ಭಾರತದ ಹೊಸ ಕೋಚ್ ಬೇಟೆ ನಿರೀಕ್ಷೆಗಿಂತ ಬೇಗ ಮುಗಿಯುವಂತೆ ಕಾಣುತ್ತಿದ್ದು, ಗುರುವಾರ ಸಂಜೆಯೊಳಗೆ ಹೊಸ ಹೆಡ್ ಕೋಚ್ ಘೋಷಣೆಯನ್ನು ಮಾಡುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕುರ್ ಖಚಿತಪಡಿಸಿದ್ದಾರೆ. ಬಿಸಿಸಿಐನ ಮೊದಲ ವಾರ್ಷಿಕ ಸಮಾವೇಶದಲ್ಲಿ ಧರ್ಮಶಾಲಾದಲ್ಲಿರುವ ಠಾಕುರ್ ಗುರುವಾರ ಬೆಳಿಗ್ಗೆ ಈ ವಿಷಯ ತಿಳಿಸಿದ್ದಾರೆ.
ಮಾಜಿ ಸ್ಟಾರ್ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ಲಕ್ಷ್ಮಣ್ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಸಂಜಯ್ ಜಗದಾಲೆ ನೇತೃತ್ವದಲ್ಲಿ ಭಾರತದ ಕೋಚ್ ಆಯ್ಕೆಯ ಹೊಣೆ ವಹಿಸಿಕೊಂಡಿದ್ದಾರೆ.
ಸಂದರ್ಶನ ಪ್ರಕ್ರಿಯೆನ್ನು ಸಮಿತಿಯು ಮುಗಿಸಿದ್ದು, ಶುಕ್ರವಾರ ಬೆಳಿಗ್ಗೆವರೆಗೆ ತಮ್ಮ ವರದಿ ನೀಡಲು ಕಾಲಾವಕಾಶ ಬೇಕೆಂದು ಕೋರಿದ್ದರು. ಆದರೆ ನಿರೀಕ್ಷೆಗಿಂತ ಬೇಗ ಈ ಪ್ರಕ್ರಿಯೆ ಮುಗಿಯುವಂತೆ ಕಾಣುತ್ತಿದೆ.
ಮಾಜಿ ಸ್ಪಿನ್ನರ್, ಕರ್ನಾಟಕದ ಅನಿಲ್ ಕುಂಬ್ಳೆ ಹುದ್ದೆಯನ್ನು ವಹಿಸಿಕೊಳ್ಳಲು ಮುಂಚೂಣಿಯಲ್ಲಿದ್ದು, ಬಿಸಿಸಿಐ ಪ್ರಭಾವಶಾಲಿ ವ್ಯಕ್ತಿ ರವಿಶಾಸ್ತ್ರಿ ಅವರನ್ನು ಬದಿಗಿರಿಸಿ ಕುಂಬ್ಳೆಯನ್ನು ಬೆಂಬಲಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.