Webdunia - Bharat's app for daily news and videos

Install App

ಕೋಚ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕೂತಿದ್ದಾರಾ ಕೊಹ್ಲಿ?!

Webdunia
ಮಂಗಳವಾರ, 20 ಜೂನ್ 2017 (08:13 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೋಚ್ ಅನಿಲ್ ಕುಂಬ್ಳೆ ಬದಲಾವಣೆಗೆ ಪಟ್ಟು ಹಿಡಿದು ಕುಳಿತಿದ್ದಾರಾ? ಹಾಗೊಂದು ಸುದ್ದಿ ಹಬ್ಬಿದೆ.

 
ಇಬ್ಬರ ನಡುವೆಯೂ ಬಿಸಿಸಿಐ ಸಂಧಾನ ನಡೆಸಿ ಕೆಲ ದಿನಗಳ ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳುವಂತೆ ಕೊಹ್ಲಿಗೆ ಸಲಹೆ ಮಾಡಿತ್ತು. ಆದರೆ ಕೊಹ್ಲಿ ಕುಂಬ್ಳೆಯನ್ನೇ ಮತ್ತೆ ಮುಂದುವರಿಸಬಾರದು ಎಂದು ಕ್ರಿಕೆಟ್ ಸಲಹಾ ಸಮಿತಿ ಎದುರು ಪಟ್ಟು ಹಿಡಿದಿದ್ದಾರೆ.

ಲಂಡನ್ ನಲ್ಲಿ ಸಲಹಾ ಸಮಿತಿ ಸದಸ್ಯರಾದ ಸಚಿನ್, ಗಂಗೂಲಿ ಮತ್ತು ಲಕ್ಷ್ಮಣ್ ಕೊಹ್ಲಿ ಜತೆ ಫೈನಲ್ ಪಂದ್ಯಕ್ಕೂ ಮೊದಲು ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೊಹ್ಲಿ ಮತ್ತು ಕುಂಬ್ಳೆ ಸಂಬಂಧ ಸರಿಪಡಿಸಲಾಗದಷ್ಟು ಹಳಸಿದೆ ಎಂದು ತಿಳಿದು ಬಂದಿದೆ.

ಆದರೆ ಕುಂಬ್ಳೆ ಬದಲಿಗೆ, ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಸೆಹ್ವಾಗ್ ಅಥವಾ ಇನ್ಯಾರನ್ನೇ ಆಯ್ಕೆ ಮಾಡಿದರೂ ಕೊಹ್ಲಿಗೆ ಅವರ ಜತೆಗಿನ ಸಂಬಂಧ ಸರಿ ಹೋಗದಿದ್ದರೆ ಆಗೇನು ಮಾಡುವುದು ಎಂಬ ಪ್ರಶ್ನೆ ಬಿಸಿಸಿಐ ದಿಗ್ಗಜರನ್ನು ಕಾಡುತ್ತಿದೆ.

ಒಂದು ವೇಳೆ ಕುಂಬ್ಳೆಯನ್ನು ಕಿತ್ತು ಹಾಕಿದರೂ ಯಾವ ಕಾರಣ ನೀಡಿ ವಜಾ ಮಾಡುವುದು? ಕೋಚ್ ಆಗಿ ಅವರ ಗರಡಿಯಲ್ಲಿ ಭಾರತ ತಂಡ ಇದುವರೆಗೆ ಉತ್ತಮ ಸಾಧನೆಯನ್ನೇ ಮಾಡಿದೆ. ಹಾಗಿದ್ದರೂ ಕೊಹ್ಲಿ ಬಯಸುವ ರವಿ ಶಾಸ್ತ್ರಿಯನ್ನೇ ಮನ ಒಲಿಸಿ ಕೋಚ್ ಸ್ಥಾನಕ್ಕೆ ಕರೆ ತರುವುದೋ ಎಂಬ ಜಿಜ್ಞಾಸೆಯಲ್ಲಿ ಬಿಸಿಸಿಐ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಿಎಸ್‌ಕೆಯನ್ನು ಹಿಂದಿಕ್ಕಿದ ಅತ್ಯಂತ ಮೌಲ್ಯಯುತ ತಂಡವಾಗಿ ಹೊರಹೊಮ್ಮಿದ ಆರ್‌ಸಿಬಿ

ಚಿನ್ನಸ್ವಾಮಿ ಕಾಲ್ತುಳಿತಕ್ಕೆ ನಿಜ ಕಾರಣ ಬಯಲು: ಎಲ್ಲದಕ್ಕೂ ಮೂಲ ಕಾರಣ ಕೊಹ್ಲಿನಾ

ಆರ್​ಸಿಬಿಯ ಎಡಗೈ ವೇಗಿಗೆ ಸಂಕಷ್ಟ: ಲೈಂಗಿಕ ದೌರ್ಜನ್ಯ ಆರೋಪದಡಿ ಯಶ್‌ ದಯಾಳ್‌ಗೆ ಬಂಧನ ಭೀತಿ

IND vs ENG: ಬೇಜ್ ಬಾಲ್ ಕೈ ಬಿಟ್ಟು ಹಳೇ ಸ್ಟೈಲ್ ಗೆ ಮರಳಲಿದೆ ಇಂಗ್ಲೆಂಡ್

IND vs ENG: ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾಗಿಲ್ಲ ಅದೃಷ್ಟ

ಮುಂದಿನ ಸುದ್ದಿ
Show comments