Webdunia - Bharat's app for daily news and videos

Install App

ಗುಜರಾತ್ ಲಯನ್ಸ್ ವಿರುದ್ದ ಆಡಿದ ಜೂಜು ಫಲಪ್ರದವಾಯಿತು: ಡಿ ವಿಲಿಯರ್ಸ್

Webdunia
ಶುಕ್ರವಾರ, 27 ಮೇ 2016 (13:58 IST)
ಐಪಿಎಲ್ ಕ್ವಾಲಿಫೈಯರ್ ಒಂದರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ತಾವು ಆಡಿದ ಜೂಜು ಫಲಪ್ರದವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮಾರ್ಮಿಕವಾಗಿ ಹೇಳಿದ್ದಾರೆ. ತಾವು ಬ್ಯಾಟಿಂಗ್ ಆಡುವಾಗ ಕೊಹ್ಲಿ ಸಂದೇಶವನ್ನು ಕಳಿಸಿ, ಅರೆಕಾಲಿಕ ವೇಗಿ ಡ್ವೇನ್ ಸ್ಮಿತ್ ಬೌಲಿಂಗ್‌‌‌ ಬೆನ್ನಟ್ಟುವಂತೆ ಸೂಚಿಸಿದ್ದು, ಈ ಜೂಜು ಫಲ ನೀಡಿತು ಎಂದು ಡಿ ವಿಲಿಯರ್ಸ್ ಹೇಳಿದರು. 
 
ಒಂದು ಹಂತದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿರುತ್ತದೆ. ಮಳೆಯ ಅಪಾಯವನ್ನು ಮನಗಂಡ ವಿರಾಟ್ ಕೊಹ್ಲಿ 15ನೇ ಓವರಿನಲ್ಲಿ ಡ್ವೇನ್ ಸ್ಮಿತ್ ಬೌಲಿಂಗ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಆಡುವಂತೆ ಸೂಚಿಸಿದ್ದರು. ಆ ಓವರಿನಲ್ಲಿ 14 ರನ್‌ಗಳಿಂದ ಆಟ ನಮ್ಮ ಕಡೆಗೆ ತಿರುಗಿತು ಎಂದು ಎಬಿ ಹೇಳಿದರು. 
 
ಮೇಲಿನ ಕ್ರಮಾಂಕದ ಆಘಾತಕಾರಿ ಕುಸಿತದ ನಡುವೆಯೂ, ನಾನು ಆಟದ ದಿಕ್ಕನ್ನು ಬದಲಿಸುವ ವಿಶ್ವಾಸದಲ್ಲಿದ್ದೆ. ಚೆಂಡು ತನಗೆ ಚೆನ್ನಾಗಿ ಕಾಣುತ್ತಿದ್ದು, ಅದೊಂದು ಒಳ್ಳೆಯ ಲಕ್ಷಣವಾಗಿತ್ತು ಎಂದು ಡಿವಿಲಿಯರ್ಸ್ ಹೇಳಿದರು. 
 
ಆರ್‌ಸಿಬಿ 68 ರನ್ನಿಗೆ 6 ವಿಕೆಟ್ ಕಳೆದುಕೊಂಡ ಬಳಿಕ, ಎಬಿ ಅಜೇಯ 79 ರನ್ ಬಾರಿಸುವ ಮೂಲಕ ಇಕ್ಬಾಲ್ ಅಬ್ದುಲ್ಲಾ ಜತೆ 91 ರನ್ ಜತೆಯಾಟದೊಂದಿಗೆ ಆರ್‌ಸಿಬಿಗೆ ಗೆಲುವನ್ನು ದಕ್ಕಿಸಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments