ನವದೆಹಲಿ: ಸಾಮಾನ್ಯವಾಗಿ ಟೀಂ ಇಂಡಿಯಾದ ಯಾವುದೇ ಯುವ ಕ್ರಿಕೆಟಿಗರು ತಮ್ಮ ಯಶಸ್ಸಿಗೆ ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ ಅಥವಾ ಧೋನಿ ಕಾರಣ ಎನ್ನುತ್ತಾರೆ. ಆದರೆ ಈ ಕ್ರಿಕೆಟಿಗ ಮಾತ್ರ ತನ್ನ ಯಶಸ್ಸಿಗೆ ವೀರೇಂದ್ರ ಸೆಹ್ವಾಗ್ ಕಾರಣ ಎಂದಿದ್ದಾರೆ.
ಅವರು ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ. ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡದ ಪರ ದ್ವಿಶತಕ ಸಿಡಿಸಿದ್ದ ಸಹಾ ತನ್ನ ಈ ಬೃಹತ್ ಇನಿಂಗ್ಸ್ ಗೆ ಸೆಹ್ವಾಗ್ ಸಲಹೆ ಕಾರಣ ಎಂದಿದ್ದಾರೆ. ಸೆಹ್ವಾಗ್ ಹಿಂದೊಮ್ಮೆ ಸಹಾಗೆ ಲಾಫ್ಟ್ ಶಾಟ್ ಹೊಡೆಯುವಂತೆ ಸಲಹೆ ಕೊಟ್ಟಿದ್ದರಂತೆ. ಅದೇ ರೀತಿ ಈ ಇನಿಂಗ್ಸ್ ನಲ್ಲಿ ಸೆಹ್ವಾಗ್ ಹೇಳಿದ ಮಾತು ಕೇಳಿ ಯಶಸ್ಸು ಕಂಡರಂತೆ ಅದಕ್ಕೇ ಸೆಹ್ವಾಗ್ ಗೆ ತಮ್ಮ ಯಶಸ್ಸಿನ ಕ್ರೆಡಿಟ್ ಕೊಟ್ಟಿದ್ದಾರೆ ಸಹಾ.
ಇದೇ ವೇಳೆ ವೃದ್ಧಿಮಾನ್ ಆಟಕ್ಕೆ ಮರುಳಾಗಿರುವ ಸೌರವ್ ಗಂಗೂಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಖಾಯಂ ಆಗಿ ಸಹಾ ಅವರನ್ನೇ ವಿಕೆಟ್ ಕೀಪರ್ ಆಗಿ ಉಳಿಸಿಕೊಳ್ಳುವ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ನಿರ್ಧಾರವನ್ನು ಬೆಂಬಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ