Webdunia - Bharat's app for daily news and videos

Install App

ಚೆಂಡು ವಿರೂಪ ಆರೋಪಗಳೆಲ್ಲಾ ನನ್ನ ಏಕಾಗ್ರತೆ ಕೆಡಿಸುವ ಯತ್ನ: ವಿರಾಟ್ ಕೊಹ್ಲಿ

Webdunia
ಶುಕ್ರವಾರ, 25 ನವೆಂಬರ್ 2016 (13:52 IST)
ಮೊಹಾಲಿ: ಬ್ರಿಟನ್ ಮಾಧ್ಯಮ ತನ್ನ ಮೇಲೆ ಮೊದಲ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿರುವುದಾಗಿ ಆರೋಪಿಸಿರುವುದು ಮೂರನೇ ಟೆಸ್ಟ್ ನಿಂದ ನನ್ನ ಗಮನ ಬೇರೆಡೆ ಸೆಳೆಯುವ ವ್ಯರ್ಥ ಪ್ರಯತ್ನವಷ್ಟೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಟೆಸ್ಟ್ ನಲ್ಲಿ ವಿರಾಟ್ ಬಾಲ್ ಗೆ ತಮ್ಮ ಜೊಲ್ಲು ರಸ ಸೇರಿಸಿ ಹೊಳಪುಗೊಳಿಸಲು ಯತ್ನಿಸಿದ್ದರು ಎಂದು ಬ್ರಿಟನ್ ನ ಪತ್ರಿಕೆಯೊಂದು ವರದಿ ಮಾಡಿತ್ತು. “ಪತ್ರಿಕೆಯಲ್ಲಿ ಬಂದಿರುವ ವರದಿಗಳು ಐಸಿಸಿ ವರದಿಗಿಂತ ದೊಡ್ಡದಲ್ಲ. ನಾನು ಪತ್ರಿಕೆಗಳನ್ನು ಓದುವುದೇ ಇಲ್ಲ. 5 ದಿನದ ನಂತರ ಬಂದ ವರದಿಯ ಸುದ್ದಿ ಕೇಳಿ ನಗು ಬಂತು” ಎಂದು ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಮಾಧ್ಯಮವೊಂದು ವಿರಾಟ್ ಕೊಹ್ಲಿ ಚೆಂಡಿಗೆ ಚ್ಯುಯಿಂಗ್ ಗಮ್ ತಿಂದು ಜೊಲ್ಲು ರಸ ಬೆರೆಸುತ್ತಿರುವ ವಿಡಿಯೋ ಕೂಡಾ ಪ್ರಕಟಿಸಿತ್ತು. ಆದರೆ ಐಸಿಸಿ ನಿಯಮದ ಪ್ರಕಾರ ಯಾವುದೇ ತಂಡ ಚೆಂಡು ವಿರೂಪ ಪ್ರಕರಣ ದಾಖಲಿಸಬೇಕಾದರೆ ಪಂದ್ಯ ನಡೆದ ಐದು ದಿನಗಳೊಳಗಾಗಿ ದೂರು ದಾಖಲಿಸಬೇಕು. ಆದರೆ ಈ ಪ್ರಕರಣದಲ್ಲಿ ಐದು ದಿನ ಕಳೆದ ಮೇಲೆ ಆಪಾದನೆ ಕೇಳಿ ಬಂದಿರುವುದರಿಂದ ಐಸಿಸಿ ಪ್ರಕರಣ ತನಿಖೆ ನಡೆಸಲು ನಿರಾಕರಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ

RCB ವೇಗಿ ಯಶ್ ದಯಾಳ್ ವಿರುದ್ಧ ಬಾಲಕಿ ಮೇಲೆ ರೇಪ್ ಆರೋಪ: ಎಫ್ಐಆರ್ ದಾಖಲು

Rishabh Pant: ಅನಿಲ್ ಕುಂಬ್ಳೆಯನ್ನು ನೆನಪಿಸಿದ ರಿಷಭ್ ಪಂತ್

END vs IND Match, ಗ್ರೌಂಡ್‌ಗೆ ಕೈಮುಗಿದು ಕುಟುಂತ್ತಲೇ ಬ್ಯಾಟಿಂಗ್‌ಗೆ ಬಂದ ರಿಷಬ್ ಪಂತ್‌, Video

ಚಿನ್ನಸ್ವಾಮಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಿವ್ಯಾಂಶಿ ತಾಯಿಯಿಂದ ಗಂಭೀರ ಆರೋಪ

ಮುಂದಿನ ಸುದ್ದಿ
Show comments