Webdunia - Bharat's app for daily news and videos

Install App

500 ಅಡಿ ಜಾಗಕ್ಕಾಗಿ ಮಿಥಾಲಿ ರಾಜ್ ರನ್ನು ಸತಾಯಿಸುತ್ತಿದೆಯಾ ಸರ್ಕಾರ?!

Webdunia
ಶನಿವಾರ, 29 ಜುಲೈ 2017 (08:54 IST)
ಹೈದರಾಬಾದ್: ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಯಶಸ್ವಿಯಾಗಿ ವಿಶ್ವಕಪ್ ಫೈನಲ್ ವರೆಗೆ ತಲುಪಿಸಿದ ನಾಯಕಿ ಮಿಥಾಲಿ ರಾಜ್ ಗೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ತವರಿನ ತೆಲಂಗಾಣ ಸರ್ಕಾರ ಮಾತ್ರ ಮಹಿಳಾ ಕ್ರಿಕೆಟ್ ಗೆ ಹೊಸದೊಂದು ದಿಕ್ಸೂಚಿ ನೀಡಿದ ತಾರೆಗೆ ಕನಿಷ್ಠ ಗೌರವವೂ ಕೊಡುತ್ತಿಲ್ಲವೇ?


ಇತರ ಮಹಿಳಾ ಆಟಗಾರರಿಗೆ ಅವರವರ ತವರು ರಾಜ್ಯಗಳ ಸರ್ಕಾರ ನಗದು ಬಹುಮಾನ, ನೌಕರಿ ಘೋಷಿಸಿ ಗೌರವ ತೋರಿಸಿದೆ. ಆದರೆ ಮಿಥಾಲಿಗೆ ತೆಲಂಗಾಣ ಸರ್ಕಾರ ಇದುವರೆಗೆ ಕನಿಷ್ಠ ಶುಭಾಷಯ ಹೇಳುವ ಪ್ರಯತ್ನವನ್ನೂ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಷ್ಟೇ ಅಲ್ಲ, 2005 ರ ವಿಶ್ವಕಪ್ ಫೈನಲ್ ತಲುಪಿದ್ದಕ್ಕೆ ಅಂದು ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ 500 ಚದರ ಅಡಿಯ ನಿವೇಶನ ಘೋಷಣೆ ಮಾಡಿದ್ದರು. ಆದರೆ ಮಿಥಾಲಿ ಪೋಷಕರು ಸಿಎಂ ಮತ್ತು ಅಧಿಕಾರಿಗಳ ಬಳಿಗೆ ಅಲೆದೂ ಅಲೆದು ಬೇಸತ್ತರೇ ಹೊರತು ನಿವೇಶನ ಸಿಕ್ಕಿಲ್ಲ ಎಂದು ಆಂಗ್ಲ ಪತ್ರಿಕೆಯೊಂದರಲ್ಲಿ ಆರೋಪಿಸಲಾಗಿದೆ.

ತೆಲಂಗಾಣ ಸರ್ಕಾರದ ವತಿಯಿಂದ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡಿದ್ದ ಪಿವಿ ಸಿಂಧು ಮತ್ತು ಸಾನಿಯಾ ಮಿರ್ಜಾಗೆ ಕೋಟಿಗಟ್ಟಲೆ ಹಣ, ನಿವೇಶನ ಸಿಕ್ಕಿರುವಾಗ ಮಿಥಾಲಿಗೆ ಮಾತ್ರ ಸುಣ್ಣ ಸವರುತ್ತಿರುವುದೇಕೆ ಎಂಬುದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

ಇದನ್ನೂ ಓದಿ..  ಗಂಡನಿಗೆ ಸೆಕ್ಸ್ ಒಲ್ಲೆನೆನ್ನುವುದೂ ಕಿರುಕುಳವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments