Webdunia - Bharat's app for daily news and videos

Install App

ಕೈ ಹಿಡಿದವನನ್ನೇ ಕೈ ಬಿಟ್ಟರಾ ಧೋನಿ

Webdunia
ಶನಿವಾರ, 10 ಸೆಪ್ಟಂಬರ್ 2016 (10:20 IST)
ಭಾರತ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕುರಿತು ತಯಾರಾಗುತ್ತಿರುವ ಸಿನಿಮಾ ನಿರ್ಮಾಣ ಹಂತದಲ್ಲೇ ದೊಡ್ಡ ಹವಾ ಎಬ್ಬಿಸಿದ ಚಿತ್ರ. ಸಿನಿಮಾ ಹೇಗಿರಬಹುದು? ಅದರಲ್ಲಿನ ಪ್ರತಿಯೊಂದು ಪಾತ್ರವನ್ನು ಹೇಗೆ ಚಿತ್ರಿಸಿರಬಹುದು ಎಂಬ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಇದೆ. ನಿರ್ಮಾಣಕ್ಕೆ ಖರ್ಚಾಗಿರೋದು 80 ಕೋಟಿಯಂತೆ. ಆದರೆ ಬಿಡುಗಡೆಗೂ ಮುನ್ನ 60 ಕೋಟಿ ಬಾಚಿಕೊಂಡಿದೆ ಈ ಚಿತ್ರ.
ಇಷ್ಟೊಂದು ಹವಾ ಎಬ್ಬಿಸಿರುವ 'ಧೋನಿ' 'ದಿ ಅನ್‍ಟೋಲ್ಡ್ ಸ್ಟೋರಿ’  ಚಿತ್ರದ ಟೇಲರ್ ಕಳೆದ ತಿಂಗಳು ಬಿಡುಗಡೆಯಾಗಿತ್ತು. ಅದನ್ನು ನೋಡಿದವರಿಗೆ ಸಿನಿಮಾದಲ್ಲಿ ಬಹುದೊಡ್ಡ ಸಂಗತಿಯೊಂದು ಮಿಸ್ ಆಗಿರುವುದು ಗಮನಕ್ಕೆ ಬಂದಿದೆ. ಆ ತಪ್ಪು ಧೋನಿ ಅವರಿಗೂ ಗೊತ್ತಿದೆ. ಅಷ್ಟೇ ಅಲ್ಲದೇ ಉದ್ದೇಶಪೂರ್ವಕವಾಗಿಯೇ ಅವರು ಈ ತಪ್ಪನ್ನು ಮಾಡಿದ್ದಾರೆ ಎಂದು ಸಹ ಸುದ್ದಿ ಹರಿದಾಡುತ್ತಿದೆ. 
 
ಹೌದು, ನೀರಜ್ ಪಾಂಡೆ ನಿರ್ದೇಶನದ ಧೋನಿ ಜೀವನಾಧಾರಿತ  ಸಿನಿಮಾದಲ್ಲಿ ಅವರ ಅಣ್ಣನ ಪಾತ್ರ ಮಿಸ್ ಆಗಿದೆ. ತಾವು ಈ ಮಟ್ಟಕ್ಕೆ ತಲುಪಲು ಕಾರಣಕರ್ತರಲ್ಲೊಬ್ಬರಾದ ಅಣ್ಣನ ಪಾತ್ರವನ್ನು  ಧೋನಿ ಉದ್ದೇಶಪೂರ್ವಕವಾಗಿಯೇ ಕೈ ಬಿಟ್ಟಿದ್ದಾರಾ ಎಂಬ ಅನುಮಾನ ಹೆಡೆ ಎತ್ತಿದೆ. 
 
ಧೋನಿ ಸಿನಿಮಾದಲ್ಲಿ  ತಂದೆ- ತಾಯಿ ಪಾತ್ರಕ್ಕೆ ಜೀವಕಳೆಯನ್ನು ತುಂಬಲಾಗಿದೆ. ತಂಗಿ ಪಾತ್ರಕ್ಕೂ ಸ್ವಾರಸ್ಯಕರ ಟಚ್ ನೀಡಲಾಗಿದೆ. ಅವರು ಸ್ಟಾರ್ ಕ್ರಿಕೆಟಿಗನಾಗಿರುವುದ ಹಿಂದೆ ತಂದೆ-ತಾಯಿ, ತಂಗಿಯಂತೆ ಅಣ್ಣನ ಪಾತ್ರವೂ ಇದೆ. ಆದರೆ ತಮ್ಮ ಯಶಸ್ಸಿನಲ್ಲಿ ಪೋಷಕರು, ತಂಗಿಯಷ್ಟೇ ಮಹತ್ವದ ಪಾತ್ರ ಹೊಂದಿರುವ ಅಣ್ಣ ನರೇಂದ್ರ ಸಿಂಗ್ ಪಾತ್ರವನ್ನು ಕೈ ಬಿಡಲಾಗಿದೆ. 
 
ಈ ದೊಡ್ಡ ತಪ್ಪು ಮೇಲ್ನೋಟಕ್ಕೆ ಧೋನಿ ಮತ್ತು ಅವರಣ್ಣನ ನಡುವಿನ ಬಾಂಧವ್ಯ ಸರಿಯಾಗಿಲ್ಲ ಅನ್ನುವುದನ್ನು ಸಾರಿ ಹೇಳುವಂತಿದೆ. ಮೊದಲು ಧೋನಿಯೊಂದಿಗೆ ರಾಂಚಿಯಲ್ಲಿದ್ದ ನರೇಂದ್ರ ಸಿಂಗ್ ಈಗ ತಮ್ಮ ಪತ್ನಿಯೊಂದಿಗೆ ಬೇರೆ ಕಡೆ ವಾಸಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಅಣ್ಣ- ತಮ್ಮನ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ರಾಂಚಿಯಲ್ಲೂ ಕೇಳಿ ಬರುತ್ತಿವೆ. 
 
ಈ ಹಿಂದೆ ಭಾರತೀಯ ಜನತಾ ಪಕ್ಷದಲ್ಲಿ ಕಾಣಿಸಿಕೊಂಡಿದ್ದ ನರೇಂದ್ರ ಸಿಂಗ್, ಬಳಿಕ ಸಮಾಜವಾದಿ ಪಕ್ಷವನ್ನು ಸೇರಿಕೊಂಡಿದ್ದಾರೆ.
ಅಣ್ಣ- ತಮ್ಮ ಬೇರೆಯಾಗೋಕೆ ಮನಸ್ತಾಪವೇ ಕಾರಣಾನಾ ಎಂಬ ಸಂಶಯ ಎದ್ದಿದೆ. ಅಣ್ಣನ ಮೇಲೆ ಕೋಪವಿರುವುದರಿಂದಲೇ ತಮ್ಮ ಜೀವನಾಧಾರಿತ ಸಿನಿಮಾದಲ್ಲಿ ಧೋನಿ ಅಣ್ಣನನ್ನು ತೋರಿಸಿಲ್ಲ ಎಂದು ಹೇಳಲಾಗುತ್ತಿದೆ. ಏನೇ ಇರಲಿ ಧೋನಿ ಅವರೆಸಗಿರುವ ಈ ಪ್ರಮಾದಕ್ಕೆ ಬಹಳ ಅಸಮಾಧಾನ ವ್ಯಕ್ತವಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಪಂದ್ಯ ಪುನರ್‌ ಆರಂಭಗೊಳ್ಳುತ್ತಿದ್ದ ಹಾಗೇ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

Rohit Sharma:ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಗಾಟಿಸಿದ ವಿಶೇಷ ವ್ಯಕ್ತಿಗಳು ಯಾರು ವಿಡಿಯೋ ನೋಡಿ

Pakistan, India: ಭಾರತ-ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ ಬಾಂಗ್ಲಾದೇಶದ ಪಾಕಿಸ್ತಾನ ಪ್ರವಾಸ ರದ್ದಾಗುವ ಸಾಧ್ಯತೆ

IPL 2025: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಮ್ ಡೇವಿಡ್ ನೀರಾಟ, Video Viral

Virat Kohli: ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಶಾಕಿಂಗ್ ಸತ್ಯ ರಿವೀಲ್ ಮಾಡಿದ ರವಿಶಾಸ್ತ್ರಿ

ಮುಂದಿನ ಸುದ್ದಿ
Show comments