Webdunia - Bharat's app for daily news and videos

Install App

ದನಿಷ್ ಕನೇರಿಯಾ ಹಿಂದುವಾಗಿದ್ದರಿಂದ ತಾರತಮ್ಯ ಮಾಡಿಲ್ಲ : ಪಿಸಿಬಿ ಸ್ಪಷ್ಟನೆ

Webdunia
ಮಂಗಳವಾರ, 14 ಜೂನ್ 2016 (17:31 IST)
ನಿಷೇಧಿತ ಟೆಸ್ಟ್ ಲೆಗ್‌ಸ್ಪಿನ್ನರ್ ದನಿಷ್ ಕನೇರಿಯಾ ತಾವು ಹಿಂದು ಜನಾಂಗಕ್ಕೆ ಸೇರಿದ್ದರಿಂದ ಪಾಕ್ ಕ್ರಿಕೆಟ್ ಮಂಡಳಿ ತಮಗೆ ತಾರತಮ್ಯವೆಸಗಿದೆ ಎಂಬ ಆರೋಪವನ್ನು ಅಸಂಬದ್ಧ ಎಂದು ಕ್ರಿಕೆಟ್ ಮಂಡಳಿ ತಳ್ಳಿಹಾಕಿದೆ. 
 
 
ಪಿಸಿಬಿಯ ಮಾಧ್ಯಮ ನಿರ್ದೇಶಕ ಅಮ್ಜದ್ ಹುಸೇನ್ ಭಟ್ಟಿ  ಪಾಕಿಸ್ತಾನದ ಪರ 61 ಟೆಸ್ಟ್‌ ಪಂದ್ಯಗಳನ್ನು ಕನೇರಿಯಾ ಆಡಿರುವ ಬಗ್ಗೆ ಅವರಿಗೆ ನೆನಪಿಸಿದರು. 
 
ಅವರನ್ನು ಧರ್ಮದ ಆಧಾರದ ಮೇಲೆ ತಾರತಮ್ಯವೆಸಗಿದ್ದರೆ ಅವರು ಪಾಕಿಸ್ತಾನದ ಪರ ಒಂದು ಪಂದ್ಯವನ್ನು ಕೂಡ ಆಡಲು ಆಗುತ್ತಿರಲಿಲ್ಲ ಎಂದು ತೀವ್ರ ಬೇಸರಗೊಂಡ ಭಟ್ಟಿ ಹೇಳಿದರು.  ಕನೇರಿಯಾ ಅವರ ಪಿಸಿಬಿ ವಿರೋಧಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದರು. 
 
ಕನೇರಿಯಾ ತಮ್ಮ ಕುಟುಂಬದೊಂದಿಗೆ ಧಾರ್ಮಿಕ ವಿಧಿವಿಧಾನಕ್ಕೆ ಭಾರತಕ್ಕೆ ತೆರಳಿದ್ದು, ಅವರು ಪಾಕಿಸ್ತಾನಕ್ಕೆ ಯಾವಾಗ ಹಿಂತಿರುಗುತ್ತಾರೆಂಬ ಬಗ್ಗೆ ಏನೂ ಹೇಳದೇ ಮೌನ ವಹಿಸಿದ್ದಾರೆ. ಇದರಿಂದ ಅವರು ತಮ್ಮ ಪ್ರಕರಣದಲ್ಲಿ ಭಾರತದ ನೆರವನ್ನು ಕೋರಲು ಬಯಸಬಹುದು ಎಂದು ಅವರು ಹೇಳಿದರು. 

ಭಾರತದ ಸುದ್ದಿ ಚಾನೆಲ್‍ವೊಂದಕ್ಕೆ ಕನೇರಿಯಾ ಮಾತನಾಡುತ್ತಾ, ಪಿಸಿಬಿ ತಮ್ಮ ಪ್ರಕರಣದಲ್ಲಿ ಯಾವುದೇ ಆಸಕ್ತಿ ವಹಿಸದೇ ತಾವು ಹಿಂದುವಾಗಿರುವುದರಿಂದ ಕಡೆಗಣಿಸಿದ್ದಾರೆಂದು ಹೇಳಿಕೆ ನೀಡಿ ಬೆಂಕಿಗೆ ಇಂಧನ ಸುರಿದಿದ್ದಾರೆಂದು ಭಟ್ಟಿ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments