Webdunia - Bharat's app for daily news and videos

Install App

ಶಿಸ್ತು, ಕಠಿಣ ದುಡಿಮೆ ಯಶಸ್ಸಿಗೆ ಮುಖ್ಯ ಅಂಶಗಳು: ವಿರಾಟ್ ಕೊಹ್ಲಿ

Webdunia
ಮಂಗಳವಾರ, 5 ಜುಲೈ 2016 (11:41 IST)
ಭಾರತ ಕ್ರಿಕೆಟ್ ತಂಡದ ಪ್ರಚಂಡ ಬ್ಯಾಟ್ಸ್‌ಮನ್ ಎಂಬ ಹಣೆಪಟ್ಟಿಯನ್ನು ಮಾತ್ರ ವಿರಾಟ್ ಕೊಹ್ಲಿ ಹೊತ್ತಿಲ್ಲ. ಅವರು ಯುವಕರ ಕಣ್ಮಣಿಯೂ ಆಗಿದ್ದಾರೆ. ಉಳಿದವರಿಗೆ ಮಾದರಿಯ ವ್ಯಕ್ತಿಯಾಗಿರುವುದು ದೊಡ್ಡ ಜವಾಬ್ದಾರಿಯಾಗಿದ್ದು ಇದು ಅನೇಕ ಮಂದಿ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಟಾರ್ ಆಟಗಾರ ಕೊಹ್ಲಿ ಹೇಳಿದರು. ಸದಾ ಸಾರ್ವಜನಿಕರ ದೃಷ್ಟಿಯಲ್ಲಿರುವುದು ಸರಾಗವಾದ ನಡೆಯಲ್ಲ. ಕೊಹ್ಲಿ ಆಗಾಗ್ಗೆ ತಪ್ಪು ಹೆಜ್ಜೆಯನ್ನೂ ಇರಿಸಿದ್ದಾರೆ. ತಾವು ತಪ್ಪುಗಳನ್ನು ತಿದ್ದಿಕೊಂಡು ಪಾಠ ಕಲಿಯುವುದಾಗಿ ಅವರು ಹೇಳಿದರು.
 
ಯುವಕರಿಗೆ ಮಾದರಿಯಾಗಿ ಇರುವುದು ಒಳ್ಳೆಯ ಭಾವನೆ ಮೂಡಿಸುತ್ತದೆ. ಜನರು ನಿಮ್ಮ ಬಳಿ ಬಂದು ನಿಮ್ಮಿಂದ ಸ್ಫೂರ್ತಿ ಪಡೆಯುವುದಾಗಿ ಹೇಳಿದಾಗ ವೈಯಕ್ತಿಕವಾಗಿ ನನಗೆ ಮುಖ್ಯವೆನಿಸುತ್ತದೆ. ಆದರೆ ನಾನು ಮಾಡುವ,ಸ ಹೇಳುವ ಪ್ರತಿಯೊಂದು ಅನೇಕ ಜನರಿಗೆ ಪರಿಣಾಮ ಬೀರುವುದರಿಂದ ಭಾರೀ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ ಎಂದು ಫ್ಯಾನ್ ಕ್ಲಬ್ ಫ್ಯಾನ್‌ಬಾಕ್ಸ್ ಮೂಲಕ ಅಭಿಮಾನಿಗಳ ಜತೆ ಸಂಪರ್ಕ ಹೊಂದಿರುವ ಕೊಹ್ಲಿ ಈ ಮೇಲ್ ಸಂದರ್ಶನದಲ್ಲಿ ಹೇಳಿದ್ದಾರೆ.
 
 ತಾನು ತಮ್ಮ ಯಶಸ್ಸಿನ ಕಥೆ ನಿರ್ಮಾಣಕ್ಕೆ ಯಾವುದು ಕೆಲಸ ಮಾಡಿತು ಎಂದು ಜನರಿಗೆ ತಿಳಿಸಲು ಬಯಸುವದಾಗಿ ಹೇಳಿದರು. ನನಗೆ ಶಿಸ್ತು ಮತ್ತು ಕಠಿಣ ದುಡಿಮೆ ಮುಖ್ಯ ಆದ್ಯತೆಗಳು. ಕಲಿಕೆಯ ಬಗ್ಗೆ ಕೂಡ ನನಗೆ ತೀವ್ರ ಅಭಿಲಾಷೆ. ನಾನು ಹಿಂದಿನ ಸಾಧನೆಯತ್ತ ನೋಟ ಹರಿಸಿ ತಪ್ಪುಗಳಿಂದ ಕಲಿಯುತ್ತೇನೆ ಎಂದು ಕೊಹ್ಲಿ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments