Webdunia - Bharat's app for daily news and videos

Install App

ಪ್ರಣವ್ ಧನವಡೆ ಕೈಬಿಟ್ಟು ಅರ್ಜುನ್ ಸೇರ್ಪಡೆ: ವಿವಾದಕ್ಕೆ ಪ್ರತಿಕ್ರಿಸಿದ ಪ್ರಣವ್ ತಂದೆ

Webdunia
ಬುಧವಾರ, 1 ಜೂನ್ 2016 (12:50 IST)
ಪ್ರತಿಭಾಶಾಲಿ ಆಟಗಾರ ಪ್ರಣವ್ ಧನವಾಡೆಯನ್ನು ಪಶ್ಚಿಮ ವಲಯ ಅಂಡರ್ 16 ತಂಡದಲ್ಲೇಕೆ ಸೇರ್ಪಡೆ ಮಾಡಿಲ್ಲ ಎಂಬ ವಿಷಯ ಕುರಿತು ಅವನ ತಂದೆ ಪ್ರಶಾಂತ್ ಧನವಾಡೆ ಬಹಿರಂಗಮಾಡಿದ್ದಾರೆ. ಪ್ರಣವ್ ಸೇರ್ಪಡೆಯಾಗಿಲ್ಲವೆಂಬ ಸುದ್ದಿ ಬಹಿರಂಗವಾದಾಗಿನಿಂದ, ಸಾಮಾಜಿಕ ಜಾಲತಾಣವು ಚಿತ್ರಗಳು ಮತ್ತು ಸಂದೇಶಗಳಿಂದ ತುಂಬಿಹೋಗಿದ್ದು, ಧನವಾಡೆಯನ್ನು ಕಡೆಗಣಿಸಿ ಅರ್ಜುನ್ ತೆಂಡೂಲ್ಕರ್ ಅವರ ಆಯ್ಕೆಯನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದರು.
 
ಪ್ರಶಾಂತ್ ಧನವಾಡೆ ಇವೆಲ್ಲಾ ವದಂತಿಗಳಿಗೆ ತೆರೆಎಳೆದು ತಮ್ಮ ಪುತ್ರನನ್ನು ತಂಡಕ್ಕೆ ಸೇರಿಸದಿರುವುದನ್ನು ಪ್ರಶ್ನಿಸಿದ  ಜನರು, ಯಾವುದೇ ಕಾರಣವಿಲ್ಲದೇ ವಿವಾದ ಉಂಟುಮಾಡುತ್ತಿದ್ದು, ಪಶ್ಚಿಮ ವಲಯದ ಯು-16 ತಂಡವನ್ನು ಎಂಸಿಎ ಯು-16 ತಂಡದಿಂದ ಆರಿಸಿದ್ದು, ಪ್ರಣವ್ ಅದರ ಭಾಗವಾಗಿರಲಿಲ್ಲ ಎಂದಿದ್ದಾರೆ. 
 
ಅರ್ಜುನ್ ತೆಂಡೂಲ್ಕರ್ ಆಲ್ ರೌಂಡರ್ ಆಗಿದ್ದು ಎಂಸಿಎ ತಂಡದ ಭಾಗವಾಗಿದ್ದರಿಂದ ಅವನು ಅರ್ಹತೆ ಪಡೆದಿದ್ದಾನೆ ಎಂದು ಅವರು ಹೇಳಿದರು. ಆಯ್ಕೆ ಟ್ರಯಲ್‌ಗಳು ನಡೆದ ನಂತರ ತಮ್ಮ ಪುತ್ರ ದಾಖಲೆಯ 1009 ರನ್ ಗಳಿಸಿದ್ದಾನೆಂದು ಪ್ರಶಾಂತ್ ಹೇಳಿದರು.
 
 ಅರ್ಜುನ್ ಮತ್ತು ಪ್ರಣವ್ ಉತ್ತಮ ಸ್ನೇಹಿತರಾಗಿದ್ದು,ಈ ವಿವಾದದಿಂದ ಅವರ ಸ್ನೇಹಕ್ಕೆ ತೊಂದರೆಯಾಗಿಲ್ಲ ಎಂದರು. ಯು-19 ಶಿಬಿರಗಳಲ್ಲಿ ಇಬ್ಬರೂ ಒಟ್ಟಿಗೆ ಆಡುತ್ತಿದ್ದು, ಅವರ ಪ್ರತಿಭೆಯಿಂದ ಪ್ರಗತಿ ಹೊಂದಿದ್ದಾರೆ. ಅರ್ಜುನ್ ಆಲ್‌ರೌಂಡರ್ ಆಗಿದ್ದರೆ ಪ್ರಣವ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದಾನೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments