Webdunia - Bharat's app for daily news and videos

Install App

ಅನಿಲ್ ಕುಂಬ್ಳೆಗಾಗಿ ಕಿತ್ತಾಡಿಕೊಂಡ ಪಾಕ್ ಕ್ರಿಕೆಟಿಗರು!

Webdunia
ಶನಿವಾರ, 11 ಫೆಬ್ರವರಿ 2017 (10:28 IST)
ಕರಾಚಿ: ಅನಿಲ್ ಕುಂಬ್ಳೆ ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ಸಾಧನೆಯ ಬಗ್ಗೆ ಚರ್ಚೆಗಳಾಗುತ್ತಿರುವಾಗಲೇ ಪಾಕಿಸ್ತಾನದ ಖ್ಯಾತ ಕ್ರಿಕೆಟಿಗರಾದ ವಾಸಿಂ ಅಕ್ರಮ್ ಮತ್ತು ವಕಾರ್ ಯೂನಸ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

 
ಎಲ್ಲದಕ್ಕೂ ಕಾರಣವಾಗಿದ್ದು, ವೀರೇಂದ್ರ ಸೆಹ್ವಾಗ್ ಮಾಡಿದ ಟ್ವೀಟ್. ಸೆಹ್ವಾಗ್ ತಮ್ಮ ಟ್ವೀಟ್ ನಲ್ಲಿ ಹೇಗೆ ವಕಾರ್ ಯೂನಸ್ ಕುಂಬ್ಳೆಗೆ 10 ನೇ ವಿಕೆಟ್ ಸಿಗದಂತೆ ಮಾಡಲು ಯತ್ನಿಸಿದ್ದರು ಎಂದು ಬರೆದುಕೊಂಡಿದ್ದರು. ಇದೇ ವಿಷಯವಾಗಿ ಇಬ್ಬರೂ ಟ್ವಿಟರ್ ನಲ್ಲಿ ಕಿತ್ತಾಡಿಕೊಂಡಿದ್ದಾರೆ.

ಕೊನೆಯವರಾಗಿ ಕ್ರೀಸ್ ನಲ್ಲಿದ್ದ ವಕಾರ್ ಅಕ್ರಂ ಬಳಿ ಕುಂಬ್ಳೆಗೆ 10 ನೇ ವಿಕೆಟ್ ಸಿಗದಂತೆ ಮಾಡಲು ರನೌಟ್ ಆದರೆ ಹೇಗೆ ಎಂದು ಕೇಳಿದ್ದರಂತೆ. ಆದರೆ ಇದಕ್ಕೆ ಅಕ್ರಂ ಆತನಿಗೆ 10 ನೇ ವಿಕೆಟ್ ಸಿಗುವ ಭಾಗ್ಯವಿದ್ದರೆ ಖಂಡಿತಾ ಸಿಗುತ್ತದೆ. ಆದರೆ ನಾನಂತೂ ಆತನಿಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದಿದ್ದರಂತೆ. ಇದನ್ನು ಸ್ವತಃ ಅಕ್ರಂ ಹೇಳಿಕೊಂಡಿದ್ದರು ಎಂದು ಸೆಹ್ವಾಗ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.

ಆದರೆ ಈ ಬಗ್ಗೆ ಟ್ವೀಟ್ ಮಾಡಿದ ವಕಾರ್ ಅಕ್ರಂ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಹಾಗೆ ಹೇಳಿರಲಿಲ್ಲ, ಬಹುಶಃ ಅಕ್ರಂಗೆ ವಯಸ್ಸಾಯಿತಲ್ಲ ಅದೇ ಕಾರಣಕ್ಕೆ ಹೀಗೆ ಹೇಳುತ್ತಿದ್ದಾರೆ ಎಂದರು. ಇದಕ್ಕೆ ಕೋಪಗೊಂಡ ಅಕ್ರಂ ವಯಸ್ಸಿನ ವಿಚಾರಕ್ಕೆ ಬಂದರೆ ಈಗಲೂ ನಿನ್ನನ್ನು ನಾನು ಸೋಲಿಸಬಲ್ಲೆ ಎಂದು ಪ್ರತಿಕ್ರಿಯಿಸಿದರು. ಆದರೆ ಈ ಕಿತ್ತಾಟದ ಟ್ವೀಟ್ ಗಳನ್ನು ಅಕ್ರಂ ಅಳಿಸಿ ಹಾಕಿದರೂ ಅಷ್ಟರಲ್ಲಿ ಇಡೀ ಟ್ವಿಟರ್ ಜಗತ್ತು ಇದನ್ನು ನೋಡಿ ಆಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಭಾರತದ ವಿರುದ್ಧ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿ ಪ್ರಕಟಿಸಿದ ಇಂಗ್ಲೆಂಡ್

ತುಳುನಾಡಿನ ಅಳಿಯ ಸೂರ್ಯಕುಮಾರ್‌ಗೆ ಹರ್ನಿಯಾ ನೋವು: ಚಿಕಿತ್ಸೆಗೆ ಇಂಗ್ಲೆಂಡ್‌ನತ್ತ ಸ್ಟಾರ್‌ ಕ್ರಿಕೆಟಿಗ

ಸೂರ್ಯಕುಮಾರ್ ಯಾದವ್ ಗೆ ಕಾಡುತ್ತಿದೆ ಈ ಆರೋಗ್ಯ ಸಮಸ್ಯೆ: ಕೆಲವು ದಿನ ಕ್ರಿಕೆಟ್ ನಿಂದ ದೂರ

IND vs ENG: ಲೀಡ್ಸ್ ಪಿಚ್ ನಲ್ಲಿ ಮೊದಲ ದಿನ ಇಷ್ಟು ರನ್ ಬಂದರೂ ಸಾಕು

ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿ ಬೇಡ ಎಂದಿದ್ದಕ್ಕೆ ನಿಜ ಕಾರಣ ತಿಳಿಸಿದ ಜಸ್ಪ್ರೀತ್ ಬುಮ್ರಾ

ಮುಂದಿನ ಸುದ್ದಿ
Show comments