ಮ್ಯಾಚ್ ಫಿಕ್ಸಿಂಗ್ ನಲ್ಲಿ ಟೀಂ ಇಂಡಿಯಾ ಆಟಗಾರ? ಶ್ರೀಶಾಂತ್ ಬಾಯ್ಬಿಟ್ಟ ಸ್ಪೋಟಕ ರಹಸ್ಯ!

Webdunia
ಶುಕ್ರವಾರ, 3 ನವೆಂಬರ್ 2017 (09:27 IST)
ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಕಳಂಕದಿಂದಾಗಿ ಟೀಂ ಇಂಡಿಯಾಕ್ಕೆ ಮರಳಿ ಬರಲು ಸಾಧ್ಯವಾಗದೇ ಹತಾಶೆಯಲ್ಲಿರುವ ವೇಗಿ ಶ್ರೀಶಾಂತ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

 
ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಶ್ರೀಶಾಂತ್ ನಿರ್ದೋಷಿ ಎಂದು ಸಾಬೀತಾದರೂ ಮರಳಿ ಕ್ರಿಕೆಟ್ ಆಡಲು ಬಿಸಿಸಿಐ ಒಪ್ಪಿಗೆ ಸಿಗುತ್ತಿಲ್ಲ. ಇದರಿಂದ ಕ್ರುದ್ಧರಾಗಿರುವ ಶ್ರೀಶಾಂತ್ ಟೀಂ ಇಂಡಿಯಾದಲ್ಲಿ ಸದ್ಯ ಆಡುತ್ತಿರುವ ಆಟಗಾರರೊಬ್ಬರೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.

ಚೆನ್ನೈ ಮತ್ತು ರಾಜಸ್ಥಾನ ತಂಡವೂ ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿತ್ತು. ಹಾಗಿದ್ದರೂ ಆ ತಂಡದ ಆಟಗಾರರನ್ನೆಲ್ಲಾ ವಿಚಾರಣೆಗೊಳಪಡಿಸಲಿಲ್ಲವೇಕೆ? ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಕೆಲವೊಂದು ಹೆಸರನ್ನು ಕೈ ಬಿಟ್ಟಿದ್ದೇಕೆ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.

ಪೊಲೀಸರ ಪಟ್ಟಿಯಲ್ಲಿ ಮೊದಲಿದ್ದ ಕೆಲವು ಆಟಗಾರರ ಪೈಕಿ ಕೆಲವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಶ್ರೀಶಾಂತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ. ಶ್ರೀಶಾಂತ್ ಈ ಹೇಳಿಕೆಗಳು ಹೊಸ ಸಂಚಲನ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಪಿಎಲ್ ಫೈನಲ್ ವೀಕ್ಷಿಸಲು ಭಾರತಕ್ಕೆ ಟ್ರೋಫಿ ಕೊಡದೇ ಸತಾಯಿಸಿದ ಪಾಕಿಸ್ತಾನದ ಮೊಹ್ಸಿನ್ ನಖ್ವಿಗೆ ಆಹ್ವಾನ

IPL 2026: ಈ ಬಾರಿ ಕಪ್ ಯಾರ ಪಾಲಾಗಬಹುದು

ಆಕಾಶ್ ಅಂಬಾನಿ ಮುಖಕ್ಕೇ ಮೊಬೈಲ್ ಬಿಸಾಕಿದ ಪಂಜಾಬ್ ಅಭಿಮಾನಿ: ಮುಂಬೈ ಮಾಲಿಕನ ರಿಯಾಕ್ಷನ್ ನೋಡಿ Video

ಎದುರಾಳಿ ಆಟಗಾರನಾಗಿದ್ದರೂ ಕನ್ನಡಿಗ ಮನೀಶ್ ಪಾಂಡೆಗೆ ವಿರಾಟ್ ಕೊಹ್ಲಿ ಶಹಬ್ಬಾಷ್ Video

IPL 2026: ವಿರಾಟ್ ಕೊಹ್ಲಿ ಕಾಲಿಗೆ ಬೀಳಲು ಮೈದಾನಕ್ಕೇ ನುಗ್ಗಿದ ಅಭಿಮಾನಿ: ಕೊಹ್ಲಿ ಮಾಡಿದ್ದೇನು video

ಮುಂದಿನ ಸುದ್ದಿ
Show comments