Select Your Language

Notifications

webdunia
webdunia
webdunia
webdunia

ಐಪಿಎಲ್ ಗಾಗಿ ನಾಲ್ಕನೇ ಟೆಸ್ಟ್ ಗೆ ಎಳ್ಳು ನೀರು ಬಿಟ್ಟರಾ ವಿರಾಟ್ ಕೊಹ್ಲಿ?!

ಐಪಿಎಲ್ ಗಾಗಿ ನಾಲ್ಕನೇ ಟೆಸ್ಟ್ ಗೆ ಎಳ್ಳು ನೀರು ಬಿಟ್ಟರಾ ವಿರಾಟ್ ಕೊಹ್ಲಿ?!
Dharmashala , ಸೋಮವಾರ, 27 ಮಾರ್ಚ್ 2017 (09:50 IST)
ಧರ್ಮಶಾಲಾ: ವಿರಾಟ್ ಕೊಹ್ಲಿ ಭುಜದ ಗಾಯಕ್ಕೆ ತುತ್ತಾಗಿರುವುದೇನೋ ನಿಜ. ಆದರೆ ಅವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡದೇ ಇರುವುದಕ್ಕೆ ಕಾರಣ ಐಪಿಎಲ್ ಇರಬಹುದು ಎಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ.

 

ಡಿಆರ್ ಎಸ್ ಚೀಟಿಂಗ್ ವಿಷಯದಲ್ಲಿ ಕೊಹ್ಲಿಯನ್ನು ಬೆಂಬಲಿಸಿ ಮಾತನಾಡಿದ್ದ ಹಾಗ್ ಇದೀಗ ಇಂತಹದ್ದೊಂದು ಬಾಂಬ್ ಇಟ್ಟಿದ್ದಾರೆ. ಐಪಿಎಲ್ ನಲ್ಲಿ ಆಡಬೇಕಾಗಿರುವುದರಿಂದ ಭುಜಕ್ಕೆ ಮತ್ತಷ್ಟು ಗಾಯ ಮಾಡಿಕೊಂಡು ಹೊರಗುಳಿಯಬೇಕಾದ ಪರಿಸ್ಥಿತಿ ಬಾರದಂತೆ ಅವರು ಈ ನಿರ್ಣಾಯಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿರಬಹುದು ಎಂದು ಹಾಗ್ ಅಭಿಪ್ರಾಯಪಟ್ಟಿದ್ದಾರೆ.

 
ಇಂತಹ ಘಟನೆಗಳು ಹಿಂದೆಯೂ ಹಲವು ಬಾರಿ ನಡೆದಿದೆ. ಐಪಿಎಲ್ ನಲ್ಲಿ ಭಾರೀ ಪ್ರಮಾಣದ ವೇತನ ಸಿಗುತ್ತದೆ. ಕೊಹ್ಲಿ ಆರ್ ಸಿಬಿ ತಂಡದ ನಾಯಕ. ಮುಂದಿನ ವಾರದಿಂದ ನಡೆಯಲಿರುವ ಐಪಿಎಲ್ ಪಂದ್ಯಾವಳಿಯನ್ನು ತಪ್ಪಿಸಿಕೊಳ್ಳಲು ಅವರು ಇಷ್ಟಪಡಲಾರರು. ಆದರೆ ಅದಕ್ಕಾಗಿ ನಿರ್ಣಾಯಕ ಟೆಸ್ಟ್ ಪಂದ್ಯವನ್ನೇ ಕೈ ಬಿಟ್ಟ ಅವರ ನಿರ್ಧಾರ ಮಾತ್ರ ಸರಿಯಲ್ಲ ಎಂದು ಐಪಿಎಲ್ ನ ಗುಜರಾತ್ ತಂಡದ ಕೋಚ್ ಆಗಿರುವ ಹಾಗ್ ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಐಪಿಎಲ್ ನ ಪುಣೆ ತಂಡ ಮಾಡಿದ ಕೆಲಸವಿದು!