ಪಂದ್ಯದ ನಡುವೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಪೆವಿಲಿಯನ್ ಗೆ ಹೋಗಿದ್ದಕ್ಕೆ ಕಾರಣ ಏನು ಗೊತ್ತಾ?

Webdunia
ಶುಕ್ರವಾರ, 24 ಫೆಬ್ರವರಿ 2017 (09:03 IST)
ಪುಣೆ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ನ ಮೊದಲ ದಿನ ಆಸೀಸ್ ಆರಂಭಿಕ ಮ್ಯಾಟ್ ರೆನ್ ಶೋ ಪಂದ್ಯದ ನಡುವೆ ಔಟಾಗದಿದ್ದರೂ ಪೆವಲಿಯನ್ ಗೆ ಮರಳಿದ್ದರು. ಗಾಯವೇನೂ ಆಗಿರಲಿಲ್ಲ. ಹಾಗಿದ್ದರೂ ಅವರು ಆಟ ಅರ್ಧಕ್ಕೆ ನಿಲ್ಲಿಸಿ ಹೋಗಿದ್ದೇಕೆ ಎನ್ನುವುದಕ್ಕೆ ಕಾರಣ ಈಗ ಗೊತ್ತಾಗಿದೆ.

 
ಇದಕ್ಕೆಲ್ಲಾ ಕಾರಣ ಟಾಯ್ಲೆಟ್ ಗೆ ಹೋಗಲು ಅವಸರವಾಗಿದ್ದು ಎಂದು ಸ್ವತಃ ರೆನ್ ಶೋ ಬಹಿರಂಗಪಡಿಸಿದ್ದಾರೆ. “ನೈಸರ್ಗಿಕ ಕರೆ ಮುಂದೆ ನಿಮ್ಮ ಯಾವ ಆತ್ಮ ಶಕ್ತಿಯೂ ಕೆಲಸಕ್ಕೆ ಬರಲ್ಲ. ಡೇವಿಡ್ ವಾರ್ನರ್ ಔಟಾಗುವ 5 ನಿಮಿಷ ಮೊದಲೇ ನನಗೆ ಬಹಿರ್ದೆಸೆಗೆ ಹೋಗಲು ಅವಸರವಾಗಿತ್ತು. ಆದರೆ ತಡೆದುಕೊಂಡು ಕೂತಿದ್ದೆ.

ಆದರೆ ಯಾಕೋ ಇದರಿಂದ ನನಗೆ ಬ್ಯಾಟಿಂಗ್ ಮಾಡಲೂ ಕಷ್ಟವಾಗುತ್ತಿದೆ ಅನಿಸಿತು. ಅಂಪಾಯರ್ ಬಳಿ ಹೋಗಿ ಊಟದ ವಿರಾಮಕ್ಕೆ ಎಷ್ಟು ಸಮಯವಿದೆ ಎಂದು ಕೇಳಿದೆ. ಅರ್ಧಗಂಟೆ ಇದೆ ಎಂದರು. ಅಷ್ಟು ಸಮಯ ನನ್ನಿಂದ ತಡೆದುಕೊಂಡು ಬ್ಯಾಟಿಂಗ್ ಮಾಡಲು ಕಷ್ಟವಾಗಬಹುದು ಎನಿಸಿತು. ಅದಕ್ಕೆ ನಾಯಕ ಮತ್ತು ಅಂಪಾಯರ್ ಬಳಿ ಹೋಗಿ ಕಾರಣ ವಿವರಿಸಿ ಪೆವಿಲಿಯನ್ ಗೆ ಮರಳಿದೆ” ಎಂದು ರೆನ್ ಶೋ ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಫಾರ್ಮ್ ಕಳೆದುಕೊಂಡಿದ್ದೀರಾ ಎಂದರೆ ಅಳಿಯ ಅಲ್ಲ ಮಗಳ ಗಂಡ ಎಂದ ಸೂರ್ಯಕುಮಾರ್ ಯಾದವ್

ಹರ್ಷಿತ್ ರಾಣಾಗೆ ಮಾತ್ರ ಸ್ಪೆಷಲ್ ಅಭಿನಂದನೆ ಸಲ್ಲಿಸಿದ ಗಂಭೀರ್: ಇದು ಸರೀನಾ ಎಂದ ಫ್ಯಾನ್ಸ್ video

ಮೆಸ್ಸಿ ಕಾರ್ಯಕ್ರಮದ ಮುಖ್ಯ ಆಯೋಜಕ ಶತಾದ್ರು ದತ್ತಗೆ ಬಿಗ್‌ ಶಾಕ್

ಮೆಸ್ಸಿ ಕಾರ್ಯಕ್ರಮಕ್ಕೆ ನಿರಾಕರಣೆ, ಮಮತಾ ಸರ್ಕಾರದ ವಿರುದ್ಧ ರಾಜ್ಯಪಾಲರ ಪ್ರಶ್ನೆ

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

ಮುಂದಿನ ಸುದ್ದಿ
Show comments