Webdunia - Bharat's app for daily news and videos

Install App

ಜಿಂಬಾಬ್ವೆ ಸರಣಿಯನ್ನು ಸವಾಲಾಗಿ ಸ್ವೀಕರಿಸಿರುವ ಧೋನಿ

Webdunia
ಬುಧವಾರ, 8 ಜೂನ್ 2016 (12:17 IST)
ಮಹೇಂದ್ರ ಸಿಂಗ್ ಧೋನಿ ಜಿಂಬಾಬ್ವೆ ವಿರುದ್ಧ ಮುಂಬರುವ ಸರಣಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಐಪಿಎಲ್‌ನಲ್ಲಿ ತಮ್ಮ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು 7ನೇ ಸ್ಥಾನದಲ್ಲಿರಿಸಿರುವ ಮೂಲಕ ನೀರಸ ಪ್ರದರ್ಶನ ನೀಡಿದ್ದ ಧೋನಿ, ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ತಾವಿನ್ನೂ ಶ್ರೇಷ್ಟ ನಾಯಕ ಎಂಬ ನಂಬಿಕೆ ಬಲಪಡಿಸಲು ಜಿಂಬಾಬ್ವೆ ತಂಡವನ್ನು ಎದುರಿಸುತ್ತಿದ್ದಾರೆ.
 
 ಜಿಂಬಾಬ್ವೆ ವಿರುದ್ಧ ಅನುಭವ ಭಿನ್ನವಾಗಿರುತ್ತದೆ. ಕೆಲವು ಆಟಗಾರರ ಜತೆ ತಾವು ಮೊದಲ ಬಾರಿಗೆ ಆಡುತ್ತಿದ್ದೇನೆ. ತಂಡದ ಸಂಯೋಜನೆ ಉತ್ತಮವಾಗಿ ಕಾಣುತ್ತಿದೆ ಎಂದು ಹೊಸ ಕೇಶಶೈಲಿ ಪ್ರದರ್ಶಿಸುತ್ತಾ ಧೋನಿ ಹೇಳಿದರು. 
 
 2016ರ ಉತ್ತರಾರ್ಧದಲ್ಲಿ ಮತ್ತು 2017ರ ಮೊದಲಾರ್ಧದಲ್ಲಿ ಸೀಮಿತ ಓವರುಗಳ ಕ್ರಿಕೆಟ್ ಆಡುವ ನಿರೀಕ್ಷೆಯನ್ನು ಭಾರತ ಹೊಂದಿಲ್ಲ. ಎಲ್ಲಾ ಮಾದರಿಗಳ ಆಟಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಕಡೆ ಅಲೆ ಬೀಸುತ್ತಿರುವ ಸಂದರ್ಭದಲ್ಲಿ ಧೋನಿಗೆ ಜಿಂಬಾಬ್ವೆ ಸರಣಿ ಮೂಲಕ ತಮ್ಮ ನಾಯಕತ್ವ ವಿಶ್ವಾಸಾರ್ಹತೆ ಸಾಬೀತು ಮಾಡಲು ಸೀಮಿತ ಅವಕಾಶ ಸಿಕ್ಕಿದೆ.
 
 ಭಾರತ 2016-17ರಲ್ಲಿ 12ಕ್ಕೂ ಹೆಚ್ಚು ಪಂದ್ಯಗಳನ್ನು ಆಡಲಿದೆ. ಐದು ದಿನಗಳ ಮಾದರಿ ಆಟದಿಂದ ನಿವೃತ್ತರಾದ ಧೋನಿ ಸುದೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ. ತಾವು ದೇಶಕ್ಕಾಗಿ ಆಡುತ್ತಿರುವುದು ದೊಡ್ಡ ಪ್ರೇರಕ ಶಕ್ತಿಯಾಗಿದೆ. ಫಿಟ್ನೆಸ್ ನನಗೆ ವಿಷಯವಾಗಿಲ್ಲ. ನಾನು ಮಾಡುವ ಕೆಲಸದಲ್ಲಿ ಫಿಟ್ ಆಗಿದ್ದೇನೆ ಎಂದು ಧೋನಿ ಮುಂಬೈನಲ್ಲಿ ಧೋನಿ ವರದಿಗಾರರಿಗೆ ತಿಳಿಸಿದರು.  ಮೊದಲ ಏಕದಿನ ಪಂದ್ಯವನ್ನು ಜೂನ್ 11 ರಂದು ಹರಾರೆಯಲ್ಲಿ ಆಡಲಾಗುತ್ತದೆ.
 
ಯುಕೆಯಲ್ಲಿ ನಡೆಯುವ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೇಲೆ ಧೋನಿ ಕಣ್ಣಿರಿಸಿದ್ದು, ಭಾರತ ಹಾಲಿ ಚಾಂಪಿಯನ್ನರಾಗಿದ್ದು, ಇನ್ನೊಂದು ವಿಶ್ವಕ್ರಿಕೆಟ್ ಕೂಟದಲ್ಲಿ ಭಾರತವನ್ನು ಮುನ್ನಡೆಸಲು ಧೋನಿ ಆಸಕ್ತರಾಗಿದ್ದಾರೆ.
 ಭಾರತ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಮತ್ತು 1998ರ ವಿಜೇತ ತಂಡ ದಕ್ಷಿಣ ಆಫ್ರಿಕಾ ಜತೆಯಲ್ಲಿದೆ. ಭಾರತ ಜೂನ್ 4ರಂದು ಎಜ್‌ಬಾಸ್ಟನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಅರ್ಷ್ ದೀಪ್ ಸಿಂಗ್ ಗೆ ಗಾಯ, ಜಸ್ಪ್ರೀತ್ ಬುಮ್ರಾ ಆಡುವುದು ಅನಿವಾರ್ಯ

IND vs ENG: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಆ್ಯಂಡ್ರೆ ರಸೆಲ್

IND vs ENG: ರಿಷಭ್ ಪಂತ್ ಗಾಯ ಹೇಗಿದೆ, ಮುಂದಿನ ಪಂದ್ಯದಲ್ಲಿ ಆಡ್ತಾರಾ

ಮೂರನೇ ಟೆಸ್ಟ್‌ನ ಕೊನೆಯಲ್ಲಿ ಸಿರಾಜ್‌ ಔಟಾದಾಗ ಏನನ್ನಿಸಿತು: ಶುಭಮನ್‌ ಗಿಲ್‌ಗೆ ಕಿಂಗ್ಸ್‌ ಚಾರ್ಲ್ಸ್‌ ಪ್ರಶ್ನೆ

ಮುಂದಿನ ಸುದ್ದಿ
Show comments