ಮುಂಬೈ ಮಳೆ ಸಂತ್ರಸ್ತರ ನೆರವಿಗೆ ಸಚಿನ್ ತೆಂಡುಲ್ಕರ್ ರದ್ದು ಹೀಗೊಂದು ಸೇವೆ!

Webdunia
ಗುರುವಾರ, 31 ಆಗಸ್ಟ್ 2017 (09:27 IST)
ಮುಂಬೈ: ಸಚಿನ್ ತೆಂಡುಲ್ಕರ್ ಸದ್ದಿಲ್ಲದೇ ಸಮಾಜ ಮುಖಿ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಇದೀಗ ತಮ್ಮದೇ ತವರು ನೆಲದಲ್ಲಿ ಮಳೆಯಿಂದ ಸಂತ್ರಸ್ತರಾಗಿರುವವರ ನೆರವಿಗೆ ಧಾವಿಸಿದ್ದಾರೆ.

 
ಮುಂಬೈ ಮಹಾನಗರಿಯಲ್ಲಿ ಗಲ್ಲಿ ಪ್ರದೇಶಗಳಲ್ಲಿ ಕಡುಬಡವರ ಪರಿಸ್ಥಿತಿ ಈಗ ದೇವರಿಗೇ ಪ್ರೀತಿ. ಮನೆಯೊಳಗೆ ಕಸ, ಕೊಳಕು ನೀರು ತುಂಬಿ ಬಡವರ ಪಾಡು ಹೇಳತೀರದಂತಾಗಿದೆ.

ಅಂತಹ ಬಡವರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಅವರ ಮನೆಯೊಳಗೆ ತುಂಬಿಕೊಂಡಿದ್ದ ಕಸ ಕಡ್ಡಿಗಳನ್ನು ಹೊರತೆಗೆಯಲು ಮುಂದಾಗಿರುವ ಅಪ್ನಾಲಯ ಸಂಸ್ಥೆಯೊಂದಿಗೆ ಸಚಿನ್ ಕೈ ಜೋಡಿಸಿದ್ದಾರೆ.

ಅಪ್ನಾಲಯ ಎಂಬ ಸ್ವಯಂ ಸೇವಕ ಸಂಘಕ್ಕೂ ಸಚಿನ್ ಗೂ ನಿಕಟ ಸಂಬಂಧವಿದೆ. ಈ ಸಂಘದ ಸಂಚಾಲಕರಲ್ಲಿ ಸಚಿನ್ ಪತ್ನಿ ಅಂಜಲಿಯವರ ತಾಯಿ ಅನಾಬೆಲ್ ಮೆಹ್ತಾ ಕೂಡಾ ಒಬ್ಬರು. ಹಿಂದೆ ಸಚಿನ್ ಬರೆದ ಆತ್ಮಕತೆ ಪ್ಲೇಯಿಂಗ್ ಇಟ್ಸ್ ಮೈ ವೇ ಪುಸ್ತಕದ ಗೌರವ ಧನವನ್ನೂ ಇದೇ ಸಂಸ್ಥೆಗೆ ಸಚಿನ್ ನೀಡಿದ್ದರು.

ಇದೀಗ ಮುಂಬೈಯ ಗಲ್ಲಿ ಪ್ರದೇಶದ ಜನರಿಗೆ ಆಹಾರ, ವಸತಿ ಕಲ್ಪಿಸಲು ಸಚಿನ್ ಕೈ ಜೋಡಿಸಿದ್ದಾರೆ. ಅಲ್ಲದೆ, ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಈ ಸಂಸ್ಥೆ ಜತೆ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ.. ಇನ್ನು ಇಂದಿರಾ ಕ್ಯಾಂಟೀನ್ ಇಲ್ಲೂ ಲಭ್ಯ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಲಾಶ್ ಜತೆಗಿನ ಮದುವೆ ರದ್ದು ಬಳಿಕ ಮೊದಲ ಬಾರಿ ಕಾಣಿಸಿಕೊಂಡ ಸ್ಮೃತಿ ಮಂಧಾನ

ವಿರಾಟ್ ಕೊಹ್ಲಿ ಒಂದು ವಿಜಯ್ ಹಜಾರೆ ಟ್ರೋಫಿ ಆಡಿದರೆ ಸಿಗುವ ಸಂಭಾವನೆ ಎಷ್ಟು ಗೊತ್ತಾ

ಶುಭಮನ್ ಗಿಲ್ ಗಾಗಿ ಸಂಜು ಸ್ಯಾಮ್ಸನ್ ಸೈಡ್ ಲೈನ್ ಮಾಡಿದ್ರಾ: ನೆಟ್ಟಿಗರ ತರಾಟೆ

ಬ್ರೇಕಪ್ ಆದ ಸ್ಮೃತಿ ಮಂಧಾನಗೆ ಇಂಥಾ ಕಾಮೆಂಟ್ ಮಾಡೋದಾ: ಇದೆಂಥಾ ಮನಸ್ಥಿತಿ

ಟೀಂ ಇಂಡಿಯಾ ಪರ ರೋಹಿತ್, ಕೊಹ್ಲಿ ಆಡುವ ಮುಂದಿನ ಪಂದ್ಯ ಯಾವುದು ನೋಡಿ

ಮುಂದಿನ ಸುದ್ದಿ
Show comments