Select Your Language

Notifications

webdunia
webdunia
webdunia
webdunia

ಅಭಿಮಾನಿಗೆ ದೇವರು ವಿಶೇಷ ಕರೆ ಕೊಟ್ಟಿದ್ದು ಯಾಕೆ?

ಅಭಿಮಾನಿಗೆ ದೇವರು ವಿಶೇಷ ಕರೆ ಕೊಟ್ಟಿದ್ದು ಯಾಕೆ?
Mumbai , ಶನಿವಾರ, 10 ಡಿಸೆಂಬರ್ 2016 (10:10 IST)
ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ ಸುಧೀರ್ ಗೌತಮ್. ಎಂದರೆ ಯಾರಿಗೂ ಪಕ್ಕನೆ ಗೊತ್ತಾಗಲ್ಲ. ಆದರೆ ಭಾರತ ಆಡುವ ಪ್ರತೀ ಪಂದ್ಯದಲ್ಲೂ ಮೈ ತುಂಬಾ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡು, ಶಂಖ ಊದುವ ವ್ಯಕ್ತಿಯನ್ನು ಎಲ್ಲರಿಗೂ ಗೊತ್ತಿರುತ್ತದೆ.

ಅವರೇ ಸುಧೀರ್ ಗೌತಮ್. ಅವರು ಅಪ್ಪಟ ತೆಂಡುಲ್ಕರ್ ಅಭಿಮಾನಿ. ತೆಂಡುಲ್ಕರ್ ನಿವೃತ್ತಿಯಾದ ಮೇಲೂ ಭಾರತ ತಂಡವನ್ನು ಮೈದಾನದಲ್ಲಿ ಪ್ರೋತ್ಸಾಹಿಸುವುದನ್ನು ಬಿಟ್ಟಿಲ್ಲ. ಆದರೆ ಮುಂಬೈ ಟೆಸ್ಟ್ ಪಂದ್ಯದ ಮೊದಲ ದಿನ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ.

ಕಾರಣ ಏನು ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು, ದೇವರು ಕರೆದಾಗ ಹೋಗಲೇಬೇಕು ಎಂದು. ಅಸಲಿಗೆ ತೆಂಡುಲ್ಕರ್ ತಮ್ಮ ಅಪ್ಪಟ ಅಭಿಮಾನಿಯನ್ನು ತಾವು ಪಾಲುದಾರಾಗಿರುವ ಬ್ಯಾಡ್ಮಿಂಟನ್ ತಂಡದ ಪ್ರಚಾರಕ್ಕೆ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಸಚಿನ್ ರನ್ನು ಕ್ರಿಕೆಟ್ ನ ದೇವರೆಂದೇ ತಿಳಿದುಕೊಂಡಿರುವ ಸುಧೀರ್ ಈ ಮಾತು ಹೇಳಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊರಿಯಾ ಓಪನ್ ಸೆಮಿಫೈನಲ್ ಗೆ ಪಿ. ಕಶ್ಯಪ್