Select Your Language

Notifications

webdunia
webdunia
webdunia
webdunia

ಆಡದೆಯೂ ಗಾಯಗೊಂಡು ಮೂಲೆ ಸೇರುವ ನತದೃಷ್ಟ ಹಾರ್ದಿಕ್ ಪಾಂಡ್ಯ

ಆಡದೆಯೂ ಗಾಯಗೊಂಡು ಮೂಲೆ ಸೇರುವ ನತದೃಷ್ಟ ಹಾರ್ದಿಕ್ ಪಾಂಡ್ಯ
Mumbai , ಶುಕ್ರವಾರ, 10 ಮಾರ್ಚ್ 2017 (10:25 IST)
ಮುಂಬೈ: ಕಿರು ಮಾದರಿ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾದರೂ, ಪದಾರ್ಪಣೆ ಪಂದ್ಯವಾಡುವ ಅದೃಷ್ಟ ಯಾಕೋ ಕೂಡಿ ಬರುತ್ತಿಲ್ಲ.

 
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಹಾರ್ದಿಕ್ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿಲ್ಲ. ಎಲ್ಲಾ ಸರಿ ಹೋಯ್ತು ಎಂದು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತ ಎ ತಂಡದ ನಾಯಕತ್ವ ವಹಿಸಿದಾಗ ಈ ಸರಣಿಯಲ್ಲಾದರೂ ಟೆಸ್ಟ್ ಕ್ಯಾಪ್ ಧರಿಸಬಹುದೆಂದು ಹಾರ್ದಿಕ್ ಕನಸು ಕಂಡಿದ್ದರು.

ಆದರೆ ಅದು ಕೂಡಾ ಕನಸಾಗಿಯೇ ಉಳಿಯಿತು. ಮೊದಲೆರಡು ಪಂದ್ಯಕ್ಕೆ ಆಯ್ಕೆಯಾಗಲಿಲ್ಲ. ಉಳಿದ ಪಂದ್ಯಗಳಿಗೆ ಆಡಿಸಬಹುದೆಂದರೆ, ಮತ್ತೆ ಗಾಯದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಸತತವಾಗಿ ಎರಡು ಸರಣಿಗೆ ಆಯ್ಕೆಯಾದರೂ, ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡುವ ಅವಕಾಶ ಇನ್ನೂ ಲಭ್ಯವಾಗಲೇ ಇಲ್ಲ.

ಆಸ್ಟ್ರೇಲಿಯಾ ವಿರುದ್ಧ ಉಳಿದೆರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ತಂಡದಿಂದಲೇ ಔಟ್ ಆಗಿದ್ದಾರೆ. ಭಾರತ ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿ ರಾಷ್ಟ್ರೀಯ ತಂಡದ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವ ಕನಸು ಹಾರ್ದಿಕ್ ಗೆ ಯಾವಾಗ ನನಸಾಗುತ್ತದೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ದುರ್ವರ್ತನೆ ತೋರಿದ್ದರಂತೆ! ಆಸ್ಟ್ರೇಲಿಯಾ ಪತ್ರಿಕೆಯ ಗಂಭೀರ ಆರೋಪ