Webdunia - Bharat's app for daily news and videos

Install App

ದುಡ್ಡಿಲ್ಲದೆ ಊಟಕ್ಕೂ ಪರದಾಡುತ್ತಿರುವ ರಾಹುಲ್ ದ್ರಾವಿಡ್ ಹುಡುಗರು!

Webdunia
ಗುರುವಾರ, 9 ಫೆಬ್ರವರಿ 2017 (06:08 IST)
ಮುಂಬೈ: ಬಿಸಿಸಿಐನಲ್ಲಿ ಅಲ್ಲೋಲಕಲ್ಲೋವಾದ ಮೇಲೆ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್-19 ತಂಡದ ದುಃಸ್ಥಿತಿ ಕೇಳೋರಿಲ್ಲ. ಹೊಸ ಆಡಳಿತ ಮಂಡಳಿ ಬಂದರೂ ಯುವಕರ ತಂಡ ಸ್ವಂತ ಖರ್ಚು ನಿರ್ವಹಿಸಲೂ ಹೆಣಗಾಡುತ್ತಿದೆ.

 
ದಿನಭತ್ಯೆ ಸಿಗದೆ ದ್ರಾವಿಡ್ ಮತ್ತು ಅವರ ತಂಡ ಸ್ವಂತ ಜೇಬಿನಿಂದ ಖರ್ಚು ವೆಚ್ಚ ನೋಡಿಕೊಳ್ಳುವಂತಾಗಿದೆ.  ಆಟಗಾರರಿಗೆ ದಿನ ಭತ್ಯೆ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಚೆಕ್ ಗೆ ಸಹಿ ಹಾಕಬೇಕು. ಆದರೆ ಹಾಕುವವರಿಲ್ಲದೇ ಆಟಗಾರರಿಗೆ ಮತ್ತು ದ್ರಾವಿಡ್ ಗೆ ಸಂಬಳ ಸಿಕ್ಕಿಲ್ಲ.

ಸದ್ಯ ಇಂಗ್ಲೆಂಡ್ ವಿರುದ್ಧ ಸರಣಿ ಆಡುತ್ತಿರುವ ಅಂಡರ್ -19 ತಂಡ ಮುಂಬೈಯ ಐಷಾರಾಮಿ ಹೋಟೆಲ್ ನಲ್ಲಿ ಉಳಿದುಕೊಂಡಿದೆ. ಇವರ ಸಂಕಟ ಅವರ ಬಾಯಿಯಿಂದಲೇ ಕೇಳಬೆಕು. “ಪಂದ್ಯವಿರುವಾಗ ಮಧ್ಯಾಹ್ನ ಊಟವನ್ನು ಅಸೋಸಿಯೇಷನ್ ನೋಡಿಕೊಳ್ಳುತ್ತದೆ. ಬೆಳಗಿನ ಉಪಾಹಾರವನ್ನು ಹೋಟೆಲ್ ನೀಡುತ್ತದೆ. ಆದರೆ ರಾತ್ರಿಯ ಊಟವೇ ಕಷ್ಟವಾಗಿದೆ. ಈ ಐಷಾರಾಮಿ ಹೋಟೆಲ್ ನಲ್ಲಿ ಒಂದು ಸ್ಯಾಂಡ್ ವಿಚ್ ಗೆ 1500 ರೂ. ತೆರಬೇಕು.

ಹಣಕ್ಕೆ ಎಲ್ಲಿ ಹೋಗಬೇಕು? ಹಾಗಾಗಿ ಊಟಕ್ಕಾಗಿ ಹೊರಗೆ ಹೋಗದೆ ಬೇರೆ ದಾರಿಯಿಲ್ಲ” ಎಂದು ಆಟಗಾರರು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಪೋಷಕರು ನೀಡುವ ಹಣದಲ್ಲೇ ದೈನಂದಿನ ಖರ್ಚು ನಿಭಾಯಿಸುವ ಅವಸ್ಥೆ ಇವರದ್ದು. ಹಿಂದೆ ಬಹುಶಃ ಯಾವತ್ತೂ ಕ್ರಿಕೆಟಿಗರಿಗೆ ಇಂತಹ ಪರಿಸ್ಥಿತಿ ಎದುರಾಗಿರದು. ಆದರೆ ಬಿಸಿಸಿಐ ಆಡಳಿತದಲ್ಲಿ ಆದ ಬದಲಾವಣೆಯ ನಂತರ ಆಟಗಾರರು ಅದರ ಬಿಸಿ ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ICC World Test Championship 2025: ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸಿದ ದಕ್ಷಿಣ ಆಫ್ರಿಕಾ

ಮುಂದಿನ ಸುದ್ದಿ
Show comments