ಜೀವಂತವಿರುವುದೇ ದೊಡ್ಡ ವಿಷಯ ಎಂದ ಯುವರಾಜ್ ಸಿಂಗ್

Webdunia
ಗುರುವಾರ, 15 ಜೂನ್ 2017 (11:01 IST)
ಲಂಡನ್: ಕ್ರಿಕೆಟಿಗ ಯುವರಾಜ್ ಸಿಂಗ್ ಯಾವ ಸಿನಿಮಾ ಕತೆಗೂ ಕಮ್ಮಿಯಿಲ್ಲ. ಅಷ್ಟರ ಮಟ್ಟಿಗೆ ಏಳು ಬೀಳು ಕಂಡ ಯುವಿ ಇಂದು 300 ನೇ ಪಂದ್ಯವಾಡುತ್ತಿದ್ದಾರೆ. ಇದಕ್ಕಿಂತ ದೊಡ್ಡದು ಕ್ರಿಕೆಟಿಗನಿಗೆ ಇನ್ನೇನು ಬೇಕು ಎಂದರೆ ಅವರು ಹೇಳುವುದೇ ಬೇರೆ.

 
ಏಕದಿನ ಪಂದ್ಯದಲ್ಲಿ 300 ಪಂದ್ಯವಾಡಿದ್ದೀರಿ. ಆದರೆ ಟೆಸ್ಟ್ ಮಾದರಿಯಲ್ಲಿ ಇನ್ನೂ ನಿಮ್ಮ ದಾಖಲೆಗಳು ಕಳಪೆಯಾಗಿದೆಯಲ್ಲಾ ಎಂದರೆ ಅವರು ಹೇಳುವ ಉತ್ತರ ಅರೆಕ್ಷಣ ನಿಮ್ಮ ಬಾಯಿ ಮುಚ್ಚಿಸಬಹುದು.

‘ಇಂದು ನಾನು ಜೀವಂತವಾಗಿದ್ದೇನಲ್ಲ. ನನ್ನ ಜೀವ ಮರಳಿ ಸಿಕ್ಕಿದೆಯಲ್ಲಾ? ಅದಕ್ಕಿಂತ ದೊಡ್ಡದು ಇನ್ನೇನು ಬೇಕು ನನಗೆ?’ ಎಂದು ಪ್ರಶ್ನಿಸುತ್ತಾರೆ. 2011 ರ ವಿಶ್ವಕಪ್ ಗೆಲುವಿನ ರೂವಾರಿಯಾಗಿದ್ದ ಯುವಿ ನಂತರ ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾಗಿ ಹಲವು ದಿನ ಮೈದಾನದಿಂದ ದೂರವಿದ್ದರು.

ಅವರು ಜೀವ ಉಳಿಸಿಕೊಂಡಿದ್ದೇ ದೊಡ್ಡದು. ಸಾವಿನೊಂದಿಗೆ ಸೆಣಸಾಡಿ ಗೆದ್ದ ವೀರ ಯುವಿ. ಅದೆಷ್ಟೋ ಜನ ಕ್ಯಾನ್ಸರ್ ಪೀಡಿತರಿಗೆ ಆದರ್ಶವಾದವರು. ಆ ದಿನಗಳಿಂದ ಪಾರಾಗಿ ಮತ್ತೆ ಕಣಕ್ಕಿಳಿಯಲು ಸಾಧ್ಯವಾಗಿದ್ದೇ ದೊಡ್ಡ ಪವಾಡ ಎಂದು ಅವರು ಹೇಳಿದ್ದಾರೆ.

ನನಗೆ ನಂಬರ್ ಮುಖ್ಯವಲ್ಲ. 300 ನೇ ಪಂದ್ಯವಾಡುತ್ತಿದ್ದೇನೆಂಬುದು ನನ್ನ ಮನಸ್ಸಲ್ಲಿಲ್ಲ. ಇಂದು ತಂಡಕ್ಕಾಗಿ ಏನು ಕೊಡುಗೆ ನೀಡಬಲ್ಲೆ ಎನ್ನುವುದಷ್ಟೇ ನನ್ನ ಮನಸ್ಸಲ್ಲಿದೆ. ಎಲ್ಲಿಯವರೆಗೆ ನನಗೆ ಸಾಧ್ಯವೋ ಅಲ್ಲಿಯವರೆಗೆ ನಿವೃತ್ತನಾಗದೇ ಕ್ರಿಕೆಟ್ ಆಡುತ್ತಿರುತ್ತೇನೆ ಎಂದಿದ್ದಾರೆ ಯುವಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನನ್ನೂ ಇದ್ದೂ ಇಲ್ಲದಂತೆ ಸೈಡ್ ಲೈನ್ ಮಾಡುತ್ತಿದ್ದಾರಾ ಗಂಭೀರ್

Video: ಮೆಸ್ಸಿಯನ್ನು ನೋಡಲು ಬಿಡಲಿಲ್ಲ ಎಂದು ನಮ್ಮದೇ ಫುಟ್ಬಾಲ್ ಮೈದಾನವನ್ನು ಪುಡಿಗಟ್ಟಿದ ಯುವಕರು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ಮುಂದಿನ ಸುದ್ದಿ
Show comments