Webdunia - Bharat's app for daily news and videos

Install App

ಸೆಮಿಫೈನಲ್ ಸೋತಿದ್ದಕ್ಕೆ ಧೋನಿಗೆ ಧನ್ಯವಾದ ಅರ್ಪಿಸಿ 1000 ರೂಪಾಯಿ ಬಹುಮಾನ ನೀಡಿದ ಐಪಿಎಸ್ ಅಧಿಕಾರಿ

Webdunia
ಸೋಮವಾರ, 30 ಮಾರ್ಚ್ 2015 (17:08 IST)
ವಿಶ್ವಕಪ್ ಪಂದ್ಯದುದ್ದಕ್ಕೂ ಅಭೂತಪೂರ್ವ ಪ್ರದರ್ಶನ ನೀಡಿ ಸೆಮಿಫೈನಲ್‌ನಲ್ಲಿ ಹೀನಾಯವಾಗಿ ಸೋತು ಮರಳಿದ ಭಾರತ ತಂಡಕ್ಕೆ ಅಭಿಮಾನಿಗಳು ಮನಬಂದಂತೆ ಟೀಕಿಸುತ್ತಿದ್ದಾರೆ.  ಕಾಂಗರೂಗಳು ಭಾರತೀಯರನ್ನು 95 ರನ್‌ಗಳಿಂದ ಬಗ್ಗು ಬಡಿದ ನಂತರ ಕೆಲವರು ತಮ್ಮ ಟಿವಿಯನ್ನು ಸಹ ಒಡೆದು ಹಾಕಿದ ವರದಿಯಾಗಿತ್ತು. 

ಆದರೆ ಉತ್ತರಪ್ರದೇಶದ ಐಜಿ ಅಮಿತಾಭ್ ಥಾಕೂರ್ ಅಧಿಕಾರಿ ಪಂದ್ಯ ಸೋತಿದ್ದಕ್ಕಾಗಿ ಧೋನಿಗೆ 1000 ರೂಪಾಯಿಗಳ ಚೆಕ್‌ನ್ನು ಬಹುಮಾನವಾಗಿ ಕಳುಹಿಸಿದ್ದಾರೆ. ಅಲ್ಲದೇ ಕೂಲ್ ಕ್ಯಾಪ್ಟನ್‌ಗೆ ಒಂದು ಪತ್ರವನ್ನು ಸಹ ಕಳುಹಿಸಿದ್ದಾರ. ತಮ್ಮ ಕೃತ್ಯವನ್ನು ಸಮರ್ಥಸಿಕೊಂಡಿರುವ ಅವರು, "ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯವನ್ನು ನೋಡುವ ಆಸಕ್ತಿಯನ್ನು ತೋರುವುದಿಲ್ಲ. ಇದರಿಂದ ಅವರ ಹಣದ ಉಳಿತಾಯವಾಗುತ್ತದೆ", ಎಂದಿದ್ದಾರೆ. 
 
ಐಜಿ ಸಿವಿಲ್ ಡಿಫೆನ್ಸ್ ಐಪಿಎಸ್ ಅಧಿಕಾರಿ ಅಮಿತಾಭ್ ಥಾಕೂರ್  ಧೋನಿಯವರ ರಾಂಚಿಯ ನಿವಾಸಕ್ಕೆ 1,000 ರೂಪಾಯಿಗಳನ್ನು  ಕಳುಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸುತ್ತಿದ್ದ ಅವರು "ಕ್ರಿಕೆಟ್ ಪಂದ್ಯ ವೀಕ್ಷಣೆಗಾಗಿ ಹಲವು ಸರಕಾರಿ ಅಧಿಕಾರಿಗಳು  ಆ ದಿನ ಕೆಲಸಕ್ಕೆ ರಜೆ ಹಾಕಿದ್ದರು. ಇದು ದೇಶದ ಹಿತದೃಷ್ಟಿಯಿಂದ ಸೂಕ್ತವಲ್ಲ. ಆದರೆ ಪಂದ್ಯ ಸೋತ ಭಾರತ ತಂಡ ಮುಂದಿನ ಹಂತಕ್ಕೆ ಆಡಲು ಅರ್ಹತೆ ಗಳಿಸದೆ ತಾಯ್ನಾಡಿಗೆ ಮರಳಿತು. ಹಾಗಾಗಿ ಭಾರತೀಯರು ಫೈನಲ್ ಪಂದ್ಯ ವೀಕ್ಷಿಸುವ ಆಸಕ್ತಿ ಕಳೆದುಕೊಂಡರು. ಇದರಿಂದ ಹಣ ಮತ್ತು ಸಮಯದ ಉಳಿತಾಯವಾಯಿತು. ಆದ್ದರಿಂದ ಈ ಚೆಕ್ ಧನ್ಯವಾದ ತೋರ್ಪಡಿಸಲು ಕಳುಹಿಸಿರುವ ಚೆಕ್", ಎಂದಿದ್ದಾರೆ. 

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments