ಮುಂಬೈ: ಅನಿಲ್ ಕುಂಬ್ಳೆಯಿಂದ ತೆರವಾದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಹೊಸದಾಗಿ ಯಾರನ್ನು ಆಯ್ಕೆ ಮಾಡಬಹುದು? ಹೀಗೊಂದು ಕುತೂಹಲಕ್ಕೆ ಕೋಚ್ ಆಯ್ಕೆಗಾರರ ಸಮಿತಿಯ ಸದಸ್ಯರಾದ ಸೌರವ್ ಗಂಗೂಲಿ ಉತ್ತರಿಸಿದ್ದಾರೆ.
ಇಂದಿನಿಂದ ಆರಂಭವಾಗಿರುವ ಬಿಸಿಸಿಐ ಸಭೆಗೆ ಹಾಜರಾಗಿರುವ ಗಂಗೂಲಿ ಇದಕ್ಕೂ ಮೊದಲು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ‘ಯಾರು ಟೀಂ ಇಂಡಿಯಾಗೆ ಪಂದ್ಯ ಗೆಲ್ಲಿಸಿಕೊಡಬಲ್ಲರೋ ಅವರನ್ನೇ ಆರಿಸುತ್ತೇವೆ’ ಎಂದು ಗಂಗೂಲಿ ಹೇಳಿದ್ದಾರೆ.
ಈ ಬಾರಿ ವಿರಾಟ್ ಕೊಹ್ಲಿ ಜತೆ ಹೊಂದಿಕೊಳ್ಳಬಲ್ಲ ಕೋಚ್ ಆಯ್ಕೆ ಮಾಡುವುದಾಗಿ ಅವರು ಹೇಳಿದ್ದಾರೆ. ‘ನಾಯಕನೇ ಬಾಸ್ ಆಗಲಿ. ಕೊಹ್ಲಿ ಜತೆಗೆ ಚೆನ್ನಾಗಿ ಬೆರೆಯಬಲ್ಲ ವ್ಯಕ್ತಿಯನ್ನು ಹುಡುಕುತ್ತೇವೆ. ಎಲ್ಲದಕ್ಕೂ ಬಿಸಿಸಿಐ ನಿರ್ದೇಶನಕ್ಕೆ ಕಾಯುವುದಾಗಿ ಅವರು ಹೇಳಿದ್ದಾರೆ.
ಜುಲೈ 9 ರವರೆಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೊಸದಾಗಿ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಕೂಡಾ ಅರ್ಜಿ ಸಲ್ಲಿಸಿದ್ದಾರೆನ್ನಲಾಗಿದೆ. ಗಂಗೂಲಿ, ಲಕ್ಷ್ಮಣ್ ಮತ್ತು ಸಚಿನ್ ಒಳಗೊಂಡ ಸಲಹಾ ಸಮಿತಿ ಕೋಚ್ ಆಯ್ಕೆ ಮಾಡಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ