ ಗೊತ್ತಾ

ರನ್‌ ಮಳೆ ಸುರಿಸುತ್ತಿರುವ ಅಭಿಷೇಕ್‌ ಬ್ಯಾಟನ್ನು ಅಚ್ಚರಿಯಿಂದ ವೀಕ್ಷಿಸಿದ ನ್ಯೂಜಿಲೆಂಡ್‌ ಆಟಗಾರರು

WPL 2026: ಆರ್‌ಸಿಬಿಗೆ ಇಂದು ನಿರ್ಣಯಕ ಪಂದ್ಯ, ಈ ಪಂದ್ಯ ಗೆದ್ದರೆ ನೇರ ಫೈನಲ್‌ಗೆ ಎಂಟ್ರಿ

ಗುರುವಿಗೆ ತಕ್ಕ ಶಿಷ್ಯನಂತೆ ಅಬ್ಬರಿಸಿದ ಅಭಿಷೇಕ್‌ ಶರ್ಮಾ: ಮತ್ತೆ ಪ್ರಜ್ವಲಿಸಿದ ಸೂರ್ಯ

3rd T20: ಏಕದಿನ ಸರಣಿಯ ಸೋಲಿಗೆ ಮುಯ್ಯಿ ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ

ಮುಂದಿನ ಸುದ್ದಿ
Show comments