Webdunia - Bharat's app for daily news and videos

Install App

ವೀರೇಂದ್ರ ಸೆಹ್ವಾಗ್ ರ ಎರಡೇ ಸಾಲಿನ ಕೋಚ್ ಹುದ್ದೆಯ ಅರ್ಜಿ ನೋಡಿ ಬಿಸಿಸಿಐ ಫುಲ್ ಶಾಕ್!

Webdunia
ಬುಧವಾರ, 7 ಜೂನ್ 2017 (08:12 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಹಾಕಿದವರಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಒಬ್ಬರು. ಹೊಡೆಬಡಿಯ ಆಟಕ್ಕೆ ಹೆಸರಾದ ಸೆಹ್ವಾಗ್ ತಮ್ಮ ಅರ್ಜಿಯನ್ನೂ ಅಷ್ಟೇ ಚುಟುಕಾಗಿ ಮುಗಿಸಿದ್ದಾರೆ.


 
ಬಂದ ಬಾಲ್ ಗೆಲ್ಲಾ ಬೌಂಡರಿ, ಸಿಕ್ಸರ್ ಹೊಡೀಬೇಕು, ಬೇಗ ರನ್ ಗಳಿಸಿ ಬೇಗ ಇನಿಂಗ್ಸ್ ಮುಗಿಸಬೇಕು ಎಂಬ ಮನೋಭಾವದ ವೀರೂ ತಮ್ಮ ರೆಸ್ಯೂಮ್ ನ್ನು ಕೂಡಾ ಅಷ್ಟೇ ಇಂಟರೆಸ್ಟಿಂಗ್ ಆಗಿ ಮುಗಿಸಿದ್ದಾರೆ. ಅಷ್ಟಕ್ಕೂ ಅದರಲ್ಲಿ ಏನಿತ್ತು ಗೊತ್ತಾ?

‘ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಅನುಭವವಿದೆ ಮತ್ತು ಟೀಂ ಇಂಡಿಯಾದಲ್ಲಿ ಈಗ ಆಡುವ ಎಲ್ಲಾ ಆಟಗಾರರ ಜತೆ ಆಡಿದ್ದಾನೆ’ ಎಂದು ಸೆಹ್ವಾಗ್ ತಮ್ಮ ಅರ್ಜಿಯಲ್ಲಿ ವಿವರಣೆ ಬರೆದು ಮುಗಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಲಂಡನ್ ನಲ್ಲಿ ಕಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಹ್ವಾಗ್ ಇದೀಗ ಭಾರತಕ್ಕೆ ಮರಳಿದ್ದಾರೆ. ಇದೀಗ ಸೆಹ್ವಾಗ್ ರ ಎರಡು ವಾಕ್ಯದ ಒಕ್ಕಣೆ ನೋಡಿ ಬಿಸಿಸಿಐ ಸುದೀರ್ಘವಾದ ರೆಸ್ಯೂಮ್ ಕಳುಹಿಸಲು ಸೂಚಿಸಿದೆಯಂತೆ.

ಇದೀಗ ಲಂಡನ್ ನಲ್ಲಿರುವ ಬಿಸಿಸಿಐಯ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅಲ್ಲಿಂದಲೇ ನೇರವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋಚ್ ಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments