Webdunia - Bharat's app for daily news and videos

Install App

ತ್ರಿಶತಕ ಗಳಿಸಿದ ಮೇಲೆ ಮೊದಲಿನ ಹಾಗೆ ಓಡಾಡಲಾಗುತ್ತಿಲ್ಲವಂತೆ ಕನ್ನಡಿಗ ಕರುಣ್ ನಾಯರ್ ಗೆ!

Webdunia
ಶುಕ್ರವಾರ, 20 ಜನವರಿ 2017 (09:45 IST)
ಬೆಂಗಳೂರು: ಅದೇನು ಅದೃಷ್ಟವೋ, ದುರಾದೃಷ್ಟವೋ ಒಂದೂ ಅರಿಯೇ ಎನ್ನುತ್ತಿದ್ದಾರೆ ಕ್ರಿಕೆಟಿಗ ಕರುಣ್ ನಾಯರ್. ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ಮೇಲೆ ಅವರಿಗೆ ಈಗ ಮೊದಲಿನ ಹಾಗೆ ಬೀದಿಯಲ್ಲಿ ಓಡಾಡಲಾಗುತ್ತಿಲ್ಲವಂತೆ.


ಕಾರಣ ಎಲ್ಲರಿಗೂ ಈಗ ಅವರನ್ನು ಚೆನ್ನಾಗಿ ಪರಿಚಯವಾಗಿದೆ. ಹೀಗಾಗಿ ಅವರು ಸಾರ್ವಜನಿಕವಾಗಿ ಓಡಾಡುತ್ತಿದ್ದರೆ, ಎಲ್ಲರೂ ಕರುಣ್ ಎಂದು ಮಾತನಾಡಿಸುತ್ತಾರೆ. ಮೊದಲಿಗಿಂತ ಜಾಸ್ತಿ ಜನ ನನ್ನನ್ನು ಗುರುತಿಸುತ್ತಿದ್ದಾರೆ ಎಂದು ಕರುಣ್ ಹೇಳಿಕೊಂಡಿದ್ದಾರೆ.

ಸದ್ಯ ಇರಾನಿ ಟ್ರೋಫಿಯಲ್ಲಿ ಶೇಷ ಭಾರತ ತಂಡದ ಪರ ಆಡಲಿರುವ ಕರುಣ್ ತಮ್ಮ ಜೀವನ ತ್ರಿಶತಕದ ನಂತರ ಬೇರೆ ಯಾವ ರೀತಿಯಲ್ಲೂ ಬದಲಾಗಿಲ್ಲ. ನಾನು ಮೊದಲು ಹೇಗಿದ್ದೆ ಈಗಲೂ ಹಾಗೇ ಇದ್ದೇನೆ ಎಂದಿದ್ದಾರೆ.

ಅಂದು ನಾನು ಬ್ಯಾಟಿಂಗ್ ಮಾಡಿದ್ದನ್ನು ನೋಡಿ ತಂಡದಲ್ಲಿದ್ದವರೆಲ್ಲಾ ಬೆನ್ನು ತಟ್ಟಿದ್ದರು. ಮುಂದೆಯೂ ಹೀಗೇ ಆಡು ಎಂದರು. ಅದು ನನಗೆ ಸ್ಪೂರ್ತಿ. ಮನೆಗೆ ಬಂದ ಮೇಲೂ ವಿಶೇಷವಾಗಿ ತ್ರಿಶತಕದ ಸಂಭ್ರಮ ಆಚರಿಸಲಿಲ್ಲ. ನಾನು ಹೇಗಿದ್ದೇನೋ, ಹಾಗೇ ಇರಲು ಬಯಸುತ್ತೇನೆ ಎಂದಿದ್ದಾರೆ ಕರುಣ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಭವ್‌ ಸೂರ್ಯವಂಶಿಯ ಹಾದಿಯಲ್ಲಿ ಸ್ನೇಹಿತ ಅಯಾನ್‌ ರಾಜ್‌: ತ್ರಿಶತಕ ಸಿಡಿಸಿದ ಬಿಹಾರದ 13ರ ಪೋರ

ಭಾರತ, ಇಂಗ್ಲೆಂಡ್ ಸರಣಿಗೆ ನನ್ನ ಹೆಸರಿಡಬೇಡಿ ಎಂದ ಸಚಿನ್ ತೆಂಡುಲ್ಕರ್: ಕಾರಣ ಕೇಳಿದ್ರೆ ಹೆಮ್ಮೆ

Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

ಲಂಡನ್‌ನಿಂದ ತುರ್ತಾಗಿ ವಾಪಸಾದ ಗೌತಮ್‌ ಗಂಭೀರ್‌: ವಿವಿಎಸ್​ ಲಕ್ಷ್ಮಣ್‌ಗೆ ಹೊಸ ಜವಾಬ್ದಾರಿ ನೀಡಲು ಚಿಂತನೆ

ಎಬಿಡಿ ವಿಲಿಯರ್ಸ್ ಗೆ ಒಂದೇ ತಿಂಗಳಲ್ಲಿ ಡಬಲ್ ಧಮಾಕ

ಮುಂದಿನ ಸುದ್ದಿ
Show comments