Select Your Language

Notifications

webdunia
webdunia
webdunia
webdunia

ಚಮಕ್ ಕೊಡಲು ಹೋದ ವೀರೇಂದ್ರ ಸೆಹ್ವಾಗ್ ಗೇ ತಿರುಮಂತ್ರ ಕೊಟ್ಟ ಮೊಹಮ್ಮದ್ ಕೈಫ್

ಚಮಕ್ ಕೊಡಲು ಹೋದ ವೀರೇಂದ್ರ ಸೆಹ್ವಾಗ್ ಗೇ ತಿರುಮಂತ್ರ ಕೊಟ್ಟ ಮೊಹಮ್ಮದ್ ಕೈಫ್
NewDelhi , ಶುಕ್ರವಾರ, 2 ಡಿಸೆಂಬರ್ 2016 (11:17 IST)
ನವದೆಹಲಿ: ಯಾರದೇ ಜನುಮ ದಿನವಿದ್ದರೂ ಸಾಕು. ವಿಶಿಷ್ಟವಾಗಿ ಶುಭಾಷಯ ಕೋರಿ ಸುದ್ದಿ ಮಾಡುವುದರಲ್ಲಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಎತ್ತಿದ ಕೈ. ಹಾಗಿರುವ ಸೆಹ್ವಾಗ್ ಇದುವರೆಗೆ ಯಾರ್ಯಾರದ್ದೋ ಕಾಲೆಳದರು. ಇದೀಗ ಅವರಿಗೇ ತಿರುಮಂತ್ರ ಹಾಕಿದ್ದಾರೆ ಒಬ್ಬರು.

ಅವರು ಭಾರತದ ಜಾಂಟಿ ರಾಡ್ಸ್ ಎಂದೇ ಹೆಸರಾಗಿರುವ ಫೀಲ್ಡಿಂಗ್ ಚತುರ ಮೊಹಮ್ಮದ್ ಕೈಫ್. ಪಾದರಸದಂತೆ ಮೈದಾನದಲ್ಲಿ ಓಡಾಡುವ ಕೈಫ್ ಜನುಮದಿನಕ್ಕೆ ಸೆಹ್ವಾಗ್ ಡಿಫರೆಂಟಾಗಿ ಶುಭ ಹಾರೈಸಿದ್ದರು. ಅದರಲ್ಲಿ ಗದರ್-ಏಕ್ ಪ್ರೇಮ್ ಕಥಾ ಸಿನಿಮಾದ ಉಡ್ ಜಾ ಕಾಲೇ ಕವನ್ ತೇರೇ ಮೂವಿಚ್ ಹಾಡನ್ನು ಉಲ್ಲೇಖಿಸಿ ನೀನು ಈ ಹಾಡನ್ನು ಸೀರಿಯಸ್ ಆಗಿ ತೆಗೆದುಕೊಂಡಿರಬೇಕು. ಅದಕ್ಕೇ ಮೈದಾನದಲ್ಲಿ ಎಲ್ಲೇ ನೋಡಿದರೂ ಕಾಣಿಸುತ್ತಿದ್ದೆ ಎಂದು ಕಿಚಾಯಿಸಿದ್ದರು.

ಇದನ್ನು ಓದಿದ ಕೈಫ್ ಎಲ್ಲರಂತೆ ನಕ್ಕು ಸುಮ್ಮನೆ ಕೂರಲಿಲ್ಲ. ಹೌದು ವೀರೂ ಭಾಯ್. ನೀನೂ ಕೂಡಾ ದೇ ಧನಾ ಧನ್ ಸಿನಿಮಾ ರಿಲೀಸ್ ಗೂ ಮುನ್ನ ಅದರ ಶೀರ್ಷಿಕೆಯನ್ನು ಗಂಭೀರವಾಗಿ ಪರಿಗಣಿಸಿರಬೇಕು. ಯಾವತ್ತೂ ಹೀಗೇ ಜನರನ್ನು ಮನರಂಜಿಸುತ್ತಿರು ಎಂದು ತಿರುಮಂತ್ರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಕೇರಳ ಕ್ರಿಕೆಟಿಗನಿಗೆ ಕಾದಿತ್ತು ಗ್ರಹಚಾರ