Select Your Language

Notifications

webdunia
webdunia
webdunia
webdunia

ದೆಹಲಿ ವಾಯುಮಾಲಿನ್ಯ: ಪರಿಸರ ಸಂರಕ್ಷಿಸಲು ವಿರಾಟ್ ಕೊಹ್ಲಿ ಮನವಿ

ದೆಹಲಿ ವಾಯುಮಾಲಿನ್ಯ: ಪರಿಸರ ಸಂರಕ್ಷಿಸಲು ವಿರಾಟ್ ಕೊಹ್ಲಿ ಮನವಿ
NewDelhi , ಮಂಗಳವಾರ, 8 ನವೆಂಬರ್ 2016 (10:40 IST)
ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾದ ಹಿನ್ನಲೆಯಲ್ಲಿ ಪರಿಸರ ಸಂರಕ್ಷಣೆಗೆ ಮುಂದಾಗಲು ಸಾರ್ವಜನಿಕರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.

ದೀಪಾವಳಿ ಹಬ್ಬದ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿತ್ತು. ಹೊಗೆಯಿಂದ ಕೂಡಿದ ವಾತಾವರಣವಿದ್ದು, ಕಣ್ಣುರಿ, ಅಸ್ತಮಾದಂತಹ ಆರೋಗ್ಯ ಸಮಸ್ಯೆಗಳೂ ಕಾಡುತ್ತಿದೆ. ಮಂಜು ಕವಿದಂತಹ ವಾತಾವರಣವಿದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ರಣಜಿ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ.

“ಇದೊಂದು ವಿಷಮ ಸ್ಥಿತಿ. ನಮ್ಮ ವಾತಾವರಣ ಸಂರಕ್ಷಣೆಗೆ ಮುಂದಾಗದಿದ್ದರೆ, ನಮ್ಮ ಮುಂದಿನ ಜನಾಂಗಕ್ಕೆ ಜೀವನ ಮಾಡುವುದೂ ಕಷ್ಟವಿದೆ.  ದೆಹಲಿ ವಾಸಿಗಳೆಲ್ಲಾ ಈ ವಿಷಯದಲ್ಲಿ ಒಂದಾಗೋಣ. ಬುದ್ಧಿವಂತಿಕೆಯಿಂದ ಪರಿಸರ ಸಂರಕ್ಷಣೆಗೆ ಮುಂದಾಗೋಣ” ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ವಿಡಿಯೋ ಸಂದೇಶವೊಂದನ್ನು ಅಪ್ ಲೋಡ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಶಾಂತ್ ಶರ್ಮಾ ವಿಕೆಟ್ ಕೀಳಲು ಕಲಿಯಬೇಕು ಎಂದ ಕಪಿಲ್ ದೇವ್