Webdunia - Bharat's app for daily news and videos

Install App

ಅರ್ಜುನ್ ರಣತುಂಗಾ ಹೇಳಿಕೆಗೆ ರೊಚ್ಚಿಗೆದ್ದ ಟೀಂ ಇಂಡಿಯಾ ಆಟಗಾರರು

Webdunia
ಶನಿವಾರ, 15 ಜುಲೈ 2017 (10:31 IST)
ನವದೆಹಲಿ: 2011 ರ ವಿಶ್ವಕಪ್ ರ ಭಾರತ-ಶ್ರೀಲಂಕಾ ಫೈನಲ್ ಪಂದ್ಯ ಫಿಕ್ಸ್ ಆಗಿತ್ತೆಂದು ಹೇಳಿಕೆ ನೀಡಿದ್ದ ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾಗೆ ಟೀಂ ಇಂಡಿಯಾ ಆಟಗಾರರು ತರಾಟೆಗೆ ತೆಗೆದುಕೊಂಡಿದ್ದಾರೆ.

 
ರಣತುಂಗಾ ಅವರ ಹೇಳಿಕೆಗೆ ಅಭಿಮಾನಿಗಳು ಸೇರಿದಂತೆ ಹಲವು ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರು ವರ್ಷಗಳ ನಂತರ ರಣತುಂಗಾಗೆ ಜ್ಞಾನೋದವಾಯಿತೇ ಎಂದು ಅಭಿಮಾನಿಗಳು ಟ್ವಿಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಭಿಮಾನಿಗಳಲ್ಲದೆ, ಭಾರತ ಕ್ರಿಕೆಟ್ ತಂಡದಲ್ಲಿ ವಿಶ್ವಕಪ್ ಫೈನಲ್ ಪಂದ್ಯವಾಡಿದ್ದ ಗೌತಮ್ ಗಂಭೀರ್, ಆಶಿಷ್ ನೆಹ್ರಾ ಕೂಡಾ ಕಿಡಿ ಕಾರಿದ್ದಾರೆ. ‘ರಣತುಂಗಾರಂತಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಯುತ ಹೇಳಿಕೆ ನೀಡುವಂತಹ ಆಟಗಾರರು ಇಂತಹ ಹೇಳಿಕೆ ನೀಡಿರುವುದು ಅಚ್ಚರಿ ತಂದಿದೆ. ಹಾಗಿದ್ದರೆ ಅವರು ಅದಕ್ಕೆ ಸಾಕ್ಷ್ಯ ಒದಗಿಸಬೇಕು’ ಎಂದು ಗಂಭೀರ್ ಹೇಳಿದ್ದಾರೆ.

ಇನ್ನು ಆಶಿಷ್ ನೆಹ್ರಾ ಇಂತಹ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿ ಅದನ್ನು ಪ್ರಚುರಪಡಿಸಲು ಇಷ್ಟವಿಲ್ಲ ಎಂದಿದ್ದಾರೆ. ‘ಹಾಗಿದ್ದರೆ 1996 ರಲ್ಲಿ ಅವರ ನಾಯಕತ್ವದಲ್ಲಿ ಲಂಕಾ ವಿಶ್ವಕಪ್ ಗೆದ್ದಾಗ ಪರಿಸ್ಥಿತಿ ಏನಾಗಿತ್ತು? ಇಂತಹ ಅಸಂಬದ್ಧ ಹೇಳಿಕೆಗಳಿಗೆಲ್ಲಾ ಕೊನೆಯಿಲ್ಲ’ ಎಂದು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ.. ನ್ಯಾನೋ ಕಾರ್ ಗೆ ಸದ್ಯದಲ್ಲೇ ಟಾಟಾ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

MI vs SRH Match: ಬೋಲ್ಟ್‌ ದಾಳಿಗೆ ತತ್ತರಿಸಿದ ಹೈದರಾಬಾದ್‌: ಮುಂಬೈ ಗೆಲುವಿಗೆ 144 ರನ್‌ಗಳ ಗುರಿ

Pahalgam Terror Attack:ಚಿಯರ್‌ಲೀಡರ್ಸ್‌, ಪಟಾಕಿ ಸದ್ದಿಲ್ಲದೆ ನಡೆಯುತ್ತಿರುವ SRH vs MI ಪಂದ್ಯಾಟ

MI vs SRH Match: ಟಾಸ್‌ ಗೆದ್ದ ಮುಂಬೈ ಇಂಡಿಯನ್ಸ್‌, ಹೈದರಾಬಾದ್‌ಗೆ ಹೆಚ್ಚಿದ ಒತ್ತಡ

KL Rahul viral video: ಕೆಎಲ್ ರಾಹುಲ್, ಸಂಜೀವ್ ಗೊಯೆಂಕಾ ಭೇಟಿ: ಅವಮಾನ ಮಾಡಿದ್ಮೇಲೆ ಯಾವ ಮುಖ ಇಟ್ಕೊಂಡು ಬಂದ್ರಿ

ಅವಮಾನವಾದ ಕ್ರೀಡಾಂಗಣದಲ್ಲೇ ಅಬ್ಬರಿಸಿ ಡೆಲ್ಲಿ ತಂಡವನ್ನು ಗೆಲ್ಲಿಸಿದ ಕನ್ನಡಿಗ ಕೆ.ಎಲ್‌.ರಾಹುಲ್‌

ಮುಂದಿನ ಸುದ್ದಿ
Show comments