ರಾಹುಲ್ ದ್ರಾವಿಡ್ ಗರಡಿಯ ಮತ್ತೊಬ್ಬ ಹುಡುಗ ಟೀಂ ಇಂಡಿಯಾಗೆ

Webdunia
ಭಾನುವಾರ, 2 ಸೆಪ್ಟಂಬರ್ 2018 (08:21 IST)
ಮುಂಬೈ: ಏಷ್ಯಾ ಕಪ್ ಆಡಲಿರುವ ಟೀಂ ಇಂಡಿಯಾ ತಂಡದಲ್ಲಿ ಈ ಬಾರಿ ಖಲೀಲ್ ಅಹಮ್ಮದ್ ಎಂಬ ಹೊಸ ಪ್ರತಿಭೆಗೆ ಅವಕಾಶ ನೀಡಲಾಗಿದೆ.

ಭಾರತ ಎ ತಂಡದಲ್ಲಿ ರಾಹುಲ್ ದ್ರಾವಿಡ್ ತರಬೇತಿಯಲ್ಲಿ ಪಳಗಿದ ಖಲೀಲ್ ಇದೀಗ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿಗೆ ಮತ್ತೊಬ್ಬ ದ್ರಾವಿಡ್ ಶಿಷ್ಯ ಟೀಂ ಇಂಡಿಯಾ ಸೇರಿಕೊಂಡಂತಾಗಿದೆ.

ಟೀಂ ಇಂಡಿಯಾಕ್ಕೆ ಆಯ್ಕೆಯಾದ ಬೆನ್ನಲ್ಲೇ ತಮ್ಮ ಯಶಸ್ಸಿಗೆ ರಾಹುಲ್ ದ್ರಾವಿಡ್ ಕಾರಣ ಎಂದು ಖಲೀಲ್ ಹೆಮ್ಮೆಯಿಂದಲೇ ಹೇಳಿಕೊಂಡಿದ್ದಾರೆ. ‘ನಾನು ದ್ರಾವಿಡ್ ಸರ್ ಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಕಳೆಗುಂದಿದ್ದ ನನ್ನ ವೃತ್ತಿ ಜೀವನದಲ್ಲಿ ಆತ್ಮವಿಶ್ವಾಸ ತುಂಬಿ ಹೊಸ ವೃತ್ತಿ ಜೀವನ ಒದಗಿಸಿದವರು ಅವರು. ನಾನು ಅಂದು ಭಯದಿಂದಲೇ ತಪ್ಪುಗಳನ್ನು ಮಾಡುತ್ತಿದ್ದೆ. ಆದರೆ ದ್ರಾವಿಡ್ ಸರ್ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು’ ಎಂದು ಖಲೀಲ್ ಗುರು ದ್ರಾವಿಡ್ ಗೆ ಧನ್ಯವಾದ ಅರ್ಪಿಸಿದ್ದಾರೆ.

ವೇಗದ ಬೌಲರ್ ಆಗಿರುವ ಖಲೀಲ್ ಗೆ ಟೀಂ ಇಂಡಿಯಾದ ದಿಗ್ಗಜ ವೇಗಿ ಜಹೀರ್ ಖಾನ್ ರಂತೆ ಆಗುವ ಕನಸಿದೆಯಂತೆ. ಒಂದು ವೇಳೆ ಖಲೀಲ್ ಟೀಂ ಇಂಡಿಯಾದಲ್ಲಿ ಯಶಸ್ವಿಯಾದರೆ ಗುರು ದ್ರಾವಿಡ್ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ- ಅಫ್ಗಾನಿಸ್ತಾನ ಟೆಸ್ಟ್‌: ಸುತಾರ್‌, ವಾಷಿಂಗ್ಟನ್‌ ಮೋಡಿ, ಇನಿಂಗ್ಸ್‌ ಗೆಲುವಿನತ್ತ ಟೀಂ ಇಂಡಿಯಾ

Video: ಕನಸಿನ ಡೆಬ್ಯೂಟ್ ಪಡೆದ ಮಾನವ್ ಸುತಾರ್: ಇದೊಂದು ಬಾಲ್ ಅಂತೂ ಅದ್ಭುತ ಎಂದ ಫ್ಯಾನ್ಸ್

ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರೂ ಟಿ20ಗೆ ರಜತ್‌ಗಿಲ್ಲ ಎಂಟ್ರಿ, ಕೈಬಿಟ್ಟಿದ್ದಕ್ಕೆ ಅಜಿತ್ ಅಗರ್ಕರ್ ಕಾರಣ ಕೊಟ್ಟಿದ್ದು ಹೀಗೇ

ಈ ವಿಚಾರಕ್ಕೆ ನಾನು ವಿರಾಟ್ ಕೊಹ್ಲಿಯ ಅಭಿಮಾನಿಯಾಗಿದ್ದೆ: ವೈಭವ್ ಸೂರ್ಯವಂಶಿ ಹೇಳಿದ್ದು ಹೀಗೆ, Video

ಐ‍ಪಿಎಲ್‌ನಲ್ಲಿ ಕಳಪೆ ಪ್ರದರ್ಶನದ ಬಳಿಕ ಲಯಕ್ಕೆ ಮರಳಿದ ರಿಷಬ್ ಪಂತ್‌

ಮುಂದಿನ ಸುದ್ದಿ
Show comments