ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇರಳದ ಕೊಚ್ಚಿಯಲ್ಲಿ ಐಶಾರಾಮಿ ಬಂಗಲೆಯೊಂದನ್ನು ಖರೀದಿಸಲು ಸಿದ್ಧತೆ ನಡೆಸಿದ್ದಾರೆ. ಸಚಿನ್ ಶನಿವಾರ ತಮ್ಮ ಹೊಸ ಬಂಗಲೆ ಪರಿಶೀಲನೆಗೆ ಆಗಮಿಸಲಿದ್ದಾರೆ.
ಇದು ದಕ್ಷಿಣ ಭಾರತದಲ್ಲಿ ಸಚಿನ್ ಹೊಂದಿರುವ ಪ್ರಥಮ ನಿವಾಸವಾಗಲಿದೆ.
ರಾಷ್ಟ್ರೀಯ ತಂಡದಿಂದ ನಿವೃತ್ತರಾದ ಬಳಿಕ ಕೇರಳ ಸಚಿನ್ ಅವರ ಎರಡನೇ ಮನೆಯಂತಾಗಿದೆ. ಇಂಡಿಯಾನ್ ಸೂಪರ್ ಲೀಗ್ನ ಫ್ರಾಂಚೈಸಿಯಾಗಿರುವ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿರುವ ಸಚಿನ್ ದೇವರ ನಾಡಿನಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಬಯಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಚ್ಚಿಯಲ್ಲಿ ಬಂಗಲೆಯನ್ನು ಖರೀದಿಸುತ್ತಿದ್ದಾರೆ.
ನಿವಾಸದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಸಚಿನ್ ತಮ್ಮ ಹೊಸ ಮನೆಯನ್ನು ವೀಕ್ಷಿಸಲು ಬರಲಿದ್ದಾರೆ.
ಅಂತರಾಷ್ಟ್ರೀಯ ಜಾಹಿರಾತು ಸಂಘ-ಭಾರತದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿರುವ ಸಚಿನ್ ಶುಕ್ರವಾರ ರಾತ್ರಿ ಕೇರಳಕ್ಕೆ ಆಗಮಿಸಲಿದ್ದಾರೆ. ಶನಿವಾರ ಕಾರ್ಯಕ್ರಮ ಮುಗಿದ ಬಳಿಕ ಅವರು ತಮ್ಮ ನೂತನ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.