Webdunia - Bharat's app for daily news and videos

Install App

ಬ್ಯಾಟ್ ನಿಂದ ಒಂದು ಗ್ರಾಂ ಕಡಿಮೆಯಾದರೂ ರಾಹುಲ್ ದ್ರಾವಿಡ್ ಗೆ ಗೊತ್ತಾಗುತ್ತಿಂತೆ!

Webdunia
ಗುರುವಾರ, 2 ಫೆಬ್ರವರಿ 2017 (11:29 IST)
ಬೆಂಗಳೂರು: ರಾಹುಲ್ ದ್ರಾವಿಡ್ ಎಂದರೆ ಹಾಗೇ. ಅವರು ಏಕಾಗ್ರತೆಗೆ ಇನ್ನೊಂದು ಹೆಸರು. ಅವರ ಏಕಾಗ್ರತೆ ಎಷ್ಟಿತ್ತೆಂದರೆ ಅವರು ನಿತ್ಯವೂ ಬಳಸುವ ಬ್ಯಾಟ್ ನಿಂದ ಒಂದು ಗ್ರಾಂ ಕಡಿಮೆಯಾದರೂ ಅವರಿಗೆ ಗೊತ್ತಾಗುತ್ತಿಂತೆ!

 
ಹಾಗಂತ ಹೇಳಿದ್ದು ಬೇರೆ ಯಾರೂ ಅಲ್ಲ. ಅವರ ಪತ್ನಿ ವಿಜೇತಾ ಪೆಂಡಾರ್ಕರ್. ತಮ್ಮ ಆಟದ ಮೇಲೆ ಅಷ್ಟೊಂದು ಆಸಕ್ತಿ, ಏಕಾಗ್ರತೆ ದ್ರಾವಿಡ್ ಗಿತ್ತು. ಅಂತಹಾ ತಪಸ್ವಿ ಆಟಗಾರ ಇಂದು ಭಾರತದ ಯುವ ತಂಡದ ಗುರು. ಟೀಂ ಇಂಡಿಯಾ ಭವಿಷ್ಯ ಕಟ್ಟುವ ಕೆಲಸದಲ್ಲಿದ್ದಾರೆ.

ಹಾಗಿರುವ ದ್ರಾವಿಡ್ ಗೆ ತಮ್ಮ ಶಿಷ್ಯಂದಿರು ಯಶಸ್ಸು ಕಾಣುವುದಕ್ಕಿಂತ ಸೋಲುವುದನ್ನು ನೋಡಲು ಇಷ್ಟವಂತೆ! ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂಡರ್ 19 ತಂಡದ ಪಂದ್ಯದ ಪೂರ್ವಭಾವಿಯಾಗಿ ಮಾತನಾಡಿದ ದ್ರಾವಿಡ್ ತನ್ನ ಹುಡುಗರಿಗೆ ಇದು ಸೋಲಲು ತಕ್ಕ ಕಾಲ ಎಂದಿದ್ದಾರೆ.

ಅರೇ ಇದೇನು ಇವರು ಹೀಗೆಲ್ಲಾ ಹೇಳುತ್ತಿದ್ದಾರೆ ಎಂದು ಕೊಳ್ಳಬೇಡಿ. “ಸೋಲೇ ಗೆಲುವಿನ ಸೋಪಾನ ಎನ್ನುವುದನ್ನು ಯುವಕರು ಅರಿತುಕೊಳ್ಳಬೇಕು. ಸೋತಾಗಲೇ ಪಾಠ ಕಲಿಯುವುದು. ನಾನು ಯುವಕನಾಗಿದ್ದಾಗ ಫಲಿತಾಂಶದ ಬಗ್ಗೆ ಕಣ್ಣು ಹಾಯಿಸಬೇಡ. ಕಲಿಯುವುದರತ್ತ ಗಮನ ಹರಿಸು ಎಂದು ಸಲಹೆ ಸಿಗುತ್ತಿತ್ತು. ಅದೇ ಪಾಠ ಹುಡುಗರೂ ಕಲಿತುಕೊಳ್ಳಬೇಕು” ಎನ್ನುವುದು ದ್ರಾವಿಡ್ ಇಂಗಿತ.

ಹೇಳಿ ಕೇಳಿ ದ್ರಾವಿಡ್ ಗಂಭೀರ ಮನುಷ್ಯ. ತಾವು ನಾಯಕರಾಗಿದ್ದಾಗಲೇ ತಂಡದಲ್ಲಿ ಕೆಲವೊಂದು ಶಿಸ್ತು ಕ್ರಮಗಳನ್ನು ತಂದವರು. ಹಾಗಾದರೆ ಕೋಚ್ ಆಗಿ ಯುವ ಆಟಗಾರರು ಅವರ ಬಳಿ ಮಾತನಾಡಲು ಹೆದರುತ್ತಾರೆಯೇ ಎಂದು ದ್ರಾವಿಡ್ ರನ್ನು ಕೇಳಿದರೆ “ಹೆದರುವುದೇ? ಕಳೆದ ಬ್ಯಾಚ್ ನ ತಂಡ ನನ್ನನ್ನೇ ತಮಾಷೆ ಮಾಡುತ್ತಿತ್ತು” ಎಂದಿದ್ದಾರೆ. ಈಗ ಗೊತ್ತಾಯ್ತಲ್ಲಾ? ಭಾರತ ಎ ತಂಡದಿಂದ ಯಾಕೆ ಟೀಂ ಇಂಡಿಯಾಕ್ಕೆ ಅತ್ಯುತ್ತಮ ಆಟಗಾರರು ಬರುತ್ತಿದ್ದಾರೆಂದು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಐಸಿಸಿ ಹೊಸ ಸಿಇಓ ಆಗಿ ಭಾರತೀಯ ಸಂಜೋಗ್ ಗುಪ್ತಾ, ಇವರ ಸಾಧನೆ ಇಲ್ಲಿದೆ

ಅಭಿನಂದಿಸಲು ಸಿರಾಜ್‌ನನ್ನೇ ಕೈಬಿಟ್ಟ ಜಯ್‌ಶಾ: ಮುಸ್ಲಿಂ ಎಂಬ ಕಾರಣವೇ ಹೊಗಳಿಕೆಯಿಂದ ದೂರವಿರಲು ಕಾರಣವಾಯಿತೆ,ವಿವಾದ

IND vs ENG: ವೇಗಿ ಆಕಾಶ್ ದೀಪ್ ಕುಟುಂಬದ ಕತೆ ಕೇಳಿದ್ರೆ ಕಣ್ಣೀರೇ ಬರುತ್ತದೆ

IND vs ENG: ಮುಂದಿನ ಪಂದ್ಯಕ್ಕೆ ಈ ಇಬ್ಬರೂ ಕನ್ನಡಿಗರಿಗೆ ಗೇಟ್ ಪಾಸ್

IND vs ENG: ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ ಒಂದು ಮಾತು ಇಂಗ್ಲೆಂಡ್ ಭಯ ಹೆಚ್ಚಿಸುತ್ತೆ

ಮುಂದಿನ ಸುದ್ದಿ
Show comments