Select Your Language

Notifications

webdunia
webdunia
webdunia
webdunia

ಶಿಸ್ತು, ಕಠಿಣ ದುಡಿಮೆ ಯಶಸ್ಸಿಗೆ ಮುಖ್ಯ ಅಂಶಗಳು: ವಿರಾಟ್ ಕೊಹ್ಲಿ

ಶಿಸ್ತು, ಕಠಿಣ ದುಡಿಮೆ ಯಶಸ್ಸಿಗೆ ಮುಖ್ಯ ಅಂಶಗಳು: ವಿರಾಟ್ ಕೊಹ್ಲಿ
ಬೆಂಗಳೂರು , ಮಂಗಳವಾರ, 5 ಜುಲೈ 2016 (11:41 IST)
ಭಾರತ ಕ್ರಿಕೆಟ್ ತಂಡದ ಪ್ರಚಂಡ ಬ್ಯಾಟ್ಸ್‌ಮನ್ ಎಂಬ ಹಣೆಪಟ್ಟಿಯನ್ನು ಮಾತ್ರ ವಿರಾಟ್ ಕೊಹ್ಲಿ ಹೊತ್ತಿಲ್ಲ. ಅವರು ಯುವಕರ ಕಣ್ಮಣಿಯೂ ಆಗಿದ್ದಾರೆ. ಉಳಿದವರಿಗೆ ಮಾದರಿಯ ವ್ಯಕ್ತಿಯಾಗಿರುವುದು ದೊಡ್ಡ ಜವಾಬ್ದಾರಿಯಾಗಿದ್ದು ಇದು ಅನೇಕ ಮಂದಿ ಮೇಲೆ ಪರಿಣಾಮ ಬೀರುತ್ತದೆ ಎಂದು ಸ್ಟಾರ್ ಆಟಗಾರ ಕೊಹ್ಲಿ ಹೇಳಿದರು. ಸದಾ ಸಾರ್ವಜನಿಕರ ದೃಷ್ಟಿಯಲ್ಲಿರುವುದು ಸರಾಗವಾದ ನಡೆಯಲ್ಲ. ಕೊಹ್ಲಿ ಆಗಾಗ್ಗೆ ತಪ್ಪು ಹೆಜ್ಜೆಯನ್ನೂ ಇರಿಸಿದ್ದಾರೆ. ತಾವು ತಪ್ಪುಗಳನ್ನು ತಿದ್ದಿಕೊಂಡು ಪಾಠ ಕಲಿಯುವುದಾಗಿ ಅವರು ಹೇಳಿದರು.
 
ಯುವಕರಿಗೆ ಮಾದರಿಯಾಗಿ ಇರುವುದು ಒಳ್ಳೆಯ ಭಾವನೆ ಮೂಡಿಸುತ್ತದೆ. ಜನರು ನಿಮ್ಮ ಬಳಿ ಬಂದು ನಿಮ್ಮಿಂದ ಸ್ಫೂರ್ತಿ ಪಡೆಯುವುದಾಗಿ ಹೇಳಿದಾಗ ವೈಯಕ್ತಿಕವಾಗಿ ನನಗೆ ಮುಖ್ಯವೆನಿಸುತ್ತದೆ. ಆದರೆ ನಾನು ಮಾಡುವ,ಸ ಹೇಳುವ ಪ್ರತಿಯೊಂದು ಅನೇಕ ಜನರಿಗೆ ಪರಿಣಾಮ ಬೀರುವುದರಿಂದ ಭಾರೀ ಜವಾಬ್ದಾರಿಯನ್ನು ಒಳಗೊಂಡಿರುತ್ತದೆ ಎಂದು ಫ್ಯಾನ್ ಕ್ಲಬ್ ಫ್ಯಾನ್‌ಬಾಕ್ಸ್ ಮೂಲಕ ಅಭಿಮಾನಿಗಳ ಜತೆ ಸಂಪರ್ಕ ಹೊಂದಿರುವ ಕೊಹ್ಲಿ ಈ ಮೇಲ್ ಸಂದರ್ಶನದಲ್ಲಿ ಹೇಳಿದ್ದಾರೆ.
 
 ತಾನು ತಮ್ಮ ಯಶಸ್ಸಿನ ಕಥೆ ನಿರ್ಮಾಣಕ್ಕೆ ಯಾವುದು ಕೆಲಸ ಮಾಡಿತು ಎಂದು ಜನರಿಗೆ ತಿಳಿಸಲು ಬಯಸುವದಾಗಿ ಹೇಳಿದರು. ನನಗೆ ಶಿಸ್ತು ಮತ್ತು ಕಠಿಣ ದುಡಿಮೆ ಮುಖ್ಯ ಆದ್ಯತೆಗಳು. ಕಲಿಕೆಯ ಬಗ್ಗೆ ಕೂಡ ನನಗೆ ತೀವ್ರ ಅಭಿಲಾಷೆ. ನಾನು ಹಿಂದಿನ ಸಾಧನೆಯತ್ತ ನೋಟ ಹರಿಸಿ ತಪ್ಪುಗಳಿಂದ ಕಲಿಯುತ್ತೇನೆ ಎಂದು ಕೊಹ್ಲಿ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಹೆಡ್ ಕೋಚ್ ಪಾತ್ರಕ್ಕೆ ಅನಿಲ್ ಕುಂಬ್ಳೆ ಫಿಟ್: ವಿರಾಟ್ ಕೊಹ್ಲಿ