Webdunia - Bharat's app for daily news and videos

Install App

ಸಚಿನ್ ನಿವೃತ್ತಿ ನಿರ್ಧಾರದ ಹಿಂದಿನ ಗುಟ್ಟು ರಟ್ಟು

Webdunia
ಗುರುವಾರ, 22 ಸೆಪ್ಟಂಬರ್ 2016 (15:20 IST)
ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಮೇಲೆ ಬಿಸಿಸಿಐ ಒತ್ತಡ ಹೇರಿತ್ತುಎಂಬ ಆಘಾತಕಾರಿ ಸತ್ಯವೀಗ ಬಯಲಾಗಿದೆ. 
ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಘೋಷಿಸಿದ ಬಳಿಕ ತಮ್ಮ ಅಂತಿಮ ಪತ್ರಿಕಾಗೋಷ್ಠಿಯನ್ನು ನಡೆಸಿದ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರಿಗೆ ಕೆಲವು ಕ್ಲಿಷ್ಟಕರ ಪ್ರಶ್ನೆಗಳನ್ನು ಕೇಳಲಾಗಿತ್ತು. ನಾಲ್ಕು ವರ್ಷಗಳ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿ ಹೊರ ನಡೆಯುತ್ತಿರುವ ಪಾಟೀಲ್ ಅವರಿಗೆ ಈ ಪ್ರಶ್ನೆಗಳು ಎದುರಾಗುವುದು ಮೊದಲೇ ನಿಶ್ಚಿತವಾಗಿದ್ದಂತಿತ್ತು. ಹೀಗಾಗಿಯೇ ಅವರು ಬಹಳ ಎಚ್ಚರಿಕೆಯಿಂದ ಈ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಡುವಿನ ಕೆಲ ವಿಷಯಗಳನ್ನು ಗೌಪ್ಯವಾಗಿ ಇಟ್ಟುಕೊಳ್ಳಬೇಕು.ಅದನ್ನು ಹೊರ ಹಾಕುವಂತಿಲ್ಲ ಎಂದು ಅವರು ಕಳೆದ ವಾರ ಹೇಳಿದ್ದರು.
 
ತಮ್ಮ ಸ್ಥಾನವನ್ನು ಅಧಿಕೃತವಾಗಿ ಎಮ್‌ಎಸ್‌ಕೆ ಪ್ರಸಾದ್ ವಹಿಸಿಕೊಂಡ ಬಳಿಕ ಪಾಟೀಲ್ ಹೊರಗೆಡವಿದ್ದ ಸತ್ಯ ಮಾತ್ರ ಆಘಾತಕಾರಿಯಾಗಿತ್ತು. ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾಸ್ಟರ್ ಬ್ಲಾಸ್ಟರ್ ಅವರನ್ನು ತಂಡದಿಂದ ಕೈ ಬಿಡಲು ಆಯ್ಕೆ ಸಮಿತಿ ನಿರ್ಧರಿಸಿತ್ತು ಎಂದಿದ್ದಾರೆ. 
 
ಡಿಸೆಂಬರ್ 12, 2012ರಂದು ನಾವು ಸಚಿನ್ ಅವರನ್ನು ಭೇಟಿಯಾಗಿ ನಿಮ್ಮ ಭವಿಷ್ಯದ ಯೋಜನೆಗಳೇನು ಎಂದು ಕೇಳಿದೆವು. ಅವರು ನಿವೃತ್ತಿ ಬಗ್ಗೆ ಯೋಚಿಸಿಲ್ಲ ಎಂದರು. ಆದರೆ ಆಯ್ಕೆ ಸಮಿತಿ ಸಚಿನ್ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಂಡಿತ್ತು ಮತ್ತು ಈ ಕುರಿತು ಬಿಸಿಸಿಐಗೂ ಮಾಹಿತಿ ನೀಡಿತ್ತು. ಆಯ್ಕೆ ಸಮಿತಿಯೊಂದಿಗಿನ ತಮ್ಮ ಮುಂದಿನ ಭೇಟಿಯಲ್ಲಿ ತಮ್ಮನ್ನು ಕೈ ಬಿಡುವುದು ನಿಶ್ಚಿತ ಎಂಬ ಸುದ್ದಿ ಹೊರಬೀಳುವುದು ಸಚಿನ್ ಅವರಿಗೆ ಖಚಿತವಾಗಿತ್ತು. ನಮಗೆ ದೂರವಾಣಿ ಕರೆ ಮಾಡಿದ ಸಚಿನ್ ತಾವು ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವುದಾಗಿ ತಮ್ಮ ನಿರ್ಧಾರ ಹೇಳಿದರು. ಆಗ ಅವರು ತಾವು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತೇನೆ ಎಂದು ಘೋಷಿಸದಿದ್ದರೆ ಅವರನ್ನು ಖಚಿತವಾಗಿ ತಂಡದಿಂದ ಕೈ ಬಿಡಲಾಗುತ್ತಿತ್ತು ಎಂದು ಪಾಟೀಲ್ ಬಹುದೊಡ್ಡ ಗುಟ್ಟನ್ನು ರಟ್ಟುಗೊಳಿಸಿದ್ದಾರೆ. 
 
ನಿವೃತ್ತಿ ಯೋಜನೆಗಳ ಬಗ್ಗೆ ನಿಮ್ಮ ನಿಲುವೇನು ಎಂದು ಸಚಿನ್ ಅವರನ್ನು ಕೇಳಿದ್ದು  ತಮ್ಮ ಕಾರ್ಯಾವಧಿಯ ಅತ್ಯಂತ ನೋವಿನ ನೆನಪು ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನಿಮ್ಮ ವಿಕೆಟ್ ಏನು ಕೊಹ್ಲಿಗೆ ಡೆಡಿಕೇಷನ್ನಾ ಅಂತ ಕೆಎಲ್ ರಾಹುಲ್ ಟ್ರೋಲ್ ಆಗಿದ್ದೇಕೆ

ಚುಕ್ಕಾಣಿ ಹಿಡಿದ ಮೊದಲ ಪಂದ್ಯದಲ್ಲೇ ಶುಭಮನ್‌ ಗಿಲ್‌ ಸ್ಮರಣೀಯ ಶತಕ: ದಿಗ್ಗಜರ ಸಾಲಿಗೆ ಯುವ ನಾಯಕ

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಮುಂದಿನ ಸುದ್ದಿ
Show comments